ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಿನಿಧಿಯ ನಾಣ್ಯಗಳಲ್ಲಿ ಅವನ ಹೆಸರೂ ವೃಷಭವೂ ಬೋಧಿವೃಕ್ಷವೂ ಕತ್ತಲ್ಪಟ್ಟಿವೆ. ಈ ವಿಷಯಗಳ, ಆಲದರಾಜರ ಸಂಬಂಧವನ್ನು ತೋ ರಿಸುತ್ತವೆ. ಈ ಮೇಲೆ ಹೇಳಿದ ಮಳವಳ್ಳಿಯ ನಕ್ಷತಶಾಸನದ ಕೆಳಗೆ ಸುಮಾರು 3ನೆಯ ಶತಮಾನದ ಮಧ್ಯಭಾಗದಲ್ಲಿ ಲಿಖಿತವಾದ ಮ ತೊಂದು ಪ್ರಾಕೃತ ಶಾಸನವಿದ ಇದರಲ್ಲಿ ಒಬ್ಬ ಕದಂಬರಾಜನು ಅದೇ ಈಶರದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ, ಅಲ್ಲದೆ ಹಿಂದೆ ಹೇಳಿದ ತಾಳಗುಂದದ ಶಾಸನದಲ್ಲಿ ಕದಂಬ ರಾಜನಾದ ಕಾಕು ತೃ ವರ್ಮನು ಪ್ರಣವೇ ಶರ ದೇವರಿಗಾಗಿ ಒಂದು ಕೆರೆಯನ್ನು ಕಟ್ಟಿಸಿ ದಂತೆ ಹೇಳಿದೆ. ಈ ಕೆರೆ ಪುಣನೇಶ-ರ ದೇವಸ್ಥಾನದ ಇದಿರಿಗೆ ಇದೆ. ಇದನ್ನು ಈಗಲೂ ಪಣಮನ ಕೆರೆ ಎಂದು ಕರೆಯುತ್ತಾರೆ. ಪಣನ ಎಂಬುದು ದೇವರ ಹೆಸರಿನ ಆದಿಭಾಗವಾದ ಪ್ರಣವ ಎಂಬುದರ ಅಪ ಭಂಶವಾಗಿದೆ ಈ ಕಾ ಕುತ್ರನ ನು ಗುಪ್ತರಾಜರಲ್ಲಿ ಪ್ರಸಿದ್ಧನಾದ ಸಮುದ್ರಗುಪ್ತನ (330-375) ಸಮಕಾಲದವನಾಗಿ ಅವನೊಡನೆ ವಿವಾಹ ಸಂಬಂಧವನ್ನು ಪಡೆದಿದ್ದಂತೆ ತಿಳಿಯುತ್ತದೆ. ಈ ವಿಷಯಗಳು ಕದಂ ಬರ ಸಂಬಂಧವನ್ನು ಸೂಚಿಸುತ್ತವೆ. ಜೈನಸಂಘವು ಪುನ್ನಾಟ ರಾಷ್ಟ್ರಕ್ಕೆ ಪ್ರಯಾಣವಾಡಿದಂತೆ ಹಿಂದೆ ತಿಳಿಸಿದೆ, ಈ ಪುನ್ನಾಟಾ ವು ಮೈಸೂರು ಸೀಮೆಯ ದಕ್ಷಿಣಭಾ ಗದಲ್ಲಿ ಇದ್ದಿತು. ಇದನ್ನು ರಾಷ್ಟ್ರ ವರ್ಮನೇ ಮೊದಲಾದ ರಾಜರು ಕೀರ್ತಿಪುರವೆಂಬ ರಾಜಧಾನಿಯಲ್ಲಿ ನೆಲಸಿ ಆಳಿದರು, ಇದಕ್ಕೆ ಕನ್ನಡ 1. ಈ ಶ• ಸನವ್ರ ಸಂಸ್ಕೃತದಲ್ಲ ಒಂದಿದೆ, ಇದು ಬರೆದ ಕವಿಗೆ ಕುಬ್ಬ ಒಂದು ಹೆಸರು, ಇ೯ರ ಆಧ, ಆg೦ ವಾದ ಛಂದಸ್ಸಿನಲ್ಲಿ ಬರೆದಿರುವ 21 ಪದ್ಯಗಳಿವೆ, ಇವುಗಳ ಅಕ್ಷಣವು ಯಾವ ಛಂದೋಗ್ರಂಧದಲ್ಲಿಯೂ ಉಕ್ತವಾಗಿ ರುವಂತೆ ತೋರುವುದಿಲ್ಲ, ಉದಾಹರಣೆಗಾಗಿ ಒಂದು ಪದ್ಯವನ್ನು ಇಲ್ಲಿ ಬರೆಯುತ್ತೇನೆ: ಜಯತಿ ವಿಶ್ವ ವೇದಸಂಘಾತಿ ನಿಶ್ಚಿತೃಕಮರ್ತಿಃ ಸನಾತನಃ || ಸ್ಟಾಣುರಿಂದುರಶ್ಮಿ ಎಚ್ಚರಿತದ್ಯುತಿಯಜ್ಜಾಭಾರಮಂಡನಃ |