ಈ ಪುಟವನ್ನು ಪರಿಶೀಲಿಸಲಾಗಿದೆ

- 341 - ಅxvii

    ವಾತರೋಗಿಯಲ್ಲಿ ಬಾಕು, ಚರ್ಮನಿರ್ಜೀವವಾಗಿರುವದು, ಒಡಕು, ನಡುಕು, ಹೊಟ್ಟೆಯುಬ್ಬರ, ಸಂಕಟಕರವಾದ ನೋವು, ಈ ಲಕ್ಷಣಗಳು ಕಂಡರೆ, ಆ ಮನುಷ್ಯನು ಬದುಕಲಾರನು.
   ಷರಾ ಅವು ಯಾಪೃಲಕ್ಷಣಗಳಂತ ವಾ ಪ್ರ (ಪ 420)
   
   3.    ಪ್ರಮೇಹದಲ್ಲಿ ಅಶುಭಸೂಚನೆ     
            ಯಧೋಕ್ತೋಪದ್ರವಾವಿಷ್ಟ ಮತಿಪ್ರಸ್ರುತಮೇವ ವಾ | 
ಪಿಡಕಾಪೀಡಿತಂ ಗಾಢಂ ಪ್ರಮೇಹೋ ಹಂತಿ ಮಾನವಂ || (ಸು. 122.) 
         ಪ್ರಮೇಹವ್ಯಾಧಿಗೆ ಉಕ್ತವಾದ ಉಪದ್ರವಗಳೂ, ಅಥವಾ ಅತಿಯಾಗಿ ಮೂತ್ರಹೋಗು ತ್ತಿರೋಣ, ಅಥವಾ ಕಠಿಣವಾದ ಪಿಡಕಗಳು, ಇವುಗಳು ಸೇರಿದರೆ ಪ್ರಮೇಹವುಳ್ಳ ಮನು ಷ್ಯನು ಬದುಕಲಾರನು 
         ಷರಾ 'ವಾ'ದ  ಸ್ಥಾನದಲ್ಲಿ ಚ' ಧ ಪ್ರ ದಲ್ಲಿ ಕಾಣುತ್ತದೆ ಆ ಪಾರಪ್ರಕಾರ, ಮೂರು ವಿಧವಾದ ದೋಷ ಗಳೆಲ್ಲಾ ಕೂಡಿರುವದು ಮರಣಸೂಚಕ ಎಂತ ಆರ್ದವಾಗುತ್ತದ
   
   4.    ಕುಷ್ಠದಲ್ಲಿ ಅಶುಭಸೂಚನೆ     
           ಪ್ರಭಿನ್ನಂ ಪ್ರಸ್ತುತಾಂಗಂ ಚ ರಕ್ತನೇತ್ರ ಹತಸ್ವರಂ || 
ಪಂಚಕರ್ಮಗುಣಾತೀತಂ ಕುಷ್ಠಂ ಹಂತೀಹ ಕುಟ್ಟಿನಂ ||      (ಸು. 129 ) 
         ಅಂಗಗಳು ಹಚ್ಚಾಗಿ ಒಡದು ಸುರಿಯುತ್ತಿರುವದು, ಕಣ್ಣುಗಳು 

ರಕ್ತವರ್ಣವಾಗಿರುವದು, ಸ್ವರ ಬಿದ್ದಿರುವದು, ಮತ್ತು (ವಮನಾದಿ) ಪಂಚಕರ್ಮಗಳು ನಿಷ್ಪ್ರಯೋಜನವಾಗಿರುವದು. ಈ ಲಕ್ಷಣಗಳುಳ್ಳ ಕುಷ್ಠ ರೋಗಿಯು ಆ ರೋಗದಿಂದ ಸಾಯುವನು.

   5.     ಅರ್ಶಸ್ಸಿನಲ್ಲಿ ಅಶುಭಸೂಚನೆ     
          ತೃಷ್ಣಾ ರೋಚಕಶೂಲಾರ್ತ ಮತಿಪ್ರಸ್ತುತಶೋಣಿತಂ | 
ಶೋಫಾತಿಸಾರಸಂಯುಕ್ತಮರ್ಶೋ ವ್ಯಾಧಿರ್ವಿನಾಶಯೇತ್ || (ಸು 123.) 
       ಬಾಯಾರಿಕೆ, ಅರುಚಿ, ಶೂಲೆ, ಅತಿಯಾಗಿ ರಕ್ತ ಸ್ರವಿಸೋಣ, ಶೋಫ, ಅತಿಸಾರ, ಈ ಲಕ್ಷಣಗಳುಳ್ಳವನನ್ನು ಮೂಲವ್ಯಾಧಿಯು ಕೊಲ್ಲುವದು.
   6.     ಭಗಂದರದಲ್ಲಿ ಅಶುಭಸೂಚನೆ   
          ವಾತಮೂತ್ರಪುರೀಷಾಣಿ ಕ್ರಿಮಯಃ ಶುಕ್ರಮೇವ ಚ | 
ಭಗಂದರಾತ್ ಪ್ರಸ್ರವಂತಿ ಯಸ್ಯ ತಂ ಪರಿವರ್ಜಯೇತ್ || (ಸು 123 ) 
       ಭಗಂದರವ್ರಣದಿಂದ ವಾಯು, ಮೂತ್ರ, ಮಲ, ಕ್ರಿಮಿಗಳು, ಶುಕ್ರ, ಇವ್ರ ಸ್ರವಿಸು ತ್ತಿದ್ದರೆ, ಆ ರೋಗಿಯ ಚಿಕಿತ್ಸೆ ನಿಷ್ಪಯೋಜನವೆಂದರಿಯುವದು.
   
  7.     ಆಶ್ಮರಿಯಲ್ಲಿ ಅಶುಭಸೂಚನೆ  
          ಪ್ರಶೂನನಾಭಿವೃಷಣಂ ರುದ್ಧಮೂತ್ರಂ ರುಗನ್ವಿತಂ || 
ಅಶ್ಮರೀ ಕ್ಷಪಯತ್ಯಾಶು ಸಿಕತಾಶರ್ಕರಾನ್ವಿತಾ ||                 (ಸು. 123.) 
 
      ಹೊಕ್ಕುಳು ಮತ್ತು ಅಂಡ ಹೆಚ್ಚಾಗಿ ಬಾತಿರುವದು, ಮೂತ್ರ ಒದ್ದವಾಗಿರುವದು, ನೋವು ಕೂಡಿರುವದು ಮಳಲಿನ ಹಾಗಿನ ಕಾಳುಗಳು ಸವಿಸುತ್ತಿರುವದು, ಈ ಲಕ್ಷಣ ಗಳುಳ್ಳವನನ್ನು ಅಶ್ಮರೀವ್ಯಾಧಿಯು ಬೇಗನೇ ಕೊಲ್ಲುವದು.