ಈ ಪುಟವನ್ನು ಪರಿಶೀಲಿಸಲಾಗಿದೆ

೬೮ ಕಾದಂಬರೀಸಂಗ್ರಹ

 ಹೀಗೆ ಕಲಿಕಲ್ಮಘ್ನಗಳೂ ಶುಭಗಳೂ, ಆದ ಚರಿತ್ರೆಗಳಿಂದ ಪ್ರಕಾಶಿಸುತ್ತಲಿರುವ ಕೀರ್ತಿರಾಶಿಯುಳ್ಳ ಶಂಕರಾವತಾರಿಗಳಾದ ಶಂಕರರಿಗೆ ದ್ವಾತ್ರಿಂಶದಬ್ದಗಳು ಕಳೆದವು.
 ಬಳಿಕ ಶಂಕರರು ಸಶಿಷ್ಯರಾಗಿ ಕೇದಾರಕ್ಕೆ ಹೋಗಿ, ಅಲ್ಲಿನ ಶೀತದಿಂದ ಶಿಷ್ಯರೆಲ್ಲರೂ ಪೀಡಿತರಾಗುತ್ತಿರುವುದನ್ನು ನೋಡಿ, ಮಹಾದೇವನನ್ನು ಉಷ್ಣೋದಕ ವನ್ನು ಕೊಡಬೇಕೆಂದು ಪ್ರಾರ್ಥಿಸಿದರು.
 ಚಂದ್ರಶೇಖರನು ಯತಿರಾಜರಾದ ಶಂಕರರಿಂದ ಹೀಗೆ ಸ್ತುತಿಸಲ್ಪಟ್ಟು ಕೂಡಲೇ ಉಷ್ಣೋದಕಪ್ರವಾಹವುಳ್ಳ ಒಂದು ನದಿಯನ್ನು ತನ್ನಪದಾರವಿಂದದ ದೆಸೆಯಿಂದ ಸೃಷ್ಟಿಸಿದನು, (ಅದು ಈಗಲೂ ಹಿಮಾಲಯದಲ್ಲಿ ಪ್ರಸಿದ್ದವಾಗಿದೆ.)
 ಅನಂತರ ಹೀಗೆ ದೇವಕಾರ್ಯವನ್ನು ಮಾಡಿದ ಈಶ್ವರಾವತಾರಿಗಳಾದ ಶಂಕರ ದೇಶಿಕರಲ್ಲಿಗೆ, ಬ್ರಹ್ಮೇಂದ್ರಾದಿ ಸುರಮುಖ್ಯರು, ಮಹರ್ಷಿಗಳು, ಪ್ರಸಿದ್ಧರು ಇವರು ಗಳಿಂದ ಸಹಿತರಾಗಿಬಂದು, ಯತಿವೇಷಧಾರಿ ಯಾದ ಆ ಸ್ವಾಮಿಯಂ ಸ್ತುತಿಸಿ  "ಎಲೈ ಸ್ವಾಮಿಯೇ ! ನೀನೇ ಸರ್ವಕಾರಣನು ; ಪ್ರಸಂಹರಕ್ಷಣೆಗೋಸ್ಕರವೇ ಹಾಲಾಹಲವೆಂಬ ವಿಷವನ್ನು ಧರಿಸಿದ್ದೀಯೇ; ಕಾಮನನ್ನು ದಹಿಸಿರುವಿ; ತ್ರಿಪುರವನ್ನು ನಾಶಮಾಡಿರುವಿ; ಜಗದುತ್ಪತ್ತಿಕಾರಣನಾದ ತ್ರಿನಯನನೇ ನೀನಾಗಿದ್ದೀಯೆ; ಈಗ ವೇದಮರ್ಯಾದೆಯನ್ನುದ್ದರಿಸಲು ಅವತರಿಸಿದ್ದೀಯೆ. ಈ ನಿನ್ನ ಕಾರ್ಯವು ಸಂಪೂರ್ಣ ವಾದಕಾರಣ ನಮ್ಮ ಸುಖಕ್ಕೋಸ್ಕರ ಸ್ವರ್ಗಕ್ಕೆ ಬರಬೇಕು” ಎಂದು ಪ್ರಾರ್ಥಿಸಿದರು.
 ಹೀಗೆ ಬ್ರಹ್ಮೇಂದ್ರೋಪೇಂದ್ರ ದೇವರ್ಷಿ ಪ್ರಮುಖರುಗಳಿಂದ ಪ್ರಾರ್ಥಿಸಲ್ಪಟ್ಟ ಶಂಕರರು, ಬ್ರಹ್ಮನಿಂದ ಕೊಡಲ್ಪಟ್ಟ ಹಸ್ತವನ್ನು ಹಿಡಿದುಕೊಂತು ಶ್ರೇಷ್ಠವಾದ ನಂದಿಯನ್ನು ಹತ್ತಿ ಪ್ರಕಟಿಮಾಡಲ್ಪಟ್ಟ ಸುಜಟಾಚೂಟಿಗಳೂ, ಚಂದ್ರನೂ ಉಳ್ಳವ ರಾಗಿ ಋಷಿಗಳಿಂದ ಸ್ತುತಿಸಲ್ಪಡುತ್ತಾ ಸಶರೀರವಾಗಿ ಕೈಲಾಸವನ್ನು ಸೇರಿದರು. ಭದ್ರಂ!                ಶುಭಂ!!                  ಮಂಗಳ!! 
         ಜಯತು ಜಯತು ಜೀವೋಬ್ರಹ್ಮರೂಪಶ್ವಿದಾತ್ಮಾ 
         ಜಯತು ಜಯತು ಭಾಷ್ಯಂಶಾಂಕರಂಭೂಸುರೇಷು| 
         ಜಯತು ಜಯತು ನಿತ್ಯಂತತ್ತ್ವಮಸ್ಯಾದಿವಾಕ್ಯಮ್ 
         ಜಯತು ಜಯತು ಶುದ್ಧಾದ್ವೈತಮಾ ಚಂದ್ರತಾರಮ್ ||
                  ಓಂ ತತ್ಸತ್. 
                  ಸಂಪೂರ್ಣಮ್.