ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XX ಯವೆಂಬ ಗ್ರಂಥದಲ್ಲಿ ದಶಾವತಾರಚರಿತ್ರೆಯನ್ನು ನಿರೂಪಿಸಿರುವರು. ಆದುದರಿಂದ ಈಕವಿಗೆ ದೊರೆತ ಭಾರತಪುಸ್ತಕದಲ್ಲಿ ಮತ್ತಾ ದೃವತಾರ ಗಳುಳ್ಳಭಾಗವೂ ಇತ್ತೆಂದೂ, ಅದನ್ನನುಸರಿಸಿ ಆಚರಿತ್ರಗಳನ್ನು ಈ ಕವಿಯೇ ರಚಿಸಿರುವನೆಂದು ಹೇಳುವುದು ಯುಕ್ತವಾಗಿದೆ, ಅಲ್ಲದೆ ಮೇಲೆ ತೋರಿಸಿರುವ ಪುರಾತನವಾದ ಬಹುಪುಸ್ತಕಗಳಲ್ಲಿ ಈಭಾಗಗಳಲ್ಲವೂ ಇವೆ. ಆದುದರಿಂದ ಈಭಾಗಗಳನ್ನು ಬಿಡುವುದು ಯುಕ್ತವಲ್ಲವೆಂದು ಬಹುಪುಸ್ತಕಗಳನ್ನನುಸರಿಸಿ ಶೋಧನಪೂರ್ವಕಮುದ್ರಣವು ನಡೆದಿರು ತದೆ. ಆದುದರಿಂದ ಈ ವಿಷಯದಲ್ಲಿ ಗುಣಗ್ರಾಹಿಗಳು ಅಭಿಜ್ಞರೂ ಆದ ವರೆಲ್ಲರೂ ಸಂತೋಷಿಸುವರೆಂದು ನಂಬಿದೆ. 1010004