ಈ ಪುಟವನ್ನು ಪ್ರಕಟಿಸಲಾಗಿದೆ



श्री गणेशाय नमः।

ಪ್ರಬಂಧ ಪರಿಚಯ.

  • “महाराष्ट्र आणि कर्नाटक निराळीं नाहींत. दोघांमध्ये एकच रक्त खेळत आहे; दोघांची भाषा एकच ह्मणजे कानडी ही होती. भाषेच्या बाबतीत महाराष्ट्र बाटून मराठी झाले आहे."
- लोकमानय टिळक.

“ಮಹಾರಾಷ್ಟ್ರ ಬೇರೆ, ಕರ್ನಾಟಕ ಬೇರೆ ಅಲ್ಲ. ಎರಡರಲ್ಲಿಯೂ ಒಂದೇ ರಕ್ತವು ಆಡು ಇದೆ; ಎರಡೂ ದೇಶಗಳ ಭಾಷೆಯು ಒಂದೇ ಅಂದರೆ ಕನ್ನಡವಿತ್ತು. ಭಾಷೆಯ ವಿಷಯದಲ್ಲಿ ಮಹಾರಾಷ್ಟ್ರವು ಕುಲಗೆಟ್ಟು ಮರಾಠಿಯಾಗಿರುತ್ತದೆ.”

- ಲೋಕಮಾನ್ಯ ಟಿಳಕ.

ರ್ತಮಾನಕಾಲವೆಂಬ ವೃಕ್ಷಕ್ಕೆ ಭೂತಕಾಲವೇ ಬೀಜ; ಭವಿಷ್ಯ ಕಾಲವೇ ಫಲ; ಭವಿಷ್ಯಕಾಲದ ರಾಷ್ಟ್ರೀಯ ಫಲವನ್ನು ಪಡೆಯಲಪೇಕ್ಷಿಸುವವರು ಭೂತ ಕಾಲದ ಬೀಜ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಆವಶ್ಯವು, ಈ ದೃಷ್ಟಿಯಿಂದ ನೋಡಲು, ರಾಷ್ಟ್ರೀಯ ಕಾರ್ಯಕ್ಕೆ ಇತಿಹಾಸವು ಹೇಗೆ ಸಾಧನವಾಗುವುದೆಂಬುವುದು ಮನವರಿಕೆಯಾಗುವುದು. ಭರತ ಭೂಮಿಯ ಮಿಕ್ಕ ಜನಾಂಗಗಳು ತಮ್ಮ ತಮ್ಮ ಇತಿಹಾಸವನ್ನು ಹುರುಪಿನಿಂದ ಅಭ್ಯಾಸಮಾಡುತ್ತಿರಲು ನಮ್ಮ ಕರ್ನಾಟಕವು ಇನ್ನೂ ಕುಂಭಕರ್ಣ ನಿದ್ರೆಯಲ್ಲಿಯೇ ಮಲಗಿದೆ. ಆದುದರಿಂದ, "ಕರ್ನಾಟಕ ಮಾಹಾತ್ಮ್ಯ"ವನ್ನು ಹೊಗಳಿ, ಇನ್ನೂ ಎಚ್ಚರಾಗದಿದ್ದ ತರುಣರನ್ನು ಎಚ್ಚರಿಸಬೇಕೆಂದು ಈ ಪ್ರಬಂಧವನ್ನು ಕೈಕೊಂಡಿದ್ದೇವೆ.
ಇದು ಕೇವಲ ಇತಿಹಾಸವಲ್ಲ;ಆದರೆ ಕಟ್ಟು ಕಥೆಯೂ ಅಲ್ಲ, ಕರ್ನಾಟಕದ ಇತಿಹಾಸದೊಳಗಿನ ಚಿತ್ತಾಕರ್ಷಕವಾದ ಹಲಕೆಲವು ಸಂಗತಿಗಳನ್ನು ಅನೇಕ ಪುಸ್ತಕಗಳಿಂದ ಆರಿಸಿ, ನಮಗೆ ತೋರಿದ ಕೆಲವು ವಿಧಾನಗಳನ್ನು ಅವು

  • ಇದು, ಲೋಕ ಮಾನ್ಯರವರು ತಾ:೨೬-೧೧-೧೯೦೭ ನೆಯ ಇಸವಿಯ ದಿವಸ ಗುರ್ಲಹೊಸೂರಿನಲ್ಲಿ ಮಾಡಿದ ಭಾಷಣದೊಳಗಿನ ಅವತರಣಿಕೆಯು. -ವೆ.ಭೀ.ಆಲೂರ.