ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 ಕರ್ಣಾಟಕ ಕವಿಚರಿತೆ [16 ನೆಯ

ಸ್ತುತಿಸಿರುವುದರಿಂದ ಕುಮಾರವ್ಯಾಸ (ಸು. 143೦) ಕುಮಾರವಾಲ್ಮೀಕಿ (ಸು. 15೦೦) ಇವರುಗಳ ಕಾಲಕ್ಕೆ ಈಚೆಯವನು ಎಂಬುದು ಸ್ಪಷ್ಟವಾಗಿದೆ; ಸುಮಾರು 155೦ ರಲ್ಲಿ ಇದ್ದಿರಬಹುದು. ಈತನು ಅಂಡೆ ಕುರುಬ ಜಾತಿಯವನೆಂದೂ ವ್ಯಾಸರಾಯನ (ಸು. 1525) ಸೇವೆಯನ್ನು ಮಾಡಿ ಜ್ಞಾನಿಯಾದನೆಂದೂ ಕೆಲವರು ಹೇಳುತ್ತಾರೆ.

  ಇವನ ಗ್ರಂಥಗಳಲ್ಲಿ
             1. ಮೋಹನತರಂಗಿಣಿ 

ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 42, ಪದ್ಯ 2705. ಇದಕ್ಕೆ ಕೃಷಚರಿತ ಎಂಬ ಹೆಸರೂ ಉಂಟು. ಇದರಲ್ಲಿ ಮನ್ಮಥದಹನ, ಕಾಮೋತ್ಪತ್ತಿ, ಶಂಬರಾಸುರವಧೆ, ಅನಿರುದ್ಧನ ಲೀಲೆ, ಬಾಣಾಸುರವಿಜಯ ಮುಂತಾದ ವಿಷಯಗಳು ಹೇಳಿವೆ. ಈ ಗ್ರಂಥದ ಉತ್ಕೃಷ್ವತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-

 ರಸಿಕರ ಕರ್ಣಯುಗ್ಮವ ಪೊಕ್ಕು ಮುದದಿ ಹೃ| ದ್ಬಿಸಜವನಲರಿಚಿ ಮೈಗೆ |
 ಎಸವ ಪುಳಕದೊಸಗೆಯನಿತ್ತು ಶಿರವ ತೂ | ಗಿಸುವುದೀವಚನಾರಚನ ||
 ಹರಿಶರಣರ ಪೆರ್ಚು ಬುಧಜನರಿಗೆ ಮೆಚ್ಚು | ದುರಿತಾಟವಿಗೆ ಕಾಳ್ಕುಚ್ಚು |
 ವಿರಹಿಗಳಿಗೆ ಮಚ್ಚು ವೀರರ್ಗೆ ಪುಚ್ಚು ಕೇ | ಳ್ವರಿಗಿದು ತನಿಬೆಲ್ಲದಚ್ಚು ||
  ಗ್ರಂಥಾವತಾರದಲ್ಲಿ ರಾಮಾನುಜಸ್ತುತಿಯೂ, ತಾತಾಚಾರ್ಯಸ್ತುತಿಯೂ ಇವೆ. ಬಳಿಕ ಕವಿ ಶಿವ, ಬ್ರಹ್ಮ, ಕಾಗಿನೆಲೆಯರಂಗ, ಕೃಷ್ಣ, ಲಕ್ಷ್ಮಿ, ಕಾಶೀವಿಶ್ವನಾಥ, ಪಾರ್ವತಿ, ಸರಸ್ವತಿ, ಗಣೇಶ, ಆಂಜನೇಯ, ಗರುಡ, ಆದಿಶೇಷ, ಅಷ್ವದಿಕ್ಪಾಲಕಮನುಮುನಿಜನರು ಇವರುಗಳನ್ನು ಸ್ತುತಿಸಿ ಅನಂತರ ಬಲಿಪ್ರಹ್ಲಾದನಾರದವಿಭೀಷಣಧ್ರುವನಾರ್ಥವಿದುರಾ ಕ್ರೂರಭೀಷ್ಮಶುಕಶೌನಕಪುಂಡರೀಕಾದ್ಯರನ್ನೂ ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                  ದ್ವಾರಕೆ
 ದಂಡ ಸನ್ಯಾಸಿವರ್ಗದಲುಂಟು ಪುನರಪಿ | ದಂಡ ಗೋಪಾಲರಲುಂಟು |
 ದಂಡ ಪುಂಡ್ರೇಕ್ಷು ವಾಟಿಯಲುಂಟು ಮಿಕ್ಕಿನ | ದಂಡ ದೇಶಂಗಳಲಿಲ್ಲ ||
                       ಸೂರ್ಯಾಸ್ತ
ಅಣೆಯಟ್ಟಿ ಖಳರ ಖಂಡಿಸಿ ರಕುತವ ಕೆಂ। ದೋಣಿಯೊಳು ತೊಳೆದು ಚಕ್ರವನು