ಈ ಪುಟವನ್ನು ಪ್ರಕಟಿಸಲಾಗಿದೆ

ಟಿ.ಸಿ. ಕೊಂಡಯ್ಯ

೧೭

ಒಂದೇಸವನೆ ಸಿಕ್ಕಿ ಸಿಕ್ಕಿ ಸಿನಿಮಾಗಳನ್ನೆಲ್ಲ ನೋಡಿದ. ಮನಸ್ಸು ಕಕ್ಕಾ
ವಿಕ್ಕಿಯಾಯಿತು.
ಹಾಗಾದರೆ ಇನ್ನೇನು -ಮುಂದೇನು? ಎಂದುಕೊಂಡ .ಉತ್ತರ
ತಿಳಿಯದೇ ಇತ್ತು. ಅದನ್ನು ನೆನಸಿದಾಗಲೆಲ್ಲಾ ಮೈ ಜುಮ್ಮೆನ್ನುತ್ತಿತ್ತು.
ವರ್ಕಶಾಪಿನ ಹಿಂದಿನ ಆ ಬಯಲು, ಆ ಸಹೋದ್ಯೋಗಿಗಳು, ಆ ಕಾರಿರುಳು.
ಇದು ಅಸಹನೀಯ,ಆತ್ಮಹತ್ಯೆ ಮಾಡಿಕೊಳ್ಳಬೇಕು ; ಎಂಥ ಸಮಾಜ
ಇದು? ಎಂಥ ವಾತಾವರಣ ಇದು ? ಯಾವ ಸ್ಥಿತಿಗೆ ಬಂದೆ ನಾನು?
ಎಂದೆಲ್ಲ ಕೊಂಡಯ್ಯ ಯೋಚಿಸಿದ.
ಆದರೆ ಮತ್ತೆ ಮತ್ತೆ, ಊರಿಗೆ ಹೊರಟು ನಿಂತಿದ್ದಾಗ ಗಾಡಿಯ ಕಿಟಕಿ
ಯೆಡೆಯಿಂದ ತನ್ನನ್ನು ಇಣಿಕಿ ನೋಡಿದಾಗಿನ ಕಣ್ಣೀರು ತುಂಬಿದ ಕಮಲೆಯ
ಮುಖ ಕಾಣಿಸುತ್ತಿತ್ತು. "ನನಗೆಲ್ಲಾ ಗೊತ್ತು...........ನಿಮ್ಮ ಯಾತನೆ ಎಲ್ಲಾ
ಗೊತ್ತು.........ಎಚ್ಚರ . ನಿಮ್ಮ ದಮ್ಮಯ್ಯ ....ಜಾರಿಬಿದ್ದೀರಿ " ಎಂದು ಕಾತರ
ದಿಂದ ಬೇಡಿಕೊಂಡಹಾಗಿತ್ತು ಆ ನೋಟ.
ಆದರೆ ಈಗ? ಈಗ?
ಪಾಂಡ್ಯ ಸಮಯ ಕಾಯುತ್ತಿದ್ದನೇನೋ ! ಆ ರಾತ್ರಿ ಪ್ಲಾಟ್ ಫಾರ್ಮಿಗೆ
ಬಂದ.
"ಏನು ಕೊಂಡಿ, ಟ್ರಾನ್ಸ್ ಫರ್ ಕೇಳಿದ್ದೀಯಂತೆ."
"ಹೂನಪ್ಪಾ; ಈ ಊರು ಸಾಕಾಯ್ತು."
"ಅದಕ್ಕೇಅನ್ನೋದು ಅದೃಷ್ಟಹೀನಾಂತ. ಊರಿನ ರುಚಿ ನೋಡೋಕೆ
ತಿಳಿವಳಿಕೆ ಬೇಕಪ್ಪಾ....
ಕೊಂಡಯ್ಯ ಮಾತಾಡಲಿಲ್ಲ......ಇಬ್ಬರೂ ಪ್ಲಾಟ್ ಫಾರ್ಮಿನ ಕೊನೆ
ಯತ್ತ ನಡೆದಿದ್ದರು.
ಕೊಂಡಯ್ಯನ ಕಾಲುಗಳು ಕಂಪಿಸಿದುವು; ತುಟಯದುರಿತು. ನಾಲ
ಗೆಯ 'ಪಸೆ' ಆರಿತು.
ಪಾಂಡ್ಯ ಆತನ ಕೈಹಿದು,"ನಡೆ....ಒಂದು ಮಾಲು ತೋರಿಸ್ತೀನಿ"
ಎಂದ.