ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ wwwMMwwwMMAMMAMMwwwwMMMIMM ಇಲ್ಲದೆ ಲೋಕವೆಲ್ಲಾ ರಾಮರಾಜ್ಯವಾಗಿ ಪರಿಣಮಿಸುವುದು, ಕೊಡು ವುದು ತೆಗೆದುಕೊಳ್ಳುವುದು ಅಂದರೆ ಪರಸ್ಪರವಾಗಿ ಗುಣವನ್ನು ಕೊಟ್ಟು ಗುಣವನ್ನು ಪಡೆಯುವುದು ಎಂಬುದರಲ್ಲಿ ನೀತಿಯ ಅರ್ಥವೆಲ್ಲಾ ಅಡಕ ವಾಗಿದೆ. ಯಾರೂ ಇನ್ನೊಬ್ಬರ ಹಂಗಿಲ್ಲದೆ ಬಾಳುವುದಕ್ಕಾಗುವುದಿಲ್ಲ. ಪ್ರತಿಯೊಬ್ಬರೂ ಅನ್ನ, ಬಟ್ಟೆ, ವಿದ್ಯೆ, ಬುದ್ಧಿ, ಇಂತಹ ಯಾವ ಅಂಶದಲ್ಲಿ ಯಾದರೂ, ಇತರರ ಹಂಗಿಗೆ ಒಳ ಪಡದೆ ಬಾಳುವುದಕ್ಕೆ ಆಗುವುದೇ ಇಲ್ಲ. - ನಡತೆಯು ಒರೀ ತಿಳಿವಳಿಕೆಗಿಂತ ಮುಖ್ಯವಾದುದು. ಲೋಕದಲ್ಲಿ ಉಸಕಾರಾಚರಣೆಗಳು ನಡತೆಯಿಂದಲ್ಲದೆ ಬರಿ ತಿಳಿವಳಿಕೆಯಿಂದಲ್ಲ. ಒಂದುವೇಳೆ ಒಬ್ಬ ಮನುಷ್ಯನು ವಿದ್ಯಾಬುದ್ಧಿಗಳಲ್ಲಿ ಎಷ್ಟೇ ಹಿ೦ದಾಗಿದ್ದರೂ, ಒಳ್ಳೆಯ ನಡತೆಯುಳ್ಳವನಾಗಿದ್ದರೆ ಅವನಿಂದ ಇತರರಿಗೆ ಏನೂ ತೊಂದರೆ ಯಾಗದಿರುವುದು ಮಾತ್ರವಲ್ಲದೆ ಉತ್ತಮವಾದ ಸಹಾಯವೂ ಆಗುವುದು. ನಮ್ಮ ದೇಶದರೈತರನ್ನು ಈ ವಿಷಯದಲ್ಲಿ ಉದಾಹರಿಸಬಹುದು. ತಿಳಿವ ೪ಕಯನ್ನು ಮಾತ್ರ ಪಡೆದು ನಡತೆಯ ಹಾದಿಯನ್ನೇ ಅರಿಯದ ಮನುಷ್ಯ ನಿಂದಲಾದರೋ ಯಾರಿಗೂ ಏನೂ ಸಹಾಯವಾಗದೆ ಎಲ್ಲವೂ ಸ್ವಾರ್ಥದಲ್ಲಿ ಯೇ ಮುಗಿವುದು, ಇಷ್ಟೇ ಅಲ್ಲ ತಿಳಿವಳಿಕೆಯು ಕೆಟ್ಟ ನಡತೆಯೊಡನೆ ಬೆರೆತರೆ ಇತರರಿಗೆ ಬಹಳ ಅನರ್ಥಗಳನ್ನುಂಟುಮಾಡುತ್ತ ಲೋಕಕಂಟಕ ವಾಗುವುದು ಹೇಗೆಂದರೆ-ಕೇವಲ ವಿದ್ಯಾವಂತರೂ ಕುಶಾಗ್ರಬುದ್ದಿಗಳ ಆದವರನೇಕರು ಕೇವಲ ಹೀನವಾದ ದುಷ್ಕೃತ್ಯಗಳನ್ನು ಮಾಡಿ ತಾವೂ ಕೆಡುತ್ತಲೂ ಸಾಂಕ್ರಾಮಿಕ ಜಾಡ್ಯಗಳಂತೆ ಇತರರನ್ನೂ ಕೆಡಿಸುತ್ತಲೂ ಇರುವರು. ದುರಾರ್ಗದಲ್ಲಿ ಪ್ರವರ್ತಿಸಿದ ತಿಳಿವಳಿಕೆಯಿಂದ ಉಂಟಾಗತಕ್ಕೆ ಅನರ್ಥಗಳು ಸಾಧಾರಣವಾದುವುಗಳು. ಮನುಷ್ಯನು ಹೇಗಿರುವನೆಂಬುದು ಅವನ ರೂಪ, ಸಂಪತ್ತು, ಅಧಿ ಕಾರ, ಯೌವನ, ಪದವಿ-ಇಂತಹವುಗಳಿಂದ ನಿರ್ಧರಿಸಲ್ಪಡತಕ್ಕುದಲ್ಲ