ಈ ಪುಟವನ್ನು ಪರಿಶೀಲಿಸಲಾಗಿದೆ

೩೦೨ ನಡೆದದ್ದೇ ದಾರಿ

            ಅಧಿಕಾರದ ದುರುಪಯೋಗ, ಸರಕಾರಿ ಹಣದ ಆಘರಾತಫರಾ, ಇಲಾಖೆಯ
       ಒಡೆತನದಲ್ಲಿ ರುವ ಮಾಲಿನ ಬೇಕಾಯ್ದೇಶಿರ ವಿಲೇವಾರಿ, ಭ್ರಷ್ಟಾಚಾರ - ಈ
       ಆರೋಪಗಳನ್ನು ಮೇಲುನೋಟಕ್ಕೆ ಸಾಬೀತು ಪಡಿಸಿ, ನ್ಯಾಯಾಂಗ
       ವಿಚಾರಣೆಯಾಗುವ ತನಕ ಡಾ. ತಾರಾ ಪೋಕಳೆಯನ್ನು ಸೇವೆಯಿಂದ
        ಅಮಾನತ್ತುಗೊಳಿಸಲಾಯಿತು.
                                   *   *    *
          ಆ ರಾತ್ರಿ ತಡವಾಗಿ ಮನೆ ಸೇರಿದ ಆಕೆ ದಾರಿ ಕಾಯ್ದು ಊಟವಿಲ್ಲದೆ
       ಉಪವಾಸ ಹಾಸಿಗೆ ಸೇರಿದ್ದ ಗಂಡನನ್ನುದ್ದೇಶಿಸಿ, ಗಟ್ಟಿಯಾಗಿ ಹೇಳತೊಡಗಿದಳು,
       " ಈ ದೇಶದಾಗ ಪ್ರಾಮಾಣಿಕರಾಗಿ, ತತ್ವನಿಷ್ಠರಾಗಿ ಕೆಲಸಾ ಮಾಡವ್ರಿಹೆ ಅವಕಾಶನೇ
       ಇಲ್ಲ. ಎಲ್ಲರೂ ದುಷ್ಟರು, ಆಪ್ರಾಮಾಣಿಕರು, ಅಯೋಗ್ಯರು..."ಆಕೆಯ ತತ್ವಪಾಠ
       ಕೇಳಲು ಆತ ಎಚ್ಚರವಿರಲಿಲ್ಲ,ಎಂದಿನಂತೆ ಆಕೆ ಬರುವ ಮೊದಲೇ ಅಕೆಯ ಲೆಕ್ಚರಿನಿಂದ
       ತಪ್ಪಿಸಿಕೊಳ್ಳಲೆಂದು ನಿದ್ದೆಗುಳಿಗೆ ಸೇವಿಸಿ ಮರೆವಿನ ಲೋಕಕ್ಕೆ ಜಾರಿಬಿಟ್ಟಿದ್ದ.
                                                                                    (೧೯೯೦)
                                    *  *  *