ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ರ್ಕಟಿಕಗ್ರಂಥಮಾಲೆ ಯಿಂದಲೂ ಇತರರ ಪ್ರೋತ್ಸಾಹದಿಂದ ಕೆಲಸಮಾಡುವುದಕ್ಕೆ ಉಲ್ಲಾ ಸವು ಹೆಚ್ಚುತ್ತದೆ. ಮೂರುನಾಲ್ಕು ದಿನಗಳು ನಡೆಯತಕ್ಕ ಬಂದಾನೊಂದು ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲನೆಯ ದಿನ ತಾನು ಬರೆದ ಉತ್ತರಗಳಲ್ಲಿ ಕೆಲವು ತಪ್ಪೆಂದೂ ಆದುದರಿಂದ ಆ ಭಾಗದಲ್ಲಿ ತೇರ್ಗಡೆಯಾ ಗುವುದಕ್ಕೆ ಬರಬೇಕಾದುದಕ್ಕಿಂತ ಕಡಿಮೆ ಅಂಕಗಳು ಬರಬಹುದಾಗಿಯೂ ಯೋಚಿಸಿ ಹೆದರಿಕೊಂಡು ಇನ್ನು ಮುಂದಿನ ದಿನಗಳಲ್ಲಿ ನಡೆಯತಕ್ಕ ಪರೀ ಕ್ಷಿಗಳಿಗೆ ಸಂಬಂಧಪಟ್ಟ ಪಾಠಗಳನ್ನು ಓದಲಿಕ್ಕೂ ಪುನಃ ಪರೀಕ್ಷಾಮಂದಿ ರವನ್ನು ಪ್ರವೇಶಿಸಲಿಕ್ಕೂ ಕೂಡ ಮನಸ್ಸಿಲ್ಲದೆ ಹತಾಶನಾಗಿದ್ದನು. ಆ ವೇಳಗೆ ಮಾರ್ಗವಶಾತ್ ಅವನ ಉಪಾಧ್ಯಾಯರು ಅಲ್ಲಿಗೆ ಬಂದು ಅದ ನ್ನೆಲ್ಲಾ ತಿಳಿದು ಆ ವಿದ್ಯಾರ್ಥಿಗೆ ಧೈಯ್ಯಹೇಳಿ ಇನ್ನು ಮುಂದಿನ ದಿನಗಳ ೭ಯ ಚೆನ್ನಾಗಿ ಉತ್ತರ ಬರೆದರೆ ಖಂಡಿತವಾಗಿಯ ತೇರ್ಗಡೆಯಾಗುವ ನೆಂದು ಭರವಸಹೇಳಲು ಆ ವಿದ್ಯಾರ್ಥಿಯು ಉತ್ಸಾಹಗೊಂಡು ಮುಂದಕ್ಕೆ ಸರಿಯಾಗಿ ವ್ಯಾಸಂಗಮಾಡಿ ತೃಪ್ತಿಕರವಾಗಿ ಉತ್ತರ ಬರೆದು ಕಡೆಗೆ ಪರೀ ಕೈಯಲ್ಲಿ ಉತ್ತೀರ್ಣನಾಗಿಯೇ ಆದನು. ಫುಟ್‌ಬಾಲ್ ಕ್ರಿಕೆಟ್‌ ಮೊದಲಾದ ಆಟಗಳನ್ನು ಆಡುತ್ತಿರುವಾಗಲೂ ಕುಸ್ತಿಗಳಲಿಯ ಜನಗಳು ಅವರವರ ಪಕ್ಷದವರಿಗೆ ಉತ್ತೇಜಕವಾಗು ನಂತ' ಸೈ ಶಾಬಾಸ್ ' ಬೇಷ್ ಭಲಾಅಪ್ಪ ಎಂಬಂಥ ಮಾತುಗಳಿಂದ ಜಯಘೋಷಗಳಿಂದಲೂ ಹುರಿದುಂಬಿಸುವುದರಿಂದ ಆಟಗಾರರು ತಕ್ಕಷ್ಟು ಉತ್ಸಾಹಗೊಂಡು ಹೋರಾಡಿ ತಾವು ಗೆಲ್ಲುವುದರಲ್ಲಿ ತಮ್ಮ ಸಂಶ ಯನ್ನೂ ವಿನಿಯೋಗಿಸುವರು. ಆದುದರಿಂದ ಪ್ರೋತ್ಸಾಹವು ಉಲ್ಲುಶ ವನ್ನೂ ತನ್ಮೂಲಕವಾಗಿ ಶಕ್ತಿಯನ್ನೂ ಹೆಣ್ಣಿಸುವುದೆಂದಾಯಿತು.: ಉತ್ಸಾಹವು ಈ ಮೇಲೆ ಹೇಳಿದ ಮಾರ್ಗಗಳಲ್ಲಿ ಹುಟ್ಟಿದರೆ ಮಾತ್ರ ಉತ್ತಮವೇ ಹೊರತು ಮಾದಕವಸ್ತುಗಳ ಸೇವನೆಯಿಂದಲಾದರೆ ಅನಥ್