ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಕುರುಕ್ಷೇತ್ರ ಳುಗಳೂ, ಹಿಂದೂಜನರ ದಂಡಾಳುಗಳಲ್ಲಿ ಎಷ್ಟೋ ಮುಸಲ್ಮಾನ ದಂಡಾಳುಗಳೂ ಇರು ತಿದ್ದರು. ಇದು ಧರ್ಮದ ಮರುಳುಸಿದಿದ ವಿಲಾಯತಿಯ ಮುಸಲ್ಮಾನರಿಗೆ ದಿಲ್ಲ. ಇಬ್ರಾಹಿಮಪಾನನು ಕೌರ್ಯದಿಂದ ಕಾದಿ ರಣಭಾವಿಯಲ್ಲಿ ದೇಹವಿಡಬೇ ಕೆಂದು ಮಾಡಿದ್ದನು; ಆದರೆ ಅಂಥ ಪುಣ್ಯವನ್ನು ಆತನು ಮಾಡಿದ್ದಿಲ್ಲ. ಆತನ ವಿರದ ಸ್ಥೆಗಾಗಿ ಸುಚಿ: ಉದ್ಘಲನಅಂತಃಕರಣವು ಕರಗಿತು. ಆ ದುರ್ದೈನಿಯಾದ ಶೂರಸರದ ಗ ನನ್ನು ಆತನು ತನ್ನ ಬಳಿಯಲ್ಲಿ ಬಚ್ಚಿಟ್ಟುಕೊಂಡಿದ್ದನು. ಆದರೆ ಅದು ಯಾವ ಮುಖ ದಿಂದ ಹೊರಬಿದ್ದು, ಸುಜಾನು ಗಾರದಿಯನ್ನು ಅಬದಾಲಿಯಮುಂದೆ ತಂದು ನಿಲ್ಲಿಸಿ ಬೇಕಾಯಿತು. ಆಗ ಶಹಾನು ಸಿಟ್ಟಿನಿಂದ ಗಾರದಿಯನ್ನು ಕುರಿತು ಶಕ-ಸರದಾರ, ನಿಮ್ಮಂಥ ಶೂರರ ಗತಿಯು ಹೀಗಾಗಲಿಕ್ಕೆ ಕಾರಣವೇನು ? ಕಾಫರರ ಪಕ್ಷವಹಿಸಿ ಸ್ವಜನರೊಡನೆ ಕಾದಿದ್ದರ ಪಶ್ಚಾತ್ತಾಪವು ಈಗ ನಿಮಗೆ ಚನ್ನಾಗಿ ಆಯಿತೆಂದು ನಾನು ತಿಳಿಯುವೆನು! | ಗಾರದಿ-ಹುಜೂರ, ನನ್ನ ದೈವದಲ್ಲಿ ಇದ್ದಂತಾಯಿತು. ಯಾವ ಯಜಮಾನನು ನನಗೆ ಆಶ್ರಯವಿತ್ತನೋ, ಯಾವನು ನನ್ನನ್ನು ಹೊಟ್ಟೆಯಮಗನಂತೆ ರಕ್ಷಿಸಿದನೊ ಆತನ ಹಿತಕ್ಕಾಗಿ ದೇಹತ್ಯಾಗಮಾಡುವದು ನನ್ನ ಕರ್ತವ್ಯವಾಗಿತ್ತು; ಆದರೆ ಅಂಥ ಸುಯೋಗವು ಒದಗಿಬರಲಿಲ್ಲ. ನನ್ನ ಶೌರ್ಯವೆಲ್ಲ ಮಣ್ಣುಗೂಡಿಹೋಗಿ, ನಾನು ತಮ್ಮ ಸೆರೆಯಾಳಾಗಿದ್ದೇನೆ. ಈಗ ತಮ್ಮ ಮನಸ್ಸಿಗೆ ಬಂದಶಿಕ್ಷೆಯನ್ನು ವಿಧಿಸಬೇಕು. ಯುದ್ದ ದಲ್ಲಿ ಶತ್ರುಗಳ ಶಿರಚ್ಛೇದಮಾಡಿ, ತನ್ನ ಒಡೆಯನಸಲುವಾಗಿ ತನ್ನ ಶಿರಸ್ಸನ್ನು ಶತ್ರಗಳಿಗೆ ಕೊಡುವ ಇಬ್ರಾಹಿಮಖಾನನು ಈಗ ನಾಯಿಯಹಾಗೆ ಸಾಯಬೇಕಾಗಿದೆ! ಹಾಮ್ರೇ ಅಲ್ಲಾ! ಹುಜೂರ, ಒಡೆಯನ ಅಪ್ಪಣೆಯಂತೆ ನಡೆಯುವದು ನನ್ನ ಕರ್ತವ್ಯವಸ್ಥೆ: ಶಹಾ-ಸ್ವಜಾತಿಯಜನರ ಸಂಹಾರಕ್ಕಾಗಿ ಆದ ಅಪ್ಪಣೆಯನ್ನು ಸಡಿಸುವದು ತೀರ ಅವಿಚಾರದ ಕೆಲಸವು, ಕಾಫರರ ವಿರುದ್ಧವಾಗಿ ಜಾತಿ-ಬಾಂಧವರಮೇಲೆ ಶಸ್ತ್ರ ಬಿತ್ತುವ ನೀಚರು ಜಗತ್ತಿನಲ್ಲಿ ಹುಟ್ಟದಿರುವದು ಸುರಕ್ಷಿತವು, ಸರದಾರ , ನೀವು ಜಾತಿ ಭಾಂಧವರ ರುಂಡಗಳನ್ನು ತುಂಡರಿಸಿದಂತೆ, ಈಗ ನಿಮ್ಮ ರುಂಡವನ್ನು ತುಂಡರಿಸಲಾಗು ವದು. (ಹರನಿಂತಿದ್ದ ಒಬ್ಬ ಸರದಾರನನ್ನು ನೋಡಿ) ಸರದಾರ, ಎನುನೋಡುವಿರಿ? ಈ ವಿಶ್ವಾಸಘಾತಕಿಯ ರುಂಡವನ್ನು ತುಂಡರಿಸಿರಿ! ಗಾರದಿ-ಹುಜೂರ, ಅವಶ್ಯವಾಗಿ ತುಂಡರಿಸಬೇಕು ಸಾವಿಗೆ ನಾನು ಅಂಜುವ ದಿಲ್ಲ. ಇನ್ನೂ ನನ್ನ ಪರಾಕ್ರಮವನ್ನು ನೋಡುವಹಾಗಿದ್ದರೆ, ನಿಮ್ಮೊಳಗಿನ ಯಾವನಾ ಧರೂ ವೀರನು ಎದುರಾಗಲಿ, ನನ್ನ ಕವಾಯತಿಯ ಕರಾಮತಿಯನ್ನು ತೋರಿಸುವೆನು .ಸರಕಾರ, ತಮಗೆ ಅಷ್ಟು ಶ್ರಮವೇಕೆ? ಇತ್ಯ ನನಗೊಂದು ಖಗ್ಯವನ್ನು ಕೊಡಿರಿ, ನನ್ನ ಕೈಯಿಂದಲೇ ಶಿರಸ್ಸನ್ನು ತುಂಡರಿಸಿಚಲ್ಲುವೆನು. ಸ್ವಾಮಿ ಕಾರ್ಯಕ್ಕಾಗಿ ರಣಭೂಮಿ ಯಲ್ಲಿ ಬೀಳದೆಯಿದ್ದ ಆತಿರಸ್ಸಿನಬೆಲೆಯಾದರೂ ಏನು? ಪ್ರಾಣಿಮಾತ್ರಗಳನ್ನು ಸಾವುಬಿಟ್ಟಿಲ್ಲ ಅಂದಬಳಿಕ ಅದಕ್ಕೆ ಅಂಜುವದೇಕೆ? ಕು! ಬೇಗನೆ ತುಂಡರಿಸಿರಿ, ಇಬ್ರಾಹಿಮಖಾನನನ್ನು ಧ