ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮ ರುದ್ರಾಕ್ಷದಿಮಾಹಾತ್ಮವು ೩r ಯ ಮರದ ಕಡ್ಡಿಗಳಿಂದ (ಅವುಗಳಿಗೆಲ್ಲ ಕಗ್ಗಲಿಯ ಕಡ್ಡಿಯುತ್ತಮ) ಹಲ್ಲ ನ್ನು ಜೈ, ಲಿಂಗೋದಕದಿಂದ ಬಾಯ್ತುಕ್ಕುಳಿಸಿ, ಮುಖವನ್ನು ತೊಳೆದು, ಸ್ನಾನ ಮಾಡಿ, ಮಡಿಯುಟ್ಟು, ಮನೆಯ ಈಶಾನಭಾಗದಲ್ಲಿರುವ ಶಿವಪೂ ಜಾಗಾರವನ್ನು ಹೊಕ್ಕು, ಸಾರಿಸಿ, ರಂಗವಲ್ಲಿಯನ್ನಿ, ಪದ್ಮಾಸನದಲ್ಲಿ ಕುಳಿತು, ನಿಷ್ಕಲಚಿತ್ತದಿಂದ ಶಿವಪೂಜಾಸಾಮಗ್ರಿಗಳನ್ನೆಲ್ಲ ಇರಿಸಿಕೊಳ ಬೇಕು, ಬಳಿಕ ಭಸ್ಮದ ಸಾನ, ಉಳನ, ತ್ರಿಪುಂಡ್ರಧಾರಣಗಳನ್ನು ಮಾಡಿ, ರುದ್ರಾಕ್ಷಮಾಲಿಕೆಯನ್ನು ಧರಿಸಿ, ಶಿವಮಂತ್ರವನ್ನು ಪಠಿಸುತ್ತ, ಪೂಜಾಸಾಮಗ್ರಿಗಳನ್ನರ್ಚಿಸಿ, ಶಿವಾರ್ಚನೆಯನ್ನು ಮಾಡಬೇಕು, ಭ ಸ್ಮಾದಿಗಳ ವಿವರವು ಹೇಗೆಂದರೆ- ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿಯುತ್ಪನ್ನವಾಯಿತು, ಅದಕ್ಕೆ ನಿವೃತ್ತಿಯೆಂಬ ಕಲೆ, ಅದಕ್ಕೆ ನಂದೆ ಯೆಂಬ ಕಪಿಲವರ್ಣದ ಹಸುವಿನ ಸಂಬಂಧವು; ಅಂಥ ಹಸುವಿನ ಸಗಣ ವನ್ನು ಸುಟ್ಟು ಮಾಡಿದುದೇ ವಿಭೂತಿಯ, ವಾಮದೇವಮುಖದಿಂದ ಹಲ ಭೂತವು, ಅದಕ್ಕೆ ಪ್ರತಿಷ್ಠಾ ಕಲೆ, ಭದ್ರೆ ಯೆಂಬ ಕಾಳಹಸುವು, ಅದರ ಸಗಣದಿಂದಾದುದು ಭಸಿತವು, ಅಘೋರಮುಖದಿಂದ ಅಗ್ನಿ ಭೂತವು, ಅ ದಕ್ಕೆ ವಿದ್ಯಾಕಲೆ, ಸುರಭಿ ಯೆಂಬ ಕೆಂಬಣ್ಣದ ಹಸು, ಅದರ ಸಗಣದಿಂ ದಾದುದು ಭಸ್ಮವು, ತುರುಪ್ರಮುಖದಿಂದ ವಾಯುಭೂತವು, ಅದಕ್ಕೆ ಶಾಂತಿಕಲೆ, ಸುಶೀಲೆಯೆಂಬ ಬಿಳಿಯಹಸುವು, ಅದರ ಸಗಣದಿಂದಾದು ದೇ ಕಾರವು, ಈಶಾನಮುಖದಿಂದ ಆಕಾಶಭೂತವು, ಅದಕ್ಕೆ ಶಾಂತ್ಯ ತೀತೆ ಯೆಂಬ ಕಲೆ, ಸುಮನಸೆ ಯೆಂಬ ಚಿತ್ರವರ್ಣದ ಹಸ, ಅವರ ಸಗ ಇದಿಂದಾದುದೇ ರಕ್ಷೆಯು, ಇವುಗಳಲ್ಲಿ ಭೂತಿ ಮತ್ತೂ ಭನಿತ ಇವುಗಳು ಜ್ಞಾನವರ್ಧಕಗಳು, ಭಸ್ಮವು ಪಾಪಹರವು, (ಾರವು ವಿಸತ್ಪರಿಹಾರಕವು. ರಕ್ಷೆಯು ಭಯನಿವಾರಕವು, ಹೀನಪದಾರ್ಥಗಳನ್ನು ತಿನ್ನುವ, ಕರುವಿಲ್ಲ `ದ, ರೋಗವೆರೆದ, ಬಲಹೀನವಾದ, ಅಂಗವಿಕಾರವುಳ, ಅಮಿತವಾಗಿ ತಿ ನ್ನುವ, ಬರೆ ಹಾಕಿರುವ ಅಂಗಹೀನವಾದ, ಗೊಡ್ಡಿಯಾದ, ತುಂಟಾದ, ಹಾಲು ಕರೆಯದ, ಎಳಗಂತಿಯಾದ ಹಸುಗಳನ್ನು ಬಿಟ್ಟು, ಸಲಕ್ಷಣವಾದ ಮೇಲೆ ಹೇಳಿದ ಬಣ್ಣದ ಗೋವುಗಳಿಂದ ಸಗಣವನ್ನು ಭೂಮಿಗೆ ಬೀಳ ಗೊಳಿಸದಂತೆ ಆತುಕೊಂಡು, ಗ್ರಹಿಸುವುದು, ಉಂಡೆ ಮಾಡುವುದು, ಒಳಿ