ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೆರೆಯ ಮೇಲ್ ತೆರೆಗಳ ತೋರುವಿಂಗಡಲಂತೆ ಸಿರಿಯ ಮೇಲ್ ಸಿರಿಯ ಸೂಚಿಸುವ ಚರಿತಾರ್ಥ ನನ್ನ೦ತರ೦ಗದೊಳಿರು ಮನೋ ಹರನೆ ಚಿದಂಬರ ಪುರುಷಾ ಕಾಣದರ್ಥವ ಕಾಣಿಸುವ ಪರಂಜ್ಯೋತಿ ನೀ ಮಾಣದೆ ನನ್ನೆ ದೆಯೆಂಬ ಕೋಣೆಯೊಳಿರು ಹೋದೆಯಾದರೆ ನಿನಗೆ ನಿ ಸ್ನಾಣೆ ಚಿದಂಬರ ಪುರುಷಾ ೬. ಬಸವಣ್ಣ: ಸು. ೧೧೬೦ ಧರ್ಮದ ಕೆಚ್ಚು ದೇವನೊಬ್ಬ, ನಾಮ ಹಲವು. ಪರಮ ಪತಿವ್ರತೆಗೆ ಗಂಡನೊಬ್ಬ, ಮತ್ತೊಂದಕ್ಕೆರಗಿದೊಡೆ ಕಿವಿ ಮೂಗ ಕೊಯ್ಯುವನು. ಹಲವು ದೈವದ ಎಂಜಲ ತಿ೦ಬವರನೇನೆಂಬೆನಯ್ಯ ಕೂಡಲಸಂಗಮದೇವ ! ನಂಬಿ ಕರೆದಡೆ ಓ ಎಂಬ ಶಿವನು, ನಂಬದೆ ಕರೆದಡೆ ಓ ಎಂಬನೆ ಶಿವನು ? ನಂಬಲರಿಯರು, ನಚ್ಚಲರಿಯರು, ಡಂಬಿನ ಭಕ್ತರು ನಂಬದೆ ನಚ್ಚದೆ ಬರಿದೆ ಕರೆದಡೆ, ಶಂಭು ಮೌನದಲಿಪ್ಪ ಕೂಡಲಸಂಗಮದೇವ. ಮಡಕೆಯೇ ದೈವವು, ಮರದಲ್ಲಿಯ ದೈವವು, ಬಿಲ್ಲ ನಾರಿ ದೈವವು ಕಾಣಿರಯ್ಯ, ಕೊಳಗನೇ ದೈವವು, ಗಿಣಿಲು ದೈವವು ಕಾಣಿರಯ್ಯ, ದೈವ ದೈವವೆಂದು ಕಾಲಿಡಲಿಂಬಿಲ್ಲ. ದೇವನೊಬ್ಬನೇ , ನಮ್ಮ ಕೂಡಲಸಂಗಮದೇವ. ಅರ್ಥವಡಗದು, ಕ್ರೋಧ ತೊಲಗದು. ಕೂರ ಕುಹಕ ಕುಭಾಷೆ ಬಿಡದನ್ನಕ್ಕ, ನೀನೆ ಶಿವನೆ, ಹೋಗತ್ಯ ಮರುಳೇ, ಭವರೋಗವೆಂಬ ತಿಮಿರ ತಿಳಿಯದನ್ನಕ್ಕ ಕೂಡಲಸಂಗಯ್ಯನೆ, ನೀನೆ, ಮರುಳೇ. ಹೊತ್ತಾರೆ ಎದ್ದು, ಅಗ್ಗವಣಿ ಪತ್ರೆಯ ತಂದು, ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ ಹೊತ್ತುಹೋದ ಬಳಿಕ ನಿನ್ನ ನಾರು ಬಲ್ಲರು ? ಹೊತ್ತು ಹೋಗದ ಮುನ್ನ , ಮೃತ್ಯು ಒಯ್ಯದ ಮುನ್ನ, ತೊತ್ತುಗೆಲಸವ ಮಾಡು ಕೂಡಲಸಂಗಮದೇವನ. ಹೊತ್ತಾರೆ ಎದ್ದು, ಕಣ್ಣಹೊಸೆವುತ್ತ, ಎನ್ನ ಒಡಲಿಂಗೆ ಎನ್ನ ಒಡವೆಗೆ ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ, ಎನ್ನ ಮನಕ್ಕೆ ಮನವೇ ಸಾಕ್ಷಿ. CC ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ ! ಸಂಚರಂತಿ ಮಹಾ ಘೋರೇ ನರಕೇ ಕಾಲಮಕ್ಷಯಂ ” ಎಂಬ ಶ್ರುತಿಯ ಬಸವಣ್ಣನೋದುವನು. ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು. ಕೊಡುವೆನುತ್ತರವನವರಿಗೆ, ಕೊಡಲಿ, ಹೊಲೆಹೊಲೆಯರ