ಈ ಪುಟವನ್ನು ಪರಿಶೀಲಿಸಲಾಗಿದೆ
ತಶಮಾನ]
ಕೋಟೇಶ್ವರ 14 ಕಕಣಾಎದೇವಿಯ ಗುಡಿ ಕೊಂಡದೋಕುಳಿಯಾಡುವರನುರಿ | ಗೆಂಡದೊಳು ಹೊರಳುವರ ಮಿಗೆ ತರಿ | ಗೆಂಡದೊಳು ಮಾಯುವರನುರಿಯೊಳು ಹೊಕ್ಕು ಹೋರಡುವರ || ಕಂಡಗಳ ಕೊಯಿದಡೂವ ಕರುಳಿನ | ದಂಡೆಗಳ ತೆಗೆತೆಗೆದು ಮುಡಿಸುವ | ಗಂಡುಗಲಿದಾನವರ ನೆರವಿಯ ನೋಡುತೈತಂದ || ರಣರಂಗ ಹರಿವ ರಕುತದ ಸುರಿವ ಕರುಳಿನ | ದುರುದುರಿಸ ಕಂಡಗಳ ಮುಂದಲೆ | ಬಿರಿದ ಗಾಯದ ಮುಆವುಗಳ ನೆಣವಸೆಯ ತೊರಳೆಗಳ || ತೆರಳಿ ಜೋಲುವ ತೊವಲ ಜಿಗಿಯೊಳು | ಹೊರಳುವರೆಜೀವದ ಭಟಾಳಿಯ | ನ ನ ನರಳೂವತಿವೆದನೆಯೆಳೋಪ್ಪಿತು ರೌದ್ರರಣರಗ|| ಕೋಟೇಶ್ವರ ಸು. 1500 ಈತನು ಜೀವಂಧರಪಟ್ಟದಿಯನ್ನು ಬರೆದಿದ್ದಾನೆ. ಇವನು ಜೈನ ಕವಿ; ಇವನ ತಂದೆ ತುಳುದೇಶದ ಬಯಿದೂರ ಸೇನಾಪತಿಯಾದ ತಮ್ಮಣ ಸೆಟ್ಟಿ, ತಾಯಿ ರಾಮಕ್ಕ, ಅಣ್ಣ ಸೋಮೇಶ, ತಮ್ಮ ದುರ್ಗ. ತಾನು ಸಂಗೀತಪುರದಾಸ್ಥಾನರಾಜಶ್ರೇಷ್ಟಿಯಾದ ಕಾಮಣಸೆಟ್ಟಿಯ ಅಳಿಯನೆಂದು ಹೇಳಿಕೊಂಡಿದ್ದಾನೆ. ಇವನ ಗುರು ಬೆಳುಗುಳದ ಪಂಡಿತಯೋಗಿಯ ಶಿಷ್ಯನಾದ ಪ್ರಭಾಚಂದ್ರ; ದೇವರು ಸಂಗೀತಪುರದ ನೇಮಿಜಿನೇಶ; ಸ್ವಾಮಿ : "ಗಂಡುಗಲಿಗಳ ಗಂಡ ಮಂಡಳಶ್ವರ ಹೈವನ್ನ ಪಸುತ" ಸಂಗೀತಪುರದ ದೊರೆ ಸಂಗಮ. ಈ ಸಂಗಮನ ಆಜ್ಞಾನುಸಾರವಾಗಿ ಗ್ರಂ ಥವನ್ನು ರಚಿಸಿದಂತೆ ಹೇಳುತ್ತಾನೆ. ಈಕವಿ ಸ್ತುತಿಸುವ ಗುರುಪರಂಪರೆಯಲ್ಲಿ ಕೊನೆಯವನು ವಿಜಯಕೀರ್ತಿಯ ಶಿಷ್ಯನಾದ ಶೂತಕೀರ್ತಿ, ಮದ ರಾಸ್ ಪ್ರಾತ್ಯಕೂಕಾಲಯದಲ್ಲಿರುವ ಬಿಳಿಗಿಯತಾಲ್ಲೂಕಿನ ಒಂದು ಶಾಸನದಿಂದ ಈ ಶ್ರುತಕೀರ್ತಿ ಸಂಗಮನಿಗೆ ಗುರುವಾಗಿದ್ದನೆಂದೂ ಇವನ ಶಿಷ್ಯಪರಂಪರೆಯಲ್ಲಿ 5 ನೆಯವನು ಕರ್ಣಾಟಕಕಬ್ದಾನುಶಾಸನಕಾರನಾದ ಭಟ್ಟಾಕಳಂಕನು (1604) ಎಂದೂ ತಿಳಿವುದರಿಂದ ಈ ಕ್ರುತಕೀರ್ತಿಯ ಸಮಕಾಲದವನಾದ ಕೋಟೇಶ್ವರನ ಕಾಲವು ಸುಮಾರು 1500 ಆಗ ಬಹುದು.
18