ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶಂಕರಕಥಾಸಾರ ಆಗ ರಾಜನು ತಾನು ಮಾಡಿದ ಮೂರು ನಾಟಕಗಳನ್ನೂ ಹತ್ತು ಸಹಸ್ರ ವರಹ ಕಾಣಿಕೆಗಳೊಂದಿಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಶಂಕರಪಾದಾರವಿಂದಕ್ಕರ್ಪಿಸಿ ನಿಲ್ಲಲು, ಶಂಕರನು, ನಾಟಕಗಳನ್ನು ಕೇರಳದೇಶದಲ್ಲಿ ಪ್ರಚಾರಮಾಡುವಂ ತೆಯೂ, ಆ ವರಹವನ್ನೆಲ್ಲಾ ಅಗ್ನಿಹೋತೃಗಳಾದ ಬ್ರಾಹ್ಮಣರಿಗೆ ಕೊಡುವಂತೆಯೂ ಹೇಳಿ ಸಂತಾನಾರ್ಥಿಯಾಗಿ ಇರುವ ಆ ರಾಯನಿಗೆ ಒಂದು ಇಷ್ಟಿಯನ್ನು ಪ್ರವೇಶಿಸಿ ಕಳುಹಿಸಲಾರಾಯನು ಶ್ರೀ ಶಾಂಕರಮಹಿಮೆಯಿಂದ ಪುತ್ರವಂತನಾಗಿ ಸಂತೋಷಿ ಸುತ್ತಿದ್ದನು. ಶ್ರೀ ಶಂಕರನ ಸಂದರ್ಶನಾರ್ಥವಾಗಿ ಬಹಳ ದೂರದ ದೇಶಗಳಿಂದ ಜನಗಳು ಬಂದು ಅಭೀಷ್ಟವು ನೆರವೇರಿದ ಬಳಿಕ ಹಿಂತಿರುಗುತ್ತಿದ್ದರು. ಶಂಕರವಚನಮಾತ್ರದಿಂದ ಜನಗಳಿಗೆ ನಿಧಿನಿಕ್ಷೇವಸಾದಿಗಳೂ, ವಿದ್ಯಾರ್ಥಿಗಳಿಗೆ ಅಖಿಳವಿದ್ಯಗಳೂ ಬರುತ್ತಿದ್ದವು ಶಂಕರಸ್ಮರಣಮಾತ್ರದಿಂದಲೇ ಕ್ಷುದ್ರಗ್ರಹ, ಪಿಶಾಚ, ಭೌತಣಭಿಚಾರಿಕಗಳು ನಾಶವಾ ಗುತ್ತಿದ್ದವು, ಸಕಲಮಹರ್ಷಿಗಳೂ ಬಂದು ತಮ್ಮತಮ್ಮ ತಪಸ್ಸಾಮರ್ಥ್ಯ ಗಳಂ ಕೊಟ್ಟು ಹಿಂತಿರುಗುತ್ತಿದ್ದರು. ಒಂದುದಿನ ಶಂಕರಜನನಿಯು ಆಗಸ್ಯರಂ ಪ್ರಾರ್ಥಿಸಲು, ಅವರು ಬಂದರು. ಆಲ್ಯಾಂಬೆಯು ಅವರನ್ನು ಪೂಜಿಸಿ ನಮ್ಮ ಮಗನಿಗೆ ಮದುವೆ ಯಾವಾಗ ಆಗುವುದೆನ್ನ ಲವರು " ಅಮ್ಮಾ! ನಿನ್ನ ಮಗನಿಗೆ ಇದು ಗರ್ಭಾಷ್ಟಮ; ಈ ವರ್ಷ ತುಂಬುವುದ ರೊಳಗಾಗಿ ಆಯುರ್ಧಾಯವು ಪೂರ್ಣವಾಗುತ್ತದೆ; ಆಗೈ ಸನ್ಯಾಸಸ್ವೀಕಾರದಿಂದ ಜನ್ಮವನ್ನು ಬದಲಾಯಿಸಿಕೊಂಡರೆ ಆಯುಸ್ಸು ಮತ್ತಷ್ಟು ಹೆಚ್ಚುತ್ತದೆ. ಬಳಿಕ ರೈ ವಾ ನುಗ್ರಹದಿಂದ ಇನ್ನೂ ಹೆಚ್ಚುತ್ತದೆ” ಎಂದು ಹೇಳಿ ಮುನಿಗಳಸನ್ನೆ ಯಿಂದ ಅಂತರ್ಹಿತ ರಾದರು. - ಇದನ್ನು ಕೇಳಿ ಆರಾಂಬೆಯು ಹತಾಶಳಾಗಿ, ಹಾ ! ಪರಮೇಶ್ವರಾ!!” ಎಂದು ಮರ್ಛಾಕ್ರಾಂತಳಾದಳು. ಶಂಕರನು ಆಕೆಯನ್ನು ಉಪಚರಿಸಿ ಚಿಂತಾನಾಶಕಗಳಾದ ಅನೇಕ ಪುರಾಣಗಳಂ ಪೇಳುತ್ತಾ ಕಾಲವನ್ನು ಕಳೆಯಿಸುತ್ತಿದ್ದನು. ಆಲ್ಯಾಂಬೆಯು ತನ್ನ ಚಿಂತೆಯನ್ನೆಲ್ಲಾ ಮರೆತು ಶಿವಪೂಜಾಸಕ್ತಳಾಗಿದ್ದಳು. - ಕೆಲವು ದಿನಗಳನಂತರ ಮಾತೃ ಪುತ್ರರಿಬ್ಬರೂ ನದಿಗೆ ಸ್ನಾನಕ್ಕೆ ಹೋದರು. ಶಂಕರನು ನದಿಯಲ್ಲಿಳಿದು ಸ್ನಾನಮಾಡುತ್ತಿರುವಾಗ ಒಂದು ಮೊಸಳೆಯು ಬಂದು ಶಂಕರನ ಪಾದವನ್ನು ಹಿಡಿದು ಸೆಳೆಯತೊಡಗಿತು.