ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

433

ಇನ್ನೊಂದು ಪಂಗಡಕ್ಕೆ ಹಿಂಸೆ ಮಾಡಿದರೆ ಅದು ಸರ್ವಥಾ ತಪ್ಪು. ಆದರೆ ಈ ಮಾತು
ಗಳೆಲ್ಲ ಇಪ್ಪತ್ತನೆಯ ಶತಮಾನಕ್ಕೆ ಭೂಷಣವಾಗೋದಿಲ್ಲಾಂತ ನನ್ನ ಅಭಿಪ್ರಾಯ.
ಪ್ರಜಾಪ್ರಭುತ್ವ ತತ್ತ್ವ ನಾವು ಒಪ್ಪಿಕೊಂಡ್ಮೇಲೆ ಇಂಥ ಮಾತಿಗೆಲ್ಲ ಅವಕಾಶವಿಲ್ಲ."
"ನಿಮಗೀಗ ಗೊತ್ತಾಗೋದಿಲ್ಲ ಜಯದೇವರೆ. ಅನುಭವಿಸಿದ್ಮೇಲೆ ಹೇಳ್ತೀರಾ,
ನೋಡ್ಕೊಳ್ಳಿ. ಈ ಹೈಸ್ಕೂಲು ಒಂದಾಗ್ಲಿ: ಅಲ್ಲಿ ನೀವು ಕೆಲಸಮಾಡಿ. ಆಮೇಲೆ
ಹೇಳುವಿರಂತೆ."
"ಅದಕ್ಕೂ ಇದಕ್ಕೂ ಯಾಕೆ ಸಂಬಂಧ ಕಲ್ಪಿಸ್ತೀರಾ ಸುಮ್ನೆ."
"ಸಿಟ್ಟಾಗ್ಬೇಡಿ ಸಾರ್. ನಿಮ್ಮಂಥ ಬುದ್ಧಿವಂತರೂ ಹೀಗೆ ಮೋಸ ಹೋಗ್ತೀರ
ಲ್ಲಾಂತ ನನಗೆ ಬೇಸರ."
...ಒಂದು ಕತೆಯನ್ನೂ ನಾಟಕವನ್ನು ತಂದೊಪ್ಪಿಸಿ ಹೋಗಿದ್ದ ತಿಮ್ಮಯ್ಯ
ನವರು ಬಹಳ ದಿವಸಗಳಿ೦ದ ಬ೦ದಿರಲಿಲ್ಲ. ಕೊನೆಗೊಮ್ಮೆ ಭಾನುವಾರ ದಿನ ಅವರು
ಮುಖತೋರಿಸಿದಾಗ, ಅವರ ಕೃತಿಗಳ ವಿಷಯ ಮಾತನಾಡಿದ ಬಳಿಕ, ಹೊಸ ರಾಜ್ಯ
ಸ್ಥಾಪನೆಯ ಪ್ರಸ್ತಾಪವನ್ನು ಜಯದೇವ ಮಾಡಿದ.
"ಯಾವುದೋ ಒಂದು ಪತ್ರಿಕೇಲಿ ನಾನೂ ಸ್ವಲ್ಪ ಓದಿದೆ," ಎಂದರು
ತಿಮ್ಮಯ್ಯ. ಅವರಲ್ಲಿ ಉದ್ವೇಗವಿರಲಿಲ್ಲ. ಲಕ್ಕಪ್ಪಗೌಡರಲ್ಲಿ ಕಂಡು ಬಂದಿದ್ದಂತಹ
ಆಕ್ರೋಶವೂ ಇರಲಿಲ್ಲ. ನಿಧಾನವಾಗಿ ಅವರೆಂದರು:
"ಕರ್ನಾಟಕ ರಾಜ್ಯವಾದರೆ ಉಪಾಧ್ಯಾಯರ ಸಂಬಳ ಜಾಸ್ತಿ ಮಾಡ್ತಾರಂತೊ?"
"ಒಳ್ಳೇ ಪ್ರಶ್ನೆ ಕೇಳಿದಿರಿ!"
“ಒಂದು ಗಾದೆ ಇದೆ_ಯಾವ ಅರಸು ರಾಜ್ಯವಾಳಿದರೇನು? ರಾಗಿ ಬೀಸೋದು
ತಪ್ಪುತ್ಯೆ?_ಅಂತ."
"ಸ್ವಾತಂತ್ಯ್ರ ಬಂದ ಮೇಲೆ ಹಾಗೆ ಹೇಳೋಕಾಗುತ್ತಾ?"
"ಒಳಗಿನ ಮನಸ್ಸು ಹೇಳ್ಬೇಡ ಅನ್ನುತ್ತೆ. ಆದರೆ ನಮ್ಮ ಪುಢಾರಿಗಳನ್ನ
ನೋಡಿದಾಗ_ಹೋಗಲಿ ಬಿಡಿ, ಯಾಕೆ ಆ ವಿಷಯ?"
"ನಮ್ಮ ಶಾಲೆಯಲ್ಲಂತೂ ದಿನಾ ಇದೇ ಚರ್ಚೆ."
"ಸದ್ಯಃ ಹುಡುಗರಿಗೆ ಇದೊಂದೂ ಅರ್ಥವಾಗೋದಿಲ್ವಲ್ಲ. ಅವರು ಮಹಾ
ರಾಜರಿಗೂ ಜೈ ಹೇಳ್ತಾರೆ. ಕರ್ನಾಟಕ ಮಾತೆಗೂ ಜೈ ಹೇಳ್ತಾರೆ!"
"ನನಗೆ ಏನನಿಸುತ್ತೆ ಗೊತ್ತೆ? ಕೆಟ್ಟು ಹೋಗಿರೋದು ನಮ್ಮ ಪೀಳಿಗೇನೇ.
ಈಗ ಚಿಕ್ಕವರಾಗಿರೋ ಹುಡುಗರು ಪ್ರಾಯಕ್ಕೆ ಬಂದಾಗ ಪರಿಸ್ಥಿತಿ ಬಹಳ ಮಟ್ಟಿಗೆ
ಸುಧಾರಿಸೀತು."
"ನೀವು ಯಾವಾಗಲೂ ಆಶಾವಾದಿಯೇ. ಆಗಲಿ ಸ್ವಾಮೀ, ಹಾಗೇ ಆಗಲಿ.
ಒಂದೇ ಭಾಷೇನ ಆಡೋ ಜನರದೇ ಒಂದು ರಾಜ್ಯವಾದರೆ, ಬೆಳವಣಿಗೆಗೆ ಅವಕಾಶ

55