ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕರೆಯಿಸಿಕೊಂಡು ಮೇನೇನು ಮಾಡಬೇಕು? ಯೇನೇನು ಮಾಡಬಾರದೆಂದು ಹೇಳಿ ಅಗ್ರೇಜಿ ಜನಪ್ರಿಯಗೊಳಿಸಲು ಹೊಸ ಹೊಸ ಕ್ರಾಂತಿಕಾರಿ ಯೋಜನೆಗಳಿಗೆ ಚಾಲನೆ ಕೊಟ್ಟನು. ಯಿದರ ಪರಿಣಾಮವಾಗಿ.... ಸಕಲ ಯೇದಪಾರಂಗತರಾದ ತಾವು ಅಂಗ್ರೇಜಿ ಕಲಿಸುತೀವಂತ ಅಗ್ರಹಾರಗಳಿಗೆ ಹೋದ ಬ್ರಾಹ್ಮಣ ವುಭಯ ಭಾಷಾ ಪಂಡಿತರೆಷ್ಟೋ, ತಮಗೂ ಯೇದೋಪನಿಷತ್ತು ಕಲಿಸಿರಯ್ಯಾ ಯಂದು ಅಗ್ರಹಾರಗಳಿಗೆ ಹೋದ ಕುಂಪಣಿ ವಂದಿಂತುಷ ? ಯಿಲಿಯಂ ಬೆಂಟಿಂಕ ನಿಂದ ರಾಜಾರಾಮಮೋಹನರಾಯನೆಂಬ ಬ್ರಾಹ್ಮಣ ಯಿಂಗ್ಲೀಷು ಕಲಿತಿರುವನಯ್ಯಾ... ರಾಜಾರಾಮ ಮೋಹನರಾಯನಿಂದ ಬೆಂಟಿಂಕು ಮಹಾಶಯನು ಸಂಸ್ಕೃತ ಕಲಿತು ಪಂಡಿತನಾಗಿರುವನಯ್ಯಾ.. ಯಿಂಗ್ಲೀಷು, ಸಂಸ್ಕತ ಯಿವೆರಡೂ ವಂದೇ ದ್ವಿದಳ ಧಾನ್ಯದ ಯರಡು ಹೋಳುಗಳಯ್ಯಾ, ಯೆವೆರಡೂ ಸರಸ್ಕೊತೀದೇವಿಯ ಯರಡು ಮೊಲೆಗಳು ಕಣರಯ್ಯಾ, ಮಗು ಯಾವ ಪ್ರಕಾರವಾಗಿ ತನ್ನ ತಾಯಿಯ ಯರಡೂ ಮೊಲೆಗಳನ್ನು ಕುಡಿದು ಬೆಳೆವುದೋ ಅದೇ ರೀತಿ ಯರಡೂ ಭಾಷೆಗಳನ್ನು ಕಲಿಯುವುದರಿಂದ ನಷ್ಟವಿಲ್ಲ. ಯೇ ಯಂಬ ಅಕ್ಷರ ಕಲಿತರೆ ಯಿಷ್ಟು ಬಿ ಯಂಬ ಅಕ್ಷರ ಕಲಿತರೆ ಯಿಷ್ಟು ಎಂದು ವಾಕ್ಯ ಕಲಿತರೆ ಯಿಷ್ಟು ಯಿಷ್ಟು ಮೋದಿದರೆ ಅಷ್ಟು ಅಷ್ಟು ಬರೆದರೆ ಯಷ್ಟು ನಗದು ಬಹುಮಾನ ಕೊಡುತಯ್ಕೆ ಸರಕಾರ, ಯಾವ ಅಗ್ರಹಾರದಲ್ಲಿ ಯಿಂಗ್ಲೀಷು ಕಲಿಯಲಕ ತಮ ತಮ್ಮ ಮಕ್ಕಳನ್ನು ಕಳುವರೋ ಆ ಅಗ್ರಹಾರದ ತೆರಿಗೆಯನ್ನು ಮಾಫ್ ಮಾಡಲಾಗುತ್ತದೆ. ಯಿಂಗ್ಲೀಷು ಕಲಿತವರಿಗೆ ಕುಂಪಣಿ ಸರಕಾರ ನವುಕರಿ ಕೊಡಲಿದೆ, ಕಯ್ಯ ತುಂಬ ಪಗಾರ ನೀಡಲಿದೆ. ಅವರ ಆಚಾರ ಯಿಚಾರಗಳಿಗೆ ಅಡ್ಡಿ ಆತಂಕ ಮಾಡುವುದಿಲ್ಲ. ನೋಡಿ ಯಂಥಂಥ ಪಂಡಿತರು ಕುಂಪಣಿ ಸರಕಾರದ ನವಕರಿಯಲ್ಲಿರುವರು. ನೃಸಿಂಹಭಟ್ಟ ಅಹೋಬಲಭಟ್ಟ ಪರಾಸರಭಟ್ಟ ಯಂಕೋಬರಾಯ, ಕರಾಚಾರ ಮುಂತಾದವರು ಯಿರುವರು. ಅನುಮಾನ ಬಂದವರು ಹೋಗಿ ನೋಡಬಹುದು.. ಯಂದು ಮುಂತಾಗಿ ಪ್ರಚಾರ ಮಾಡತೊಡಗಿದರು. ಹಿಂಗೆ ಯಿಚಾರಿಸುತ್ತಿದ್ದವರು ಅಪ್ಪಟ ಸಸ್ಯಾಹಾರಿಗಳು, ತ್ರಿಕಾಲ ಸಂಧ್ಯಾವಂದನೆಯನ್ನು ಶಾಸ್ರೋಕ್ತವಾಗಿ ಮಾಡುತ್ತಿರುವಂಥವರು. ಯೇಷಭೂಷಣಗಳನ್ನಂತೂ ಅನುಮಾನಿಸುವಂತಿರಲಿಲ್ಲ. ಅಂದ ಮ್ಯಾಲ