ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಳ ರಿಂದಲೇ ದೇಹಕ್ಕೆ ಕೊಡಬೇಕಾದಷ್ಟು ಎಚ್ಚರಿಕೆಯು ಗೇಹದ ವಿಷಯ ದಲ್ಲೂ ಆವಶ್ಯಕವೆನ್ನುವರು, ಕೆಲಸಕ್ಕೆ ಬಾರದ ಮತ್ತು ಕೊಳೆಯಾದ ಸಾಮಾನುಗಳನ್ನು ಮನೆಯಲ್ಲಿ ಇಟ್ಟಿರಬಾರದು, ಇದರಿಂದ ಕಳೆಯು ಹೆಚ್ಚಿ ರೋಗಾದಿಗಳುಂಟಾಗುವುವು. ಆದುದರಿಂದ ಅಂತಹವುಗಳನ್ನೆಲ್ಲಾ ಸುಟ್ಟು ಬಿಡುವುದುತ್ತಮು. ಬಚ್ಚಲುಗಳನ್ನು ಆಗಾಗ್ಗೆ ತೊಳೆಯುತ್ತ ಕುಜೆ ಯಾಗಿಟ್ಟಿರಬೇಕು, ಗೋಡೆಗಳಿಗೆ ವರ್ಷಕ್ಕೆರಡುಸಲವಾದರೂ ಸುಣ್ಣವನ್ನು ತೊಡೆಯಿಸಬೇಕು, ಹೆಂಚಿನ ಮನಯಾದರೆ ತಪ್ಪದೆ ವರ್ಷಕ್ಕೊಂದು ಸಲ ಹೆಂಚುಗಳನ್ನು ಕೈಯಾಡಿಸಬೇಕು. ನೆಲವು ಮಣ್ಣಿನದಾಗಿದ್ದರೆ ಕೆಲವು ವರ್ಷ ಗಳಿಗೊಂದುಸಲವಾದರೂ ಹಳೆಯ ಮಣ್ಣನ್ನು ತೆಗೆಯಿಸಿ ಹೊಸ ಮಣ್ಣನ್ನು ಹಾಕಿಸಬೇಕು, ಮನೆಯಲ್ಲಿ ಯಾವ ವಿಧವಾದ ಕಟ್ಟ ನಾತವು ಕಂಡು ಬಂದರೂ ಅಲಕ್ಷ್ಯಮಾಡದೆ ಥಟ್ಟನೆ ಅದರ ಕಾರಣವನ್ನು ಕಂಡು ಹಿಡಿದು ಅದನ್ನು ತಪ್ಪಿಸಬೇಕು. ಮುಖ್ಯವಾಗಿ ಸ್ಥಗಿನ ಕಾಲ ದಲ್ಲಿ ಈ ವಿಷಯವಾಗಿ ಬಲು ಎಚ್ಚರಿಕೆಯಿಂದಿರಬೇಕು, ಮನೆಯಲಿ ಮೇಲ್ಗಡೆಯ ಕಿಟಕಿಗಳನ್ನು ಸರ್ವದಾ ತೆರೆದಿರಬೇಕು, ಗಾಳಿಯ ಕಾಲ ದಲ್ಲಿ ಬಿರುಗಾಳಿಯ ರಭಸವನ್ನೂ ಬೇಸಗೆಯಲ್ಲಿ ಬಿಸಿಲಿನ ಜಳವನ್ನೂ ತಡೆ ಯುವುದಕ್ಕೋಸ್ಕರ ಕಿಟಕಿಗಳಿಗೆ ಗೌಸು ಹಾಕಿರುವುದು ಮೇಲು. ಮನೆಯ ಒಳಗಡೆ ಮಾತ್ರವಲ್ಲದೆ ಹೊರಗಡೆಯೂ ಬಹಳ ನಿರಲವಾಗಿರ ಬೇಕು. ವಾಸ ಮಾಡತಕ್ಕ ಮನೆಯ ಅಂಗಳದಲ್ಲಿ ಕೂಡ ಪಶುಗಳನ್ನು ಕಟ್ಟಕೂಡದು ಬೀದಿಕಸ, ಬಚ್ಚನೀರು ಮೊದಲಾದುವು ದೂರವಾಗಿ ಸಾಗಿಹೋಗುವುದಕ್ಕೆ ತಕ್ಕ ಏರ್ಪಡುಗಳನ್ನು ಮಾಡಿರಬೇಕು, ಮನೆ ಯ ಹತ್ತಿರ ಎತ್ತರವಾಗಿ ಬೆಳೆದ ಹುಣಿಸೆ ಮೊದಲಾದ ಯಾವ ದೊಡ್ಡ ಮರ ಗಳೂ ಇರಕೂಡದು, ಸುತ್ತಲೂ ಸಣ್ಣ ಪುಟ್ಟ ಹೂ ಗಿಡಗಳು ಮಾತ್ರ ಇರಬಹುದು, ಮನೆಯ ಯಾವ ಭಾಗದಲ್ಲೂ ಪಕ್ಷಿಗಳು ಗೂಡು ಕಟ್ಟಿ