ಈ ಪುಟವನ್ನು ಪರಿಶೀಲಿಸಲಾಗಿಲ್ಲ.

viii ನಡೆದಹಾಗೆ ತಿಳಿಸತಕ್ಕೇ ಚರಿತ್ರ ಗ್ರಂಥಗಳು ಒಂದೆರಡು ಮಾತ್ರ ಇದಕ್ಕೆ ಕಾರಣವನ್ನು ಇಲ್ಲಿ ವಿಚಾರಮಾಡಬೇಕಾದುದಿಲ್ಲ. ಒಟ್ಟಿನಲ್ಲಿ ಹಿಂದೆ ನಮ್ಮವರು ಧಾರ್ಮಿಕ ವಿಷಯಗಳಿಲ್ಲದ ಕಾವ್ಯವನ್ನು ರಚಿಸುತ್ತಿ ದ್ದುದು ಕೇವಲ ಅಪರೂಪ ವೆಂದು ಹೇಳಬಹುದು, ಆದುದರಿಂದ ಒಂದು ಕಡೆ ಚರಿತ್ರೆಯ ಬಣ್ಣ ವುಳ್ಳ 'ವಿಕ್ರಮಾರ್ಜನವಿಜಯ' ಸಾಹಸ ಭೀಮ ವಿಜಯ' ಮುಂತಾದ ಪೌರಾಣಿಕ ಚಂಪೂ ಕಾವ್ಯಗಳೂ, ಮತ್ತೊಂದು ಕಡೆ - ಚಿಕ್ಕದೇವರಾಯ ವಂಶಾವಳಿ ' ಮುಂತಾದ ಗೌಡಶೈಲಿಭೂಯಿಷ್ಯ ವಾಗಿಯ ಶಬ್ದಾಲಂಕಾರಾರ್ಥಾಲಂಕಾರಪರಿಪೂರ್ಣವಾಗಿಯೂ ಇರುವೆ ಗದ್ಯಗ್ರಂಥಗಳ ಹುಟ್ಟದುವು: ಇವುಗಳಿಂದ ಕೆಲವು ಸ್ಫೂಲವಾದ ಐತಿ ಹಾಸಿಕ ಸಂಗತಿಗಳು ತಿಳಿದುಬರುತ್ಯವೇ ವಿನಾ ಆಯಾ ಕಾಲದ ಚರಿ ತ್ರೆಯು ಪೂರ್ಣವಾಗಿ ಗೊತ್ತಾಗುವುದಿಲ್ಲ. ಕೆಳದಿನೃಪವಿಜಯವೂ ಇಂತಹ ಗ್ರಂಥವೇ ಆದರೂ ಇದರಲ್ಲಿ ಕಾವ್ಯಾಂಶಕ್ಕಿಂತಲೂ ಚರಿತ್ರಾಂಶವೇ ಹೆಚ್ಚಾಗಿದೆ. ಮೊದಲಿನಿಂದ ಕೊನೆಯವರೆಗೆ ಮುಖ್ಯವಾಗಿ ಕೆಳದಿಯ ಅರಸರ ಚರಿತ್ರೆಯ ಪ್ರಾಸಂ ಗಿಕವಾಗಿ ಚಿತ್ರದುರ್ಗದ ನಾಯಕರು, ಬೇಲೂರ ಅರಸರು, ವಿಜಯ ನಗರದ ಅರಸರು, ಪಾಹಿರಾಜರು, ಮರಾಟೆರಾಜರು, ಡಿಳ್ಳಿಯ ಸುಲ್ಲಾ ನರು ಇವರ ವಿಷಯವೂ ಹೇಳಿದೆ. ಶಾಸನಗಳನ್ನು ನೋಡಿದರೆ ಇಲ್ಲಿ ಹೇಳಿರುವ ಕೆಳದಿಯ ಅರಸರ ಕಾಲಕಾತ್ಯಾದಿಗಳು ಸತ್ಯವೆಂದು ಹೇಳ ಬೇಕಾಗುತ್ತದೆ , ರೈಸೆ ಮುಂತಾದ ಪಂಡಿತರೂ ಹಾಗೆಯೇ ಒಪ್ಪಿಕೊಂಡಿ ದಾರೆ. ಆದರೆ ಈ ಗ್ರಂಥದ ಮಧ್ಯದಲ್ಲಿ ಅಲ್ಲಲ್ಲಿ ಬರುವ ಇತರ ರಾಜರ 1 ಮನುಷ್ಯನಾತ್ರನಾದವನ ಚರಿತ್ರೆಯನ್ನು ಬರೆದುದರಿಂದ ರಾಘವಾಂಕ “ನನ್ನು ಅವನ ಮಾವನಾದ ಹರಿಹರನು ಶಿಕ್ಷೆ ಮಾಡಿದನೆಂದು ಹೇಳುತ್ತಾರೆ, 2 ಆದರೆ ಚೌಡಪ್ಪನಿಗೆ ಹಾವು ನಿಧಿಯನ್ನು ತೋರಿಸಿಕೊಟ್ಟುದು ದೊಡ್ಡ ಸಂಕಣ್ಣನಾಯಕನು ಡಿಳ್ಳಿಗೆ ಹೋಗಿ ಅಂಕುಶಖಾನನೊಡನೆ ಹೋರಾಡಿ ಅವನನ್ನು ಗೆದ್ದುದು, ಮುಂತಾದ ಕೆಲವು ಸಂಗತಿಗಳು ಕೇವಲ ಜನಜನಿತವಾದ ಕಥೆಗಳೆಂದು ತೋರುತ್ತದೆ,