ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೨೯


ಕೊರೆಯಲಕ ಹತ್ತಿದ್ದ ಪರಿಣಾಮದಿಂದಾಗಿ ಅವಯ್ಯನು ವಂದು ಮಾಡಲು
ಹೋಗುತ ಪರಪಾಟಿಗೆ ಬಿದ್ದು ಯಿನ್ನೊಂದು ಮಾಡುತಲಿದ್ದನು. ತನ್ನ ಸೊಡರ
ಕುಡಿಯಂಥ ಮನಸ್ಸಿನ ಮ್ಯಾಲ ನಿಯಂತ್ರಣ ಸಾಧಿಸುವ ನಿಮಿತ್ತ ದಿನವಂದರಲ್ಲಿ
ಆರು ಸಂಧ್ಯಾ ಸಮಯಗಳನ್ನು ನಿಗಧಿ ಮಾಡಿಕೊಂಡಿದ್ದನು. ನೋಡು
ನೋಡುತ್ತಿದ್ದಂತೆ ತಾನು ತುಂಬಿದ ಗಿಂಡಿಯಿಂದ ಜಲವನ್ನು ಮಯ್ಗೆ
ಸಿಂಪಡಿಸಿಕೊಳ್ಳುತಲಿದ್ದುದೇನು? ನೋಡು ನೋಡುತ್ತಿದ್ದಂತೆ ತಾನು ತೋಚಿದ
ಕಡೇಲೆಲ್ಲ ಕೂತು ಪ್ರಾಣಯಾಮ, ಧ್ಯಾನ ಮಾಡುತಲಿದ್ದುದೇನು? ಬಂಗಲೆಯನ್ನೇ
ತಾಯಕ್ಕನ ಮನೆ ಯಂದೂ, ತಾಯಕ್ಕಳ ಮನೆಯನ್ನೇ ಸರಕಾರದ ಬಂಗಲೆ
ಯಂದೂ, ಜೆನ್ನಿಫರಮ್ಮ ಚಿನ್ನಾಸಾನಿಯಂದೂ, ಚಿನ್ನಾಸಾನಿಯನ್ನೇ ಜೆನ್ನಿಫರಮ್ಮ
ಯಂದೂ ತಾನು ಭ್ರಮಿಸುತಲಿದ್ದುದೇನು? ತನ್ನೊಳಗಿಂದ ಯೇದ ಪಾರಾಯಣದ
ಪುಣ್ಯ ಸೋರಿ ಹೋಗದ ಮುನ್ನ, ತನ್ನ ಹೆಂಡತಿ ದುಸ್ಸೋಪುನಗಳನ್ನು ಕಾಣದ
ಮುನ್ನ, ತನ್ನನ್ನು ತಾನು ರಕ್ಷಿಸಿಕೊಳ್ಳಬೇಕೆಂದು ನಿರ್ಧರಿಸಿದ ರಾಯನು ಮ್ಲಾನ
ವದನನಾಗಿ ಕಛೇರಿಗೆ ಹೋಗಿ ಸಯ್ನಿಕ ಸಾಯ ಪದ್ಧತಿ ಯೋಜನೆಗೆ
ಸಂಬಂಧಿಸಿದ ಕಡತಗಳನ್ನು ವಂದೊಂದಾಗಿ ಕಯ್ಗೆತಿಕೊಂಡನು. ಯಾವ ಯಾವ
ಸಮುಸ್ಥಾನಗಳಿಂದ ಯಷ್ಟೆಷ್ಟು ಸಯ್ನಿಕರು ಬೇಕೆಂಬ ಬೇಡಿಕೆ ಬಂದಿರುವುದು,
ಕುಂಪಣಿ ಸಿಪಾಯಿಗಳು ಬಾಡಿಗೆ ಹೋಗಿ ವಾಪಾಸಾಗದೆ ಯಾವ ಯಾವ
ಸಮುಸ್ಥಾನಗಳಲ್ಲಿ ವುಳಕೊಂಡರೆ, ಯಾವ ಯಾವ ಸಮುಸ್ಥಾನಗಳಿಂದ ಕುಂಪಣಿ
ಸರಕಾರಕ್ಕೆ ಸಂದಾಯವಾಗಬೇಕಿರುವ ಬಾಕಿ ಯಷ್ಟು ವಗಯ್ರೆವಗಯ್ರೆಕಡತಗಳು
ಪರಿಸೀಲನ ಮಾಡಿ ಷರಾ ಬರೆವುತ ಕುಪ್ಪೆ ಹಾಕಿದನು.. ಯಲ್ಲಾ ಕಾರ್ಯೇವುಗಳನ್ನು
ತಾನು ಪೂರ್ಣ ಮಾಡಿದ್ದಾಯಿತು. ಯಿನ್ನು ತಾನು ನಿಶ್ಚಿಂತೆಯಿಂದ ದೀರ್ಘಾವಧಿ
ರಜೆ ಬಯಸಿ ಅರ್ಜಿ ಬರೆವುದೊಂದು ಬಾಕಿ ವುಳಕೊಂಡಿರುವುದು. ವಂದಿವಸ..
ಯರಡು ದಿವಸ.. ಅಂದರ ಸರ್ರೆ ಸರ್ರೆ.. ಆದರೆ ಹಲವು ತಿಂಗಳುಗಳ
ಕಾಲ ಅಂದರ.. ಮನವಿ ಕೆಳಹಂತದ ಅಧಿಕಾರಿಗಳನ್ನು ದಾಟಿ ದಾಟೀ ಕಲೆಟ್ಟರು
ಸಾಹೇಬನಿರುವಲ್ಲಿಗೆ ಹೋಗಿ ಮಂಜೂರಾಗಿ ಬರಬೇಕು. ಯಿದಕ್ಕೆ
ಯೇನಿಲ್ಲಾಂದರೂ ವಂದೆರಡು ತಿಂಗಳುಗಳ ಕಾಲ ಕಾಯುವುದು ಅವಶ್ಯ..
ಪರಂಗಿ ನವುಕರರು ಸಲ್ಲಿಸುವ ಮನವಿಗಳನ್ನು ಕಣ್ಣುಮುಚ್ಚಿ ಪುರಸ್ಕರಿಸುವ
ಸಾಹೇಬ ಪರಂಗಿ ಅಲ್ಲದ ತಮ್ಮಂಥವರ ಮನವಿಗಳ ತಳಬುಡ ಸೋಧಿಸದೆ
ಬಿಡುವನಲ್ಲ.. ರಜೆಯ ಮ್ಯಾಲ ಹೋಗುವ ಪರಂಗೇತರ ವುದ್ಯೋಗಿಯು