ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮ wmmmonw ಈಚೆಗೆ ಬಂದುಬಿಟ್ಟರೆ ಮೈಯ ಮೇಲ್ಬಾಗವು ಶುಚಿಯಾಗುವುದು. ಆದ ಕ್ಯಾಗಿ ನಿತ್ಯವೂ ತಪ್ಪದೆ ಸ್ನಾನಮಾಡಬೇಕು. ಬಿಸಿನೀರಿನ ಸುನವು ಎಲ್ಲ ರಿಗೂ ಹಿತಕರ, ಬಂಟುವುದಾದರೆ ತಣ್ಣೀರಿನ ಸ್ನಾನವು ಬಹಳ ಒಳ್ಳೆಯದು. ನಿತ್ಯವೂ ಸುನವಾದನಂತರ ಒರಟಾದ ಮಡಿಬಟ್ಟೆಯಿಂದ ಚೆನ್ನಾಗಿ ಉಜ್ಞೆ ಒರಸಿಕೊಳ್ಳಬೇಕು, ಇದರಿಂದ ರಕ್ತ ಪರಿಚಲನೆಯು ಕ್ರಮಪಟ್ಟು ಶಾಖವೂ ಹುಟ್ಟುವುದು, ಶೈತ್ಯಕ್ಕೂ ಅವಕಾಶವಿರುವುದಿಲ್ಲ, ಊಟವಾದಕೂಡಲೆ ಸುನ ಮಾಡಬಾರದು, ಅಭ್ಯಂಜನ ಸ್ನಾನವಾದಮೇಲೆ ಥಟ್ಟನೆ ಶೀತಾಸ್ಪದ ವಾಗುವ ಪ್ರಕೃತಿಯುಳ್ಳವರು ಸುನವಾದಕೂಡಲೆ ಬೇಗ ಒರಸಿಕೊಂಡು ಬಳಿಕ ಶಾಖವಾದ ಒಟ್ಟೆಗಳನ್ನು ಹೊದೆದು ಮಲಗಿಕೊಳ್ಳಬೇಕು, ನಿತ್ಯವೂ ರಾತ್ರಿ ಮಲಗಿಕೊಳ್ಳುವುದಕ್ಕೆ ಮೊದಲು ಕೈಗಳನ್ನೂ ಮುಖವನ್ನೂ ಚೆನ್ನಾ ಗಿತೊಳೆದುಕೊಳ್ಳಬೇಕು, ಇದಕ್ಕೆ ಬಿಸಿಸಿರಾದರೆ ಒಳ್ಳೆಯದು, ಇದರಿಂದ ಚೆನ್ನಾಗಿ ನಿದ್ರೆ ಬರುವುದು, ಮತ್ತು ಪದೇಪದೇ ಕೈಕಾಲುಗಳನ್ನು ತೊಳ ದುಕೊಳ್ಳುವುದರಿಂದ ಬಹಳ ಪ್ರಯೋಜನವುಂಟು. ಹಾಗಿಲ್ಲದೆ ಬೆವರಿರುವ ಕೈಗಳಿಂದ ಶುಚಿಯಾದ ವಸ್ತುಗಳನ್ನು ಮುಟ್ಟುವುದು, ಆಹಾರವನ್ನು ತೆಗೆ ದುಕೊಳ್ಳುವುದು ಇತ್ಯಾದಿಗಳು ಅಸಹ್ಯಕರ ಮತ್ತು, ಅನಾರೋಗ್ಯಕರ ವಿಶೇಪಗಂಧವುಳ್ಳ ಸಾಬೂನುಗಳನ್ನು ಮೈಗೆ ಉಪಯೋಗಿಸಬಾರದು. ಕಿವಿಯ ಒಳಗೂ ಹೊರಗೂ ಸದಾ ಶುಚಿಯಾಗಿಲಬೇಕು, ಗುಗ್ಗೆಯನ್ನು ತೆಗೆಯುವುದಕ್ಕೆ ಮೊನೆಯಾದ ವಸ್ತುಗಳನ್ನು ಉಪಯೋಗಿಸಕೂಡದು. ಯಾಕೆಂದರೆ ಆಯತಪ್ಪಿ ಅವೇನಾದರೂ ಒಳಕ್ಕೆ ತಗುಲಿಬಿಟ್ಟರೆ ದೊಡ್ಡ ಗಂಡವು ಸಂಭವಿಸೀತು. ಆಗಾಗ್ಗೆ ಮುಖ್ಯವಾಗಿ ಬೆಳಗಿನವೇಳಗಳಲ್ಲಾ ದರೂ ಮತ್ತು ದೂರದ ಪ್ರಯಾಣಮಾಡಿದನಂತರವೂ ಕಣ್ಣುಗಳನ್ನು ಸಹಿ ನೀರಿನಿಂದ ತೊಳೆದುಕೊಳ್ಳುವುದು ಒಳ್ಳೆಯದು. ತಲೆಯು ನಿಲವಾಗಿರ ಬೇಕಾದರೆ ನಿತ್ಯವೂ ಶಿರಸ್ಸಾನಮಾಡುವುದು, ಬಾಚಿಕೊಳ್ಳುವುದು, ಇವೆ