ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಆಟದಲ್ಲಿ ಕೂಡ ಸತ್ಯವಾಗಿ ನಡೆಯುಬೇಕಲ್ಲದೆ ಮೋಸಮಾಡಬಾ ರದು, ಒಂದುವೇಳೆ ನಾವು ಸೋತರೂ ಜೋಲುಮುಖವನ್ನು ಹಾಕಿ ಕೊಂಡು ಅಥವಾ ಸಿಡಿಗುಟ್ಟುತ್ತ ಇರಬಾರದು. ಆಗ ನಗುನಗುತ ಇರ ಬೇಕು, ಒಂದು ಪಂಗಡದವರು ಸೋತ ಮಾತ್ರಕ್ಕೆ ಮತ್ತೊಂದು ಪಂಗಡ ದವರು ಗೆದ್ದಂತೆ ಆಗುವುದಿಲ್ಲ, ಪ್ರತಿಯೊಂದು ಆಟದಲ್ಲೂ ಪ್ರತಿ ಪಂಗಡ ದವರೂ ಯಾವಾಗಲಾದರೂ ಗೆದ್ದೇ ತೀರಬೇಕು ಆದುದರಿಂದ ನಾವು ಸೋತಾಗಲೂ ಎದೆಗುಂದದೆ ಇನ್ನು ಮುಂದಕ್ಕಾದರೂ ಗೆಲಾ ವೆವೆಂಬ ಆಸೆ ಯಿಂದ ನ್ಯಾಯವಾಗಿಯ ಕಷ್ಟಪಟ್ಟ ಆಡಬೇಕು, ಯಾವಾಗಲೂ ನಾವೇ ಗೆಲ್ಲುವುದಕ್ಕೆ ಆಗುವುದಿಲ್ಲ, ಮತ್ತು ಹಾಗೆ ಸದಾ ಗೆಲ್ಲುವುದು ಒಳ್ಳೆಯ ದೂ ಅಲ್ಲ, ಯಾಕೆಂದರೆ-ಗೆದ್ದವರಿಗೆ ಹಂಬ ಬರುವುದು, ಮತ್ತು ಸೋತವರು ನಿರಾಶೆ ಮುಳ್ಳವರಾಗುವರು. ಆಟದಲ್ಲೂ ಎಲ್ಲರಿಗೂ ಒಳ್ಳೆಯವರಾಗಿರಬೇಕು. " ಎಲ್ಲಾ ಆಟ ಗಾರರಿಗೂ ಗೆಳೆಯರಾಗಿರಬೇಕು. ಆಡುವಾಗ ನಮ್ಮ ಇಷ್ಟದಂತೆ ನಡೆಯ ದಿದ್ದರೆ ಅಥವಾ ಅಕಸ್ಮಾತ್ತಾಗಿ ಉಡುಪುಗಳು ಹರಿದು ಹೋದರೆ ಜಗಳ ವಾಡುವುದು, ಸೋತವರನ್ನು ಅಥವಾ ಗೆದ್ದವರನ್ನು ಅಡ್ಡ ಹೆಸರಿಟ್ಟು ಕರೆಯುವುದು ಮುಂತಾದುದು ಸರಿಯಲ್ಲ. ಇದು ಒರಟುತನ ಮತ್ತು ಕೈಲಾಗದ ಹೇಡಿತನ, ನಮ್ಮಿಂದ ಇತರರಿಗೆ ಪೆಟ್ಟಾದರೆ ಅವರನ್ನು ವಿಚಾ ರಿಸದೆಯೇ ನನ್ನಷ್ಟಕ್ಕೆ ನಾವು ಆಡಿಕೊಂಡಿರುವುದು ಯೋಗ್ಯವಲ್ಲ, ಅದು ಸ್ವಾರ್ಥಪರತೆ. ಆಡುವಾಗ ಒರಟುತನದಿಂದ ನಡೆಯುವುದು ಬಲು ಕೆಟ್ಟುದು. ನಮಗಿಂತ ಸಣ್ಣ ವಯಸ್ಸಿನವರೂ ಕೈಲಾಗದವರೂ ನಮ್ಮ ಸಂಗಡ ಆಡುತ್ತ ಇದ್ದಾಳು ; ಆದುದರಿಂದ ಬಲು ಎಚ್ಚರಿಕೆಯಿಂದಿರಬೇಕು. “ಭ ಕಾವಾಗಲೂ ಆಟದಲ್ಲಿ ಕಾಲವನ್ನು ಕಳೆಯಬಾರದು. ಟ ಕ