ಈ ಪುಟವನ್ನು ಪ್ರಕಟಿಸಲಾಗಿದೆ

೮೦ | ಕುಕ್ಕಿಲ ಸಂಪುಟ

ಕೊನೆಯಲ್ಲಿ ಮಂಗಳಾರತಿ ಹಾಡುಗಳನ್ನು ತಪ್ಪದೆ ರಚಿಸಿರುವುದನ್ನೂ ಕಾಣಬಹುದು. ಮಧ್ಯಮಧ್ಯಗಳಲ್ಲಿ ಸಹ ಮಂಗಳಾರತಿ ಹಾಡು ಬರುವುದುಂಟು. ಅಲ್ಲದೆ ಪ್ರತಿಯೊಂದು ಕೃತಿಯೂ ಒಂದೊಂದು ದೇವಸ್ಥಾನದ ದೇವರ ಅಂಕಿತದಲ್ಲಿ ರಚಿಸಲ್ಪಟ್ಟಿದೆ. ಆಟದ ಮೇಳವು ದೇವಸ್ಥಾನದಿಂದ ಹೊರಟು ಹೊರಸಂಚಾರಕ್ಕೆ ಹೋಗುವಾಗ ಸಹ ಆಯಾ ದೇವಳದ ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನ ಗಳಲ್ಲಿ 'ತಾಳಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯ ದಲ್ಲಿ) ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ-

ಕೀರ್ತಿಂತುರದ್ದಾನಿ ಕೀರ್ತಿ ಗಂಧರ್ವುಲು
ಗಾಂಧರ್ವಮುನ ಯಕ್ಷಗಾನ ಸರಣಿ |

ಇದು, ಅನ್ನಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ ಕವಿಯು ಆಂದ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ-

ಕೀರ್ತಯಂತಿ ಮಾಹಾತ್ಮಂ ಗಂಧರ್ವಾದಿವೌಕಸಃ |
ಗಾಂಧರ್ವವಿದ್ಯಾನಿಪುಣಾ ಗಾಂಧರ್ವಣ ಗರೀಯಸಾ ||

'ಗಾಂಧರ್ವೇಣ ಗರೀಯಸಾ'- ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯ ಪ್ರಬಂಧವೆಂದು ನಾಟ್ಯಶಾಸ್ತ್ರದಲ್ಲೇ ಹೇಳಿದೆ. ಸಂಗೀತ ರತ್ನಾಕರಾದಿ ಇತರ ಶಾಸ್ತ್ರ ಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾ೦ಧರ್ವೇಣ' ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮ ಕೀರ್ತಯಂತಿ ಸ್ಮ' ಎಂದಿರು ವುದರಿಂದ ಅದು ದೇವರ ಮಹಾತ್ಮಗಳನ್ನು ವರ್ಣಿಸುವ ಪ್ರಬಂಧವೆಂಬುದು ಸ್ಪಷ್ಟ, ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ ಎ೦ದು ಅನುವಾದಿಸಿರುವುದರಿಂದ 'ಯಕ್ಷಗಾನ'ಎಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ' ಎಂದರೆ 'ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ. ಪೂಜಾಪ್ರಬಂಧವೇ 'ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರು ವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ, ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣ ದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು.

ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ, ಅದು ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಕಾರ್ ಕೂತ್ತು' ಹಾಗೂ 'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ ಪ್ರಯೋಗವು ನಡೆಯು