ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಗಾಯವಡೆದು ಬಂದ ನಿನ್ನ ತಾಯಿ ಓಡಿ ಬಂದು ನೋಡಿ ಸಾಯನೇಕೆ ನಾನು ಎಂದು ; ದೇವರೇ ಇವನನುಳಿಸು ಸಾವೆ ನಾನು ನನ್ನ ಕೊಳ್ಳು ದೇವ ದೇವ ಎಂದು ಕೂಗಿ; ಹೆತ್ತ ಹೊಟ್ಟೆಯಳಲಿನಲ್ಲಿ ಅತ್ತು ಮೊರೆದು, ನನ್ನ ಕಂದ ಸತ್ತೆಯಾ ನನ್ನ ಬಿಟ್ಟು, ಎಂದಳಲ್ಲಳು. ಮುದುಕನೊಬ್ಬ, ನನ್ನ ಮಗನು ಎದವಿ ಬಂದ, ಇನ್ನು ಮೇಲೆ ಬದುಕನವನು ನೋಡಿಕೊಂಬ, ಎಂದು ಕನಸಲಿರುತ, ನಡುವೆ ತಂದ ನಿನ್ನ ನೋಡಿ ಆಸೆ ನಂದಿ ಜೀವ ಬೆಂದು ಮುದುಡಿ, ಆಸೆ ತೋರಿ ನನಗೆ ಮೊದಲು ಮೋಸಮಾಡಿ ಹೊರಟುಹೋದ, ಈಶ್ವರಾಜ್ಞೆ ನನ್ನ ಕರ್ಮ, ಎಂದನಪ್ಪುದು. ೧೩