ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನಿ ವಿನೋದ ಎಂಬ ತೋರಿಸಿದರು. ಆ ಬಳಿಕ ಆ ಹೆಂಗಸು, ನೀವು ಖಂಡಿತವಾಗಿಟು ಬೇಗ ಬರಬೇಕು, ಹಾಗೆ ಬಾರದೆ ಹೋದರೆ ಈ ಭೂತವನ್ನೇಳಿಸಿ ನಿಮ್ಮನ್ನು ಸಾಯಗೊಳ್ಳುವಂತೆ ಮೂಡಿಸುವೆನೆಂದು ಹೇಳಿದಳು. ಈ ಮೂತಿಗೆ ಭಯ ಪಟ್ಟು ಅವರು ಮೆಲ್ಲಗೆ ಮರವನ್ನಿಳಿದು ಬರಲು, ಆಕೆಯು ಅವರ ಕೈಯ ನ್ನು ಹಿಡಿದುಕೊಂಡು, ಮರದಬಳಿಗೆ ಕರೆದುಕೊಂಡು ಹೋಗಿ, ತನ್ನ ಅನಿ ವಾರ್ಯಗಳನ್ನೆಲ್ಲಾ ಹೇಳಿಕೊಂಡಳು. ಅವರು ಮೊದಲು ಒಪ್ಪಲಿಲ್ಲ ವಾದುದರಿಂದ, ಹೆದರಿಕೆಯಿಂದ ಇವಳು ಒಪ್ಪುವಂತೆ ನೋಡಿದಳು. ಆ ಬಳಕ ಅವರಿಂದ ತನಗಾಗಬೇಕಾದ ಕೆಲಸಗಳನ್ನೆಲ್ಲಾ ತೀರಿ ಸಿಕೊಂಡು, ಅವರ ಕೈಯಲ್ಲಿರುವ ಉಂಗುರಗಳನ್ನು ಚಿಂಕೆಂದು ತೆಗೆದು ಕೊಂಡಳು ಆ ಬಳಿಕ ಎಂದಿನಂತೆ ತನ್ನ ಉಡುಪನ್ನು ಧರಿಸಿಕೊಂಡು ಆಸೆ ೬ಗೆಯ ಹತ್ತಿರಕ್ಕೆ ಬಂದು, ತನ್ನ ನೆಟ್ಟಗೆಯಲ್ಲಿ ನಾನಾ ವಿಧವಾ ದ ಉಂಗುರಗಳ ಸರ ವೊಂದನ್ನು ತೆಗೆದು ಅವರಿಗೆ ತೋರಿಸಿ, ಇದೇತಕ್ಕೆ ಬಲ್ಲರೋ ? ಎಂದು ಕೇಳಿದಳು. ಅದಕ್ಕವರು ಇದು ನಮಗೆ ತಿಳಿಯದು ನೀನು ತಿಳಿಯ ಹೇಳಬೇಕೆಂದು ಆಡಿಕೊಂಡರು. ನಾನು ಇದುವರೆಗೂ, ರತಿಸುಖವನ್ನು ಅನುಭವಿಸಿದ ಫುರುದರ ಜವಕಾರ್ಥವಾಗಿ, ಅವರುಗ ೪ ಉಂಗುರಗಳನ್ನು ತೆಗೆದು ಸರವಾಗಿ ಕ ರುವನು. ಇದರಲ್ಲಿ ತೊಂಭತ್ತೊಂಭತ್ತು, ಉಂಗುರಗಳುಂಟು, ಈಗ ನೀವು ಕೊಟ್ಟ ಉಂಗು ರವು ಸೇರಿ ನೂರಾಯಿತು. ಈ ದುಪ್ಪನಾದ ರಾಕ್ಷಸನು, ಯಾವಾಗಲೂ ನನ್ನನ್ನು ಬಿಡದೆ ಕಾಡಿದರೂ, ನಾನು ನೂರುಮಂದಿ ಮಹಾ ಪುರುಷರ ನ್ನು ವರಿಸಿ, ರತಿಸುಖವನ್ನು ಹೊಂದಿದೆನು. ಆದುದರಿಂದ ನನ್ನ ಸಮ ನರಾದ ಸಿಯರು ನೆನಸಿದ ಕಾರ್ಯವನ್ನು ಬಿಡದೆ ನೆರವೇರಿಸಿಕೊಳ್ಳುವ ರು. ಅಲ್ಲದೆ ಅದನ್ನು ನಿವಾರಿಸುವುದಕ್ಕೆ, ಗಂಡನಾಗಲಿ, ಇಲ್ಲವೆ ಮಿಂಡ ನಾಗಲಿ, ಉದ್ದಂಡ ಆರ್ಯ ಸಾಹಸ ಸಂಪನ್ನನಾದ ಭಗವಂತನಿಗಾಗಲಿ, ಎಂದಿಗೂ, ಸಮರ್ಥ ವಿಲ್ಲವೆಂದು, ಇದರಿಂದ ನೀವು ತಿಳಿದುಕೊಳ್ಳಬಹು ದು, ಗಂಡಸರು ತಂತಮ್ಮ ಹೆಂಡಿರನ್ನು ನಿರ್ಬಂಧಪಡಿಸದಿರುವುದೇ ಉತ್ತ ಮ, ಒಂದುವೇಳೆ ಹಾಗೆ ನಿರ್ಬಂಧ ಪಡಿಸಿದುದೇ ಆದರೆ, ಅವರಾಗಿ ವರ್ಗ ವನ್ನು ತೋರಿಸಿಕೊಟ್ಟಂತಾಗುವುದೇ ಹೊರತು ಮತ್ತಾವ ಪ್ರಯೋಜ ನವೂ ಉಂಟಾಗಲಾರದೆಂದು ಹೇಳಿ, ತನ್ನ ಉಂಗುರದ ಸರಗಳನ್ನು ಸರಿ