ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡವಳಿ ೮ ತ್ರವಲ್ಲದ ನೋಟದಿಂದ ಕೂಡ ವ್ಯಕಪಡುವುದುಂಟು. ಒಂದಾನೊಂದು ಫೆರಯುದ್ದದಲ್ಲಿ ಸಿದ್ದಿ ಎಂಬ ದಳಪತಿಯು ಮರಣದಾಹಪೀಡಿತನಾಗಿದ್ದು ನೀರನ್ನು ಕುಡಿಯಬೇಕೆಂದು ಕೈಯೆತ್ತಿದಾಗ ಇನ್ನೊಬ್ಬ ಯೋಧನೂ ತನ್ನಂತೆಯೇ ತಲ್ಲಣಿಸುತ್ತಿದ್ದುದನ್ನು ಕಂಡು ಆ ನೀರನ್ನು ಅವನಿಗೇ ಕೊಟ್ಟುಬಿಡಲು ಆ ಯೋಧನು ಇನ್ನು ಯಾವುದಕ್ಕೂ ಚೈತನ್ಯವಿಲ್ಲದುದರಿಂದ ದೃಷ್ಟಿಯಿಂದಲೇ ಸಿಡ್ನಿಗೆ ತನ್ನ ಕೃತಜ್ಞತೆಯನ್ನು ತೋರಿಸಿದನಂತೆ ! ಉಪಕಾರಿಗಳ ಜೀವಿತ ಕಾಲಾನಂತರವೂ ಆವರಿಗೆ ಕೃತಜ್ಞತಯ ನ್ನು ತೋರಿಸುವುದಕ್ಕೆ ಅಥವಾ ಅವರಲ್ಲಿ ತಮಗಿರತಕ್ಕೆ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವುದಕ್ಕೆ ಅನೇಕರು ಶಾಸನಗಳನ್ನು ಬರೆಯಿಸಿರು ವರು, ಹಲವರು ಅವರ ಹೆಸರಿನ ಮೇಲೆ ಕಟ್ಟಡಗಳನ್ನು ಕಟ್ಟಿಸಿರು ವರು. - ನಾವು ಕೃತಜ್ಞತೆಯನ್ನು ಕಲಿತುಕೊಳ್ಳಬೇಕಾದರೆ ದೈವ ಸೃಷ್ಟಿ ಯಲ್ಲಿ ಇನ್ನೂ ಎಷ್ಟೋ ನಿದರ್ಶನಗಳಿವೆ. ತಿರಗ್ರಂತುಗಳು ಕೂಡ ತಮಗೆ ಉಪಕಾರಮಾಡಿದವರನ್ನು ಮರೆಯುವುದಿಲ್ಲ. ದಣಿಯ ಗಂಟನ್ನುಳಿಸಲು ಯ ಶ್ನಿಸಿ ಪೆಟ್ಟು ತಿಂದು ಸತ್ತದ್ದು, ಸಮುದ್ರದಲ್ಲಿ ಬಿದ್ದವನನ್ನು ಎತ್ತಿ ಬದುಕಿಸಿ ದುದು, ಯಜಮಾನನ ಸ್ವತ್ತನ್ನು ಕಾಯುವುದು, ಇಂಥ ವಿಷಯದಲ್ಲಿ ನಾಯಿಯ, ಹಾವನ್ನು ಕೊಂದು ಮಗುವನ್ನುಳಸಿದುದರಲ್ಲಿ ಮುಂಗಸಿಯ ಒಳ್ಳೆಯ ದೃಷ್ಟಾಂತವಾಗಿವೆ. ಹೀಗೆಯೇ ಸಿಂಹ ಇಲಿಗಳ ಕಥೆಯಲ್ಲಿ ಪಾರಿವಾ ಳವೂ ಇನ್ನೂ ಇತರವಾದ ಹಲವು ವಿಷಯಗಳಲ್ಲಿ ಇಲಿಯು ಇರುವೆ ಪಾರಿವಾಳಗಳ ಕಥೆಯಲ್ಲಿ ಕುದುರೆ ಹಸು ಮೊದಲಾದ ಬೇರೆ ಕೆಲವು ಮಕರಣಿಗಳೂ ಸಹ ಕೃತಜ್ಞತೆಗೆ ಆದರ್ಶಪ್ರಾಯವಾಗಿವೆ. ತೆಂಗು ಬತ್ತ ಮೊದಲಾದ ಸಸ್ಯಗಳೂ ಕೂಡ ಕೇವಲ ಕೃತಜ್ಞತೆಯುಳ್ಳವುಗಳಂ ದು ಕವಿಗಳು ಬಲು ಚಮತ್ಕಾರವಾಗಿ ರ್ಪಸಿದ್ದಾರೆ.