ಈ ಪುಟವನ್ನು ಪ್ರಕಟಿಸಲಾಗಿದೆ

- 22 -

ಮಾಲಿಕ್ ಕಾಫರ್:- “ನೀನು ಹಗಲು ನನಗೆ ಮಾತು ಕೊಟ್ಟಂತೆ. ದೇವಗಿರಿಯ ಸೈನ್ಯವನ್ನು ಹೊರಕ್ಕೆ ಇಳಿಸಿರುವೆಯ?”

ಎಲೆಯ ಮರಮರ ಶಬ್ದದಂತೆ ಹತ್ತಿರದಲ್ಲಿ ಕೇಳಿಸಿತು.

ಆಗಂತುಕ: - “ಕೊಟ್ಟ ಮಾತನ್ನು ಮರೆಯಲಾರೆನು, ಅರಮನೆಯನ್ನು ಕಾಯುವಷ್ಟು ಕೈ ತುಂಬಾ ಸೈನಿಕರನ್ನು ಹಿಂದೆ ಬಿಟ್ಟು, ಮಿಕ್ಕ ಸೈನ್ಯವನ್ನು ಹೊರಕ್ಕೆ ಹೊರಡಿಸಿರುವೆನು.”

ಮಾಲಿಕ್ ಕಾಫರ್:- “ಹಾಗಾದರೆ ನಮ್ಮ ಸೈನ್ಯವು ಒಳನುಗ್ಗುವುದಕ್ಕೆ ಇದೇ ಅವಕಾಶವಲ್ಲವೇ? ರಹಸ್ಯಮಾರ್ಗವು ಯಾವುದು?"

ಆಗಂತುಕ:- ಇದೇ ಸಮಯ ನಾನು ಈ ಮಧ್ಯಾಹ್ನದಲ್ಲಿ ನಿನ್ನೊಡನೆ ಯಾವ ಸ್ಥಳದಲ್ಲಿ ಸಂಭಾಷಣೆ ಮಾಡಿದೆನೋ ಆ ಸ್ಥಳದಿಂದ ಎಡಕ್ಕೆ ತಿರುಗಿದರೆ-

ಮಾಲಿಕ್ ಕಾಫರ್‌:- "ಎಡಕ್ಕೆ ತಿರುಗಿದರೆ ಹಾಳುಗುಡಿಯೊಂದು ತೋರುವುದು.”

ಆಗುಂತುಕ:- “ಸರಿ, ಆ ಕಾಳಿಕಾ ದೇವಸ್ಥಾನಕ್ಕೆ ಇದಿರಾದ ಹಾದಿಯನ್ನು ಹಿಡಿದುಹೋದರೆ, ಅರಮನೆಯ ಹಿಂದುಗಡೆಯಲ್ಲಿ ಇಳಿಯಬಹುದು.”

ಮಾಲಿಕ್ ಕಾಫರ್:-- "ಅಲ್ಲಿ ಸೈನ್ಯವೆಷ್ಟಿರುವುದು?”

ಅಷ್ಟರಲ್ಲಿ ಇಬ್ಬರೂ ಸುತ್ತು ಮುತ್ತಲು ನೋಡಿದರು. ಯಾರೊಬ್ಬರ ಸುಳಿವು ತೋರುತ್ತಿರಲಿಲ್ಲ. ಗಾಳಿಯ ಶಬ್ದವೆಂದು ಸುಮ್ಮನಾದರು. ಪುನಃ ಕಣ್ಣೆತ್ತಿ ನೋಡಿದರು. ವಾಯುವಿನ ಹಿತ್ತೊಲದಿಂದ ಉಂಟಾದ ಎಲೆಗಳ ಮರಮರ ಶಬ್ದದಲ್ಲಿ ಅವರಿಗೆ ಏನೊಂದೂ ಕೇಳಿಸಲಿಲ್ಲ.

ಆಗಂತುಕ:- “ ಅಲ್ಲಿ ಬೇಕೆಂತಲೇ ಮೂವರು ಸಿಪಾಯರನ್ನು ಇಟ್ಟಿರುವೆನು.”

ಮಾಲಿಕ್ ಕಾಫರ್:- “ಅಲ್ಲಾವುದ್ದೀನರು ನೀನು ಮಾಡಿದ ಉಪಕಾರವನ್ನು ಮರೆಯಲಾರರು. ಯಾವ ಉಪಾಯದಿಂದಲಾದರೂ ಕೋಟೆಯನ್ನು ಜಯಿಸಿದ ಹೊರತು, ತಾನು ಅನ್ನಾಹಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಿನ್ನೆಯಿಂದ ಹಟಹಿಡಿದಿರುವರು. ರಾಮದೇವನ ಸ್ಥಾನವನ್ನು ನೀನೇ ಅಲಂಕರಿಸುವೆ ಎಂದು ತಿಳಿ."