ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vii ಯನಾಗಿದ್ದನೆಂದು ಅವನ ಕಾಲದಲ್ಲಿ ಹುಟ್ಟಿದ ಗ್ರಂಥಗಳಿಂದ ಗೊತ್ತಾಗು ತದೆ 1. ಇದರಿಂದ ಅವನ ಕಾಲದಲ್ಲಿಯೇ ಲಿಂಗಣ್ಣನೂ ಇದ್ದನೆಂದು ಹೇಳುವುದಕ್ಕಾಗುವುದಿಲ್ಲ, ಏಕೆಂದರೆ ಈ ಗ್ರಂಥದಲ್ಲಿ ಶಕ ೧೬v೫ ರ ವರೆಗೂ ನಡೆದ ಚರಿತ್ರೆಯು ಹೇಳಿದೆ. ಆದ್ದರಿಂದ ಈತನು ಎರಡನೆಯ ಬಸವಪ್ಪನ ಕಾಲದಲ್ಲಿ ಎಂದರೆ ಕ್ರಿ. ಶ. ೧೭೫೦ ರ ಸುಮಾರಿನಲ್ಲಿದ್ದನೆಂದು ಹೇಳಬಹುದು, ಈತನು ಜೀವಿಸಿದ್ದ ಕಾಲವನ್ನು ಖಂಡಿತವಾಗಿ ಗೊತ್ತ ಮಾಡುವುದಕ್ಕೆ ಸದ್ಯದಲ್ಲಿ ಯಾವಸಾಧನಗಳೂ ದೊರೆತಿಲ್ಲ. ಈ ಗ್ರಂಥದ ಒಂದು ನಕಲನ್ನು ಶಕವರ್ಷ ೧೭-೦೬ ನೆಯ ಕೊ ಧನ ಸಂವತ್ಸರದ ಆಷಾಢ ಮಾಸದಲ್ಲಿ ಮೇಜರ ಮೆಕಂಜೈಸಾಹೇಬರ ಕಡೆಯ ಮುತ್ಸದ್ದಿ ನಾರಾಯಣರಾಯರು ಬರೆಸಿಕೊಂಡು ಹೋದರೆಂದು ಒಂದು ಪ್ರತಿಯ ಕೊನೆಯಲ್ಲಿ ಬರೆದಿದೆ. ಇದರಿಂದ ಈ ಕಾವ್ಯವು ಶಕ ೧೬ರ್vHರ ಮೇಲೆ ಮತ್ತು ಶಕ ೧೭-೦೬ರ ಒಳಗೆ ಎಂದರೆ ಕ್ರಿ. ಶ. ೧೭೬೩ರ ಮೇಲೆ ೧vo೪ರ ಬಳಿಗೆ ಹುಟ್ಟಿತೆಂದು ಹೇಳಬಹುದು. ಹಳಗನ್ನಡದಲ್ಲಿ ಚರಿತ್ರೆಯನ್ನು ಇದ್ದದಿದ್ದಹಾಗೆ ಬರೆದ ಗ್ರಂಥ ಗಳೇ ಇಲ್ಲ. ಆದಿಪಂಪನನ್ನು ಮೊದಲುಮಾಡಿಕೊಂಡು ಅನೇಕ ಕವಿ ಗಳು ತಮಗೆ ಆಶ್ರಯದಾತರಾದ ರಾಜರಮೇಲೆ ತಮಗೆ ಇದ್ದ ಕೃತ ಜ್ಞತೆಯನ್ನು ತೋರಿಸುವ ಉದ್ದೇಶದಿಂದ ಚರಿತ್ರಾಂಶಗಳನ್ನು ಗಭಿಕ್ ಕರಿಸಿ ಕಾವ್ಯಗಳನ್ನೇನೋ ಮಾಡಿದ್ದಾರೆ, ಆದರೆ ಮೊದಲಿನಿಂದ ಕೊನೆ ಯವರೆಗೂ ರಾಮಾಯಣಭಾರತಾದಿ ಪುರಾಣ ಕಥೆಯನ್ನು ಅವಲಂಬನ ವಾಗಿಟ್ಟುಕೊಳ್ಳದೆ, ಕವಿಯ ಹಕ್ಕೆಂದು ಅತಿಶಯೋಕ್ತಾಲಂಕಾರಗ ಳನ್ನು ತುಂಬದೆ, ರಾಜನ ಸಂಬಂಧವಾಗಿ ತಾವು ತಿಳಿದ ವಿಷಯಗಳನ್ನು ಯಥಾರ್ಥವಾಗಿ ಬರೆದಿಡಬೇಕೆಂಬ ಉದ್ದೇಶದಿಂದಲೇ ಬರೆದುವುಗಳಲ್ಲ. ಅವರು ಕವಿಗಳು ; ಚರಿತ್ರಕಾರರಲ್ಲ, ಅದಕ್ಕೋಸ್ಕರವೇ ಅವರ ಗ್ರಂಥ ಗಳು ಒಟ್ಟಿನಮೇಲೆ ಕಾವ್ಯಗಳ ಹೊರತು ಚರಿತ್ರೆಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಮಾತೃಸ್ವರೂಪವಾದ ಸಂಸ್ಕೃತದಲ್ಲಿಯೂ, ನಡೆದುದನ್ನು 1 ೧೭೫ ಮತ್ತು ೧೭೬ ನೆಯ ಪುಟಗಳನ್ನು ನೋಡಿ 0 ಗೆ ೪. • .... - -