ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

443

ಹೀಗಾಯಿತೆಂದು ಜಯದೇವನಿಗೆ ದುಃಖವಾಗಲಿಲ್ಲ. ಇದೂ ಒಂದು ಅನುಭವ_
ಎಂದುಕೊಂಡು ಮಂದಸ್ಮಿತನಾಗಿಯೆ ಸ್ವಸ್ಥಾನಕ್ಕೆ ಮರಳಿದ.
ಸ್ವಾಗತ ಕಾರ್ಯದರ್ಶಿ ಭಾಷಣಮಾಡಲು ಬಯಸಿದ್ದವರ ಪಟ್ಟಿ ಒಪ್ಪಿಸಿದರು.
"ಇವರೇನು ಭಾಷಣ ಮಾಡ್ತಾರೆ?" ಎಂದರು ಅಧಿಕಾರಿ.
"ಇಂಥದೇ ವಿಷಯ ಅ೦ತಿಲ್ಲ."
"ಅರ್ಥವಿಲ್ಲದ್ದು! ಯಾವ ಭಾಷಣಕ್ಕೂ ನಾನು ಆಸ್ಪದ ಕೊಡೋದಿಲ್ಲ!"
"ಹಾಗೇ ಆಗಲಿ ಸಾರ್,"
"ಇಲ್ನೋಡಿ. ಒಂದೇ ಒಂದು ನಿರ್ಣಯ ಸಮ್ಮೇಳನ ಸ್ವೀಕರಿಸಿದರೆ ಸಾಕು."
"ಯಾವುದು ಸಾರ್.?"
"ನಾನು ಹೇಳ್ತೀನಿ, ಬರೀರಿ."
ತಮ್ಮ ಕುರ್ಚಿಯನ್ನು ಸ್ವಾಗತ ಕಾರ್ಯದರ್ಶಿ ವಿದ್ಯಾಧಿಕಾರಿಯ ಹಿಂಬದಿಗೆ
ಒಯ್ದು, ಅದರಮೇಲೆ ಕುಳಿತು, ಸಾಹೇಬರು ಹೇಳಿದುದನ್ನು ಬರೆದುಕೊಂಡರು.
ಅದು, ಸರ್ಕಾರ ಗೊತ್ತುಪಡಿಸಿದ್ದ ವಿದ್ಯಾಸುಧಾರಣೆಯನ್ನು ಸ್ವಾಗತಿಸುವ
ನಿರ್ಣಯ.
“ಅದನ್ನು ಓದಿ ಬಿಡಿ."
ಕಾರ್ಯದರ್ಶಿ ಎದ್ದು ನಿಂತು ಗಟ್ಟಿಯಾಗಿ ಓದಿದರು ವಿದ್ಯಾಧಿಕಾರಿಯ ನಿರ್ದೇಶ
ದಂತೆ, "ಇದು ಸ್ವೀಕೃತವಾಯಿತೂಂತ ಸೂಚಿಸೋದಕ್ಕೆ ಎಲ್ಲರೂ ಕೈ ಚಪ್ಪಾಳೆ
ತಟ್ಬೇಕು," ಎ೦ದರು. ಹುಡುಗರೂ ಉಪಾಧ್ಯಾಯರೂ ಒಂದಾಗಿಯೇ ಕೈ
ತಟ್ಟಿದರು.
ಹೀಗೆ ಆ ನಿರ್ಣಯವನ್ನು ಸಮ್ಮೇಳನ ಸರ್ವಾನುಮತದಿಂದ ಸ್ವೀಕರಿಸಿತು.
ಅನಂತರ ನಡೆದುದು ಬಲು ಚುಟುಕಾದ ಉಪಸಂಹಾರ ಭಾಷಣ:
"ಸಂಬಳ ಜಾಸ್ತಿಮಾಡೀಂತ ನೀವು ಕೂಗಾಡಿದರೆ ಸಾಲದು. ಅದಕ್ಕೆ ತಕ್ಕ
ಯೋಗ್ಯತೇನ ಬೆಳೆಸ್ಕೋಬೇಕು. ಜನರು ನಿಮಗೆ ಗೌರವ ಕೊಡದೇ ಹೋದರೆ ಅದು
ಸರಕಾರದ ತಪ್ಪಲ್ಲ. ನಿಮ್ಮ ತಪ್ಪು."
ಪರೋಕ್ಷವಾಗಿ ಜಯದೇವನನ್ನುದ್ದೇಶಿಸಿ ಆಡಿದ ಮಾತು, ಅದು.
ಶಿಸ್ತು, ವಿಧೇಯತೆ_ಅದೇ ಪುನಃ ಪುನಃ ಅವರು ಉಚ್ಚರಿಸಿದ ಪ್ರಧಾನ ಘೋಷ.
ವಂದನಾರ್ಪಣೆಯ ಬಳಿಕ ಬಾಲಿಕೆಯರು ಬಂದು ರಾಷ್ಟ್ರಗೀತೆ ಹಾಡಿದರು.
ಮನೋರಂಜನೆಯ ಕಾರ್ಯಕ್ರಮಗಳಿಗಾಗಿ ಹೆಚ್ಛು ಹೆಚ್ಚು ಜನ ಬಂದು ನೆರೆಯು
ತ್ತಿದ್ದಂತೆಯೇ, ವಿದ್ಯಾಧಿಕಾರಿ ವೇದಿಕೆಯಿಂದಿಳಿದು, ಎಲ್ಲರಿಗೂ ವಂದಿಸಿ, ಶಾಲೆಯೊಳಗೆ
ಲಘು ಉಪಾಹಾರ ಸ್ವೀಕರಿಸಿ, ಹಾರದೊಡನೆ ಟ್ಯಾಕ್ಸಿಯನ್ನೇರಿದರು.
ಅವರನ್ನು ಬೀಳ್ಕೊಡಲೆಂದು ಕೆಲ ಉಪಾಧ್ಯಾಯರು ಓಡಾಡಿದರು. ಬೇರೆ
ಕೆಲವರು ಜಯದೇವನನ್ನು ಸುತ್ತುಗಟ್ಟಿದರು.