ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಕಿ. ಶಿಲಾದರ್ಪಿಗೆ ಪುತ್ರನಾಗಿಯೂ ಮೆರೆದ ಆದಿಮಹಾವೃಷಭೇಶರನ ಪಾದ ಕೈ ತಲೆವಾಗುವೆನು. ಪರಶಿವನು ಕೈಲಾಸದ ಮಹಾಸಭೆಯಲ್ಲಿ ದೇವಾಧಿದೇವತೆಗಳಿಂದ ಸೇವೆಗೊಳ್ಳುತ್ತ, ಸಕಲಪ್ರಮಥಗಣಪರಿವೃತನಾಗಿ ರಂಜಿಸುತ್ತ, ದಿವೃಸಿ ಹಾಸನದಲ್ಲಿ ಸರಮಂಗಳಾರ್ಧಾಂಗನಾಗಿ ಮಂಡಿಸಿರಲು, ಆ ಸಭೆಗೆ ಬಂ ದು ತನ್ನ ನಾಟ್ಯದಿಂದ ಮಹಾದೇವನನ್ನು ಆನಂದಗೊಳಿಸಿ ನಮಸ್ಕರಿಸು ವಾಗ್ಗೆ, ತುಂಬಿಯ ಆಕಾರದಿಂ ಶಿವನ ದೇಹವಂ ಕೊರೆದು, ಸಾರತಿಯ ಶಕ್ಯಂಶವಾದ ಅರ್ಧದೇಹವನ ಬಿಟ್ಟು ಉಳಿದರ್ಧಭಾಗವನ್ನು ಪ್ರದಕ್ಷಿ ಣಮಾಡಿ ನಮಸ್ಕರಿಸಲು, ಪಾರತಿಯು ಇದನ್ನು ತಿಳಿದು,ಈತನ ದೇಹದ ರಕ್ತಮಾಂಸಾದಿನ್ನಂಶವನ್ನು ಆಕರ್ಷಿಸಿಕೊಳ್ಳಲು, ನಿಲ್ಲಲು ಸಾಧ್ಯವಿ ಇದೆ ನಡುಗುತ್ತಿದ್ದ ತನಗೆ ಶಿವಪ್ರಸಾದದಿಂದ ಕೊಡಲ್ಪಟ್ಟ ಮತ್ತೊಂದು ಪಾದವನ್ನು ಹೊಂದಿ ಮೂರಡಿಯುಳ್ಳವನಾಗಿ ಮೆರೆದ ಶೃಂಗೀಶ್ವರನನ್ನು ಮರೆಹುಗುವೆನು. ಶಿವನ ಹಣೆಗಣ್ಣಿನಿಂದೊಗೆದು ಶಿವರೊಹಿಯಾದ ದಕ್ಷನ ಯಾಗಶಾ ಲೆಗೆ ಹೋಗಿ ಅಲ್ಲಿದ್ದ ದೇವತೆಗಳನ್ನೆಲ್ಲ ಭಂಗಿಸಿ, ರುದ್ರನಿಗೆ ಅಗ್ರಹವಿರ್ಭಾ ಗವನ್ನು ಕೊಡದಿದ್ದ ಆದಕ್ಷಬ್ರಹ್ಮನ ಶಿರಸ್ಸನ್ನು ಕತ್ತರಿಸಿದ ಭದ್ರಕಾಳಿ ಪ್ರಿಯನಾದ ವಿದಭ ಶ್ರೀಶನಿಗೆ ಸಾಷ್ಟಾಂಗವಾಗಿ ಮಣಿವೆನು. ತನಗೆ ಪಂಚಮವುಟಗಳಿರುವುದೆಂಬುದನ್ನು ಸರರೂ ಬಲ್ಲರು; ಆರನೆಯ ಪಾತಾಳಮುಖವಿರುವುದೆಂಬುದನ್ನು ತಾತ್ರಿ ಕರು ಹೊರತು ಇತ ರರು ತಿಳಿಯರು. ಅದುಕಾರಣ, ಆ ಆರನೆಯಮುಖವನ್ನು ಸೆರರಿಗೂ ತೊರಡಿಸಬೇಕೆಂಬುದಾಗಿ ಶಂಕರನೇ ಈ ಅರುಮೊಗನಾಗಿ ಜನಿಸಿದನೆಂ ಬಂತೆ ತೋರುತ್ತಿರುವ ಕುಮಾರಸ್ವಾಮಿಯ ಪಾದಾರವಿಂದದಲ್ಲಿ ನನ್ನ ಚೇ ತಃಕಮಲವನ್ನು ಸಮರ್ಪಿಸುವೆನು. ಕನ್ನಡಿಯೊಳಗಿನ ಪ್ರತಿಬಿಂಬದಂತೆಯೂ, ಆಕಾಶದಲ್ಲಿ ತೋರುವ ಇಂದ್ರನ ಧನುಸ್ಸಿನಂತೆ, ಸುಟ್ಟ ಬಟ್ಟೆಯು ಕಾಣುವಂತೆಯೂ, ಬಿಸಿ ಲುದುರೆಯ ಆವಿನಂತೆ.,ಕರ್ಪೂರವು ಬೆಂಕಿಯೊಡವೆರೆದಂತೆಯೂ, ತುಪ ವು ಧರಿಸಿರುವ ಆಕರದಂತೆಯೂ ರೂಪಾಂತು ಮೆರೆವ ಮಾಯಾರ