ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೫

ಈ ಪುಟವನ್ನು ಪರಿಶೀಲಿಸಲಾಗಿದೆ
೭೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಪ್ರಾಣರಕ್ಷಣೆಯ ವಿಷಯದಲ್ಲಿ ನಂಬಿಗೆಯನ್ನಿತ್ತಿದ್ದ ಸಭಾಸದರ ಹೀನಸ್ಥಿತಿಯನ್ನು ಕಂಡ ಮೇಲಂತೂ, ಬಾದಶಹನಿಗೆ ಅತಿಶಯ ನಗೆಯು ಬಂತು ಎಲ್ಲವೃತ್ತಾಂತವನ್ನು ಕೇಳಿದಮೇಲೆ ಕವಿ ಗಂಗನಿಗೆ ಕ್ಷಮಿಸಿ ಬಿಟ್ಟನು. ಮೃ ತ್ಯುವಿನ ಬದಲು ಪಾರಿತೋಷಕವು ಸಿಕ್ಕಿತು. ಅಗ ಬಾದಶಹನು ಅನ್ನುತ್ತಾನೆ, "ಕವಿರಾಜ ! ಇನ್ನು ಮೇಲಾದರೂ, ಪರರು ಹೇಳಿದ ಸವಿಮಾತುಗಳನ್ನು ನಂಬದೆ ಅದರಲ್ಲಿ ಯೋಗ್ಯವಾದದ್ದು ಯವುದು ಅಯೋಗ್ಯವಾದದ್ದು ಯಾವದು ? ಎಂಬ ಸಂಗತಿಯನ್ನು ಚನ್ನಾಗಿ ವಿಚಾರಮಾಡಿಕೊಂಡು ಯಾವದಾದರೂ ಕಾರ್ಯಕ್ಕೆ ಕೈಹಾಕಬೇಕು ” ಎದು ಬುದ್ಧಿವಾದವನ್ನು ಹೇಳಿ ಸಭಾಸದರನ್ನು ಕುರಿತು ಹೇಳಿದ್ದೇನಂದರೆ, "ನಿರಪರಾಧಿಯಾದ ಈ ಕವಿಯನ್ನು ಸಂಕಟಕ್ಕೆ ಗುರಿಮಾಡಿದ್ದಿರಿ ! ಅವನನ್ನು ಬದುಕಿಸಿಕೊಳ್ಳುವ ಯತ್ನವು ನಿಮಗೆ ತಿಳಿಯಿದೆ ಹೋಯಿತು ” ಎಂದನು ಆಗ ಬೀರಬಲನು ಅನ್ನುತ್ತಾನೆ- “ ಪೃಥ್ವಿನಾಥ ! ಗಂಗಕವಿಯು ಮಹಾ ಪರೋಪಕಾರಿಯಾಗಿದ್ದಾನೆ; ಇವನು ಸಾವಿರಾರು ಜನರ ಪ್ರಾಣವನ್ನು ರಕ್ಷಿಸುವದಕ್ಕಾಗಿ ತನ್ನ ಪ್ರಾಣವನ್ನು ಸಂಕಟಕ್ಕೆ ಗುರಿ ಮಾಡಿದ್ದನು ಇದಲ್ಲದೆ ನೀವು ಒಳ್ಳೇ ವಿಚಾರ ಪರರಾಗಿರುವಿರಿ ! ಪರಿಣಾಮದ ಕಡೆಗೆ ಲಕ್ಷ್ಯ ಕೊಡುವವರು ಆಗಿರುವಿರಿ ! ನೀವು ಬಂದೂ ಗಂಗಕವಿಯ ಮೇಲೆ ಸಿಟ್ಟಾಗಲಾರಿರಿ; ಎಂಬ ಸಂಗತಿಯನ್ನು ನಾವು ತಿಳಿದು ಕೊಂಡದ್ದರಿಂದಲೇ ನಾವು ನಡುವೆ ಬಾಯಿ ಹಾಕಲಿಲ್ಲ ನಾವು ಈ ವಿಷಯದಲ್ಲಿ ಏನಾದರೊಂದು ಮಾತಾಡಿದ್ದರೆ, ನಿಮಗೆ ಅಧಿಕವಾದ ಕೋಪವು ಉಂಟಾಗುತ್ತಿತ್ತು. ಅದರಿಂದಲೇ ನಾವು ಒಂದು ತು ಟಿಯನ್ನು ಎರಡು ಮಾಡಲಿಲ್ಲ ” ಎಂದು ಹೇಳಿದನು ಆ ದಿವಸದಿಂದ ಬಾದಶಹನು ನಿತ್ಯದಲ್ಲಿ ದರಬಾರಕ್ಕೆ ಬರಹತ್ತಿದನು.

- (೨೨. ವೇಶ್ಯಯ ಗೃಹದಲ್ಲಿದ್ದ ಬಡವನ ಮಗಳು )-

ದಿಲ್ಲಿಯಲ್ಲಿ ಒಬ್ಬ ಬಡವನಾದ ಮನುಷ್ಯನಿದ್ದನು. ಅವನಿಗೆ ಎಂಟು ವರುಪದ ಒಬ್ಬ ಮಗಳಿದ್ದಳು. ಆ ಹುಡುಗಿಯನ್ನು ಒಬ್ಬ ಮೋಸಗಾರನು ಮೋಸದಿಂದ ಎತ್ತಿಕೊಂಡು ಹೋದನು ಕೆಲವು ದಿವಸ ಆ ಹುಡುಗಿಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಆ ಮೇಲೆ ಅವಳನ್ನು ಒಬ್ಬ ವೇಶಾ ಸ್ತ್ರೀಯಳಿಗೆ ಮಾರಿಕೊಂಡು ಬಿಟ್ಟುನು ಅವಣ್ಯಾಂಗನೆಯು ಆ ಹುಡುಗಿಯನ್ನು ಚನ್ನಾಗಿ ಜೋಪಾನ ಮಾಡಹತ್ತಿದಳು. ಅದರಿಂದ ಆ ಹುಡುಗಿಯು ಕೆಲವು ದಿವಸಗಳಲ್ಲಿ ತನ್ನ ತಂದೆಯನ್ನು ಮರೆತು ಬಿಟ್ಟಳು. ಆ ಹುಡುಗಿಯ ತಂದೆ