ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ವಿರೂಪಾಕ್ಷ ಪಂಡಿತ. 309

ತನಕಾವ್ಯಮಂ ಜಗತ್ಸೇವ್ಯಮಂ” ಎಂದು ಕವಿ ಹೇಳುತ್ತಾನೆ.ಇದರಿಂದ ಇವನ ಕಾಲಕ್ಕೆಹಿಂದೆಯೇ ಷಟ್ಸದೀರೂಪವಾದ ಗ್ರಂಥವನ್ನು ಆವನಿರ್ಬಂ ಧವೂ ಇಲ್ಲದೆ ಲಕ್ಷಣವಿರುದ್ಧವಾಗಿ ಬರೆಯುತ್ತಿದ್ದಂತೆ ತೋರುತ್ಯಗೆ, ತನ್ನ ಕಾವ್ಯದ ವಿಷಯವಾಗಿ

 ಕೆಳದೇವೋದೊಡೊಂದರಿಯೆನಿನಿಸಾದೊಡಂ| 
 ಕೇಳಿದೊಡೆ ಸಾಕವರ ಕಿವಿಯುಮಂ ಮನಮುಮಂ|
 ಕೋಳಹಿಡಿದೊಡನೆ 
 ನಿರ್ಮಲನನವರಸಮಹಾದುಗ್ಧವಾರಾಶಿಯೊಳಗೆ|| 
 ಎಂದೂ ಆಮಿಸದೆ ಬಿಡದೆನ್ನ ಕೃತಿ |
 ನುತಿವಡೆದ ಪದಿನೆಂಟುವರ್ಣನೆಗಳಿಂ ಸಮಾ |
 ಶ್ರಿತನವರಸಾದ್ಯಲಂಕಾರಂಗಳಿಂ ವಿಬುಧ |
 ತತಿ ಬಣ್ಣಿಸಂತುಸಿರುವೀಕಾವ್ಯಮತಿಸೇವ್ಯಮಾದುದು ||

ಎಂದೂ ಹೇಳಿದ್ದಾನೆ

  ಗ್ರಂಥಾವತಾರದಲ್ಲಿ ಪಂಪಾವಿರೂಪಾಕ್ಷಸ್ತುತಿ ಇದೆ, ಬಳಿಕ ಕವಿ 

ನಂದಿ ಭೃಂಗಿ ವೀರಭದ್ರ ಪಣ್ಮುಖ ಇವರುಗಳನ್ನು ಹೊಗಳಿ ಅನಂತರ ಪ್ರಭುದೇವನಿಂದ ಕಿನ್ನರಿಯಬೊಮ್ಮಯ್ಯನವರೆಗೆ ಪುರಾತನರನ್ನು ಸ್ಮರಿ ಸಿದ್ದಾನೆ.

  ಈ ಗ್ರಂಥವು ಕವಿಯ ಕಾಲಕ್ಕೆ ಹಿಂದೆ ಇದ್ದ ವೀರಶೈವಪುರಾತನರ ಮತ್ತು ಕವಿಗಳ ಕಾಲವನ್ನು ನಿರ್ಣಯಿಸುವುದಕ್ಕೆ ಬಹಳಮಟ್ಟಗೆ ಉಪ 

ಕಾರಕವಾಗಿದೆ ಅಲ್ಲದೆ ಚರಿತ್ರೆಗೆ ಸಬಂಧಪಟ್ಟ ಕೆಲವಂಶಗಳೂ ಇದ ರಲ್ಲಿ ಹೇಳಿವೆ:-

   ಶಕ 800 ನೆಯ ವಿಳಂಬಿಯಲ್ಲಿ (878) ಹೊಯ್ಸಳನಿಗೆ ಪಟ್ಟವಾಯಿತು. ಕಮ್ಮಟದ ಕಂಪಿಲನೂ ಅವನ ಮಗ ರಾಮನಾಥನೂ ತುರುಕರೊಂದಿಗೆ ಕಾದಿ ಮಡಿ

- - - - - - - - - - - - - - - - - - -

  1. ಪ್ರಭುದೇವ, ಬಸವ, ಚೆನ್ನ ಬಸವ, ಸಿದ್ದರಾಮ, ಮಹದೇವಿಯಕ್ಕ. ಮಡಿವಳಮಾಚ, ಮರಳುಶಂಕರದೇವ, ಶಂಕರದಾಸಿಮಯ್ಯ, ಸಕಳೇಶಮಾದಿ ರಾಜ, ಸಾನಂದಮುನಿ, ಕೇಶಿರಾಜ, ಮುನಿರಾಜ, ಕರಿಕಾಲಚೋಳ, ಕಾಳರಾಜ, ಕರುಳಕೇತಯ, ಕಾಚಿರಾಜ, ಕಿನ್ನರಿಯ ಬೊಮ್ಮಯ್ಯ.