ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಳ ಅರವತ್ತಾರನೇ ಅಧ್ಯಾಯ ಮ, ಅಲ್ಲಿಗೆ ಹೋಗಿ ಅಳಿಯನ ಯೋಗಕ್ಷೇಮವನ್ನು ತಿಳಿಯುವದಕ್ಕೆ ನಿತ್ಯ ವಮಾಡಬೇಕೆಂದು ಬಿನ್ನವಿಸಲು, ಗಿರಿರಾಜನು ಸತಿಯು ವಾಕ್ಯವಂಕೇಳಿ ತನ್ನ ಮಗಳಾದ ಪಾರ್ವತೀದೇವಿಯರ ಮೇಲಣ ಮಾತ್ರದಿಂದ ಕಣ್ಣೀರ ತಂದುಕೊಂಡು ಗದ್ಯದಸ್ಸರದಿಂದ ಇಂತೆಂದನು. ತಾನೇಹೋಗಿ ಮಗಳಂ ನೋಡಿ ಬಂದೇನೆಂದರೆ ನಿನ್ನ ಬಿಟ್ಟು ಹೋಗಲಾರದೆ ಇದ್ದೆನೆ ಆವಾಗ ಪಾರ್ವತೀದೇವಿ ತನ್ನ ಮನೆಯ ಬಿಟ್ಟು ಹೋದಳೊ ಆ೦ಮ ಮೊದಲಾಗಿ ತನ್ನ ಮನೆದು ಮಹಾಲಕ್ಷ್ಮಿಯು ಬಿಟ್ಟು ಹೋದಳು ಎಂಬ ಹಾಗೆ ತೋ ರುತಲಿಧೆಎಂದು ಎನ್ನ ಕಿವಿಗಳು ಪಾರ್ವತಿಯಂಬ ಅಮೃತಮಯವಾದ ಮೃದುನುಡಿಗಳಂ ಕೇಳಿದವೋ ಅಂದಾರಭ್ಯವಾಗಿ ಮತ್ತೊಂದು ಪ್ರಸಂಗ ವಂಕೇಳಲಿಲ್ಲಾ, ಎನ್ನ ಪ್ರಾಣವನಕವಾದ ಮಗಳಂ ನೋಡದಿರಲು ಅತ್ಯಂ ತ ಕೈತಕರನಾದ ಚಂದ್ರಮನು ದಿವದಲ್ಲಿ ಇದ್ದ ಸಯ್ಯನಂತೆ ತಾಪಂಡಿ ಸುತ್ತಾ ಇದ್ದಾನು. ಇಂತೆಂದು ನುಡಿದು ಗಿರಿರಾಜನು ದಿವ್ಯರತ್ನಾಭರಣವ ಸುಗಳಂಕೊಂಡು ಶುಭದಿನ ಶುಭಲಗ್ನದಲ್ಲಿ ಮಂಗಳಂ ನೋಡುವದಕ್ಕೂ ಸ್ಯರ ಹೊರಟು ಕಾಶೀಪಟ್ಟಣಕ್ಕೆ ಬಂದನು ಎಂದು ಕುಮಾರಸ್ವಾಮಿ ಹೇಳಲಾಗಿ, ಅಗಸ್ಯ ನಿಂತೆಂದನು, ಎಲ್ಲಿ ಕುಮಾರಸ ವಿ! ಹಿಮವಂ ತಕನು ಮಗಳಿಗೆ ಏನಕೊಂಡುಹೋದನು ಎನಲು ಕುಮಾರಸ್ವಾಮಿ ಇಂತೆಂದನು. ಕೇಳ್ಮೆ ಅಗಸ್ಯನೆ ಸಕಲವಾದ ಮುತ್ತು, ನವರತ್ನ ಸರ್ವಾ ಭರಣ ದಿವ್ಯವಸ್ತೆ , ಗಂಧಕಸ್ತೂರಿ ಮೊದಲಾದ ದಿವ್ಯ ವಸ್ತು ವಂಕೊ೦ ಡುಹೋದನು ಎನಲು ಎಲೈ ಕುಮಾರಸ್ವಾಮಿ ! ಕೊಂಡುಹೋದ ಬಗೆ ಆವಾವು ಬಗೆಗೆ ಎಷ್ಟು ರತ್ನಂಗಳು ಮಿಕ್ಕಾದ ವಸ್ತುಗಳೇನು ಎಂಬ ಇವು ತನಗೆ ಬುದ್ಧಿಗಳಿಸಬೇಕೆನಲು ಕುಮಾರಸ್ವಾಮಿಯಾದ ವಣ್ಮುಖ ನಿಂತೆಂದನು. ಕೇಳ್ಮೆ ಅಗಸ್ಯನೆ, ರತ್ನಂಗಳಾವವು ಅವು ಎಷ್ಟೆಷ್ಟು ಎಂದು ಕೇಳಿದೆಯಲ್ಲಾ ಅದರ ವಿವರವನ್ನು ಹೇಳುವೆನು ಕೇಳು ಒಂದು ತೊಲೆ ಎನಲು ನೂರುಹಲ ಲೆಖ್ಯದಲ್ಲಿ ಮುತ್ತಿನ ಮಣಿ ನೂರುತೊಲೆ, ಆರು ಅಂಚುಗಳುಳ್ಳ ವಜದ ಮಣಿಗಳು ಒಂಭತ್ತು ಲಕವು, ಎಂಟನೂ ರುಪೊಲೆ ವೈಡರಗಳು, ಎರಡು ಲಕ್ಷ ತೊಲೆ ಪದ್ಮರಾಗ, ಐನೂರು