ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಬೆನಕನ ಮಹಿಮೆ

ಮರಳಿಪೋದನು ಗಣನುನಿಲಯಕೆ |ಹರುಷದಿಂದಲಿ ಸುತನನೋಡಲು|

ಚಿರದೆತವಕಿಪ ತಾಯಿತಂದೆಯನವನು ನಂದಿಸಲು ||

ಭರದೆ ತಳೈಸಿದರು ವೃದ್ಧರು ತರಳನಾಗಚ್ಛನದೊಳಾದಾ|

ಚರಿಯವೆಲ್ಲ ವನೊಂದು ಬಿಡದೆ ಯವರ್ಗೆ ಪೇಳಿದನು || ೨೦||

ಸುತನ ಶಿರವನು ಪಿತನುಮೂಸಿದ| ನತುಳತರ ಸಂಮೋದವಾಂತನು|

ವಿತತವರ್ಷವನೆಲ್ಲ ರೊ೦ದುತೆ ಪೊಗಳಿಪಾಡಿದರು ||

ಪಿತನು ಮಗನನು ಕರೆದು ತಟ್ಟೆ |ಸುತಲಿಪೇಳಿದ ನವಗೆಸೂಕ್ತಿಯ |

ಹಿತದೊಳೊರೆವೆನುಗುಹನೆ ! ಕೇಳೆಂದೀಶತಾನೊರೆದ || ೨೧ ||

ಅರಿವುಬಿಜ್ಜೆಯು ತಪವು ಒಪಗಳು | ಸಿರಿದುಶೌರವು ಕುಲವುತಾಮಿವು|

ಮೆರೆಗು ನಿನ್ನಿಂದಧಿಕ ಮೆಂಬಂತಣುಗ ನಿನ್ನೊಳಗೆ|

ತರಳನದರಿಂ ಪಿರಿದು ರಾಜ್ಯದ |ಹೊರೆಯನಿಳಿಸುವೆ ನಿನ್ನೊಳೆನುತವ|

ನೊರೆದು ಮಂತ್ರಿಯ ಕೂಡೆ ಯೋಚಿಸಿತವಕದಲ್ಲಿರ್ದ || ೨೨||

ಪ್ರಕೃತಿಸಮ್ಮತಿಯಿಂದ ಕಾರವ| ಸುಕೃಪೆಯಿಂದಲಿ ಮಾಡಿಯೊದಗಿಸೆ|

ಸುಕೃತಿಯಭಿಜಿದ್ರೂಮಿ ಪೋತ್ತಮನಿಡಿಸಿ ಲಗ್ನ ವನು ||

ಪ್ರಕೃತವೈಭವದೊಡನೆ ಮಗನಿಗೆ ಪ್ರಕೃತಿವೆರಸಿಯ ಪಟ್ಟಗಟ್ಟು ತ।

ಭಕುಟಿವಿಭ್ರಮದಿಂದ ಮೆಲ್ಲರ ತಾನು ಮೆಚ್ಚಿಸಿದ || ೨೩ ||

ಪಟ್ಟಗಟ್ಟಿದ ಬಳಿಕ ರಾಯನು |ನೆಟ್ಟನಡವಿಗೆ ಸತಿಯೊಡನೆ ಪೊರ |

ಮಟ್ಟನಾಗಳೆ ಮುಕ್ತಿಗಾಶಿಸಿ ನೃಪಶಿರೋಮಣಿಯು ||

ದಿಟ್ಟಿದಾಳ್ತಗೆಯ್ಕೆಗಳ ಮಂದಟ್ಟಿನೊಳ್ಳಾಗಣಿಸದಿತರರ|

ತೊಟ್ಟಿನಾಳ್ತನಗಳನು ಪಡೆದನು ಗಣಮಹೀಪತಿಯು || ೨೪ ||

ಕೆಲರು ಗಣನನೆ ಸೇವಿಸಿರ್ದರು | ನೆಲದೆತವಕದೆ ಧಾಳಿಯಿಟ್ಟನು |

ನಿಲದೆರಾಯನು ಶತ್ರುರಾಯರಮೇಲೆ ದಳವೆರಸಿ ||

ಬಲುದಿನಂಗಳಿನೊಲಿಸುತಿರ್ಪರು| ಬಲಿಯು ವಿಶ್ವಜಿತಾಖ್ಯನುಂ ಮೇ |

ಣೊಲುಮೆಯಿಂ ಗುಣವಂತನುಂ ಪ್ರಮನಾಖ್ಯನಾಗ್ರಂಥ || ೨೫ ||

ತೆರಳಿ ನಾಲ್ವರು ದಳದೆಸಚಿವರು ದೊರೆಗೆ ಹರ್ಷವನೊದವಿಸುತ್ತಲಿ|

ತರಲು ಹೇಳಿದರಸ್ಯಶಕ್ತನ ಬೇಗ ಪರಿಜನಕೆ ||

ತರತರದ ಶಸ್ತ್ರಾಸ್ತ್ರಗಳ ತಾವ್ | ಭರದೆ ಪಿಡಿದರು ಕೆಲರುಯೋಧರು |

ಕರಿಯಮೇಲೆತ್ತಿಟ್ಟರಾಗಳೆ ಕೈದುಗಳನವರು || ೨೬ ||