ಈ ಪುಟವನ್ನು ಪ್ರಕಟಿಸಲಾಗಿದೆ

452

ಸೇತುವೆ

"ಆಗಲಿ. ಹೇಳ್ತೀನಿ."
... ಶನಿವಾರ ಮಧ್ಯಾಹ್ನ ‍‍ಇಂದಿರೆಯೂ ಆಕೆಯ ತಾಯಿಯೂ ಸುನಂದೆಯನ್ನು
ಕಾಣಲು ಬಂದರು. ಬೆಳಗ್ಗೆ ಶಾಲೆ ಶನಿವಾರ. ಜಯದೇವ ಮನೆಗೆ ಬರುವ ಹೊತ್ತು.
ಇಬ್ಬರಿಗೋಸ್ಕರ ಮಾತ್ರ ಅಡುಗೆ ಸಿದ್ಧವಾಗಿತ್ತು. ಆದರೂ ಹತಾಶಳಾಗದೆ
ಸುನಂದಾ ಅಂದಳು:
"ಕೂತ್ಕೊಳ್ಳಿ. ನಮ್ಮಲ್ಲೆ ನೀವು ಊಟಮಾಡಿಹೋಗ್ಬೇಕು,"
ಇಂದಿರೆಯ ತಾಯಿ ನಕ್ಕು ಅಂದರು:
"ಇಲ್ಲವಮ್ಮಾ. ನಾಳೆ ನೀವು ಊರಿಗೆ ಹೊರಡೊಲ್ವೆ?"
"ಹೊರಡ್ತೀವಿ."
"ಅದಕ್ಮುಂಚೆ ನೋಡ್ಕೊಂಡು ಹೋಗೋಣಾಂತ ಬಂದ್ವಿ. ಊಟಕ್ಕಲ್ಲ."
"ಛೆ! ಅದು ಹ್ಯಾಗಾಗುತ್ತೆ?"
ಇಂದಿರಾ ಧ್ವನಿ ಕೂಡಿಸಿದಳು:
"ಊಟಕ್ಕೆ ಇನ್ನೊಂದಿವಸ ಬರ್ತೀವಿ."
"ನಿಮ್ಮಿಬ್ಬರನ್ನೂ ಕರೀಬೇಕೂಂತ ಅವರು ಎಷ್ಟೋ ದಿವಸದಿಂದ ಹೇಳ್ತಾ
ಇದ್ರು."
ಇಂದಿರೆಯ ತಾಯಿ ಅಂದರು:
"ನಮ್ಮ ನೆನಪಾದರೂ ಇದೆಯಲ್ಲ ಸದ್ಯಃ! ಮರೆತೇ ಬಿಟ್ಟಿದೀರೇನೋಂತಿದ್ವಿ.
ಒಂದೇ ಊರಲ್ಲಿ ಇದ್ದೂ ಇಷ್ಟು ಅಂತರ ಅಂದರೆ_"
"ನನ್ನ ತಪ್ಪಲ್ಲ ಕಣ್ರೀ. ಸಾಯಂಕಾಲ ಅವರು ಬರೋದೇ ತಡವಾಗಿ. ಭಾನು
ವಾರ ಯಾರಾದರೂ ಬಂದ್ಬಿಡ್ತಿದ್ರು."
ಅಷ್ಟು ಹೊತ್ತಿಗೆ ಜಯದೇವ ಬಂದ. ಹಬ್ಬಕ್ಕೆಂದು ಹೊರಡುವ ಹಿಂದಿನ
ದಿನ ಆ ತಾಯಿ ಮಗಳು ಕಾಣಲು ದೊರೆತರೆಂದು, ಆತನಿಗೆ ಸಂತೋಷವಾಯಿತು.
ಕೈಕಾಲು ತೊಳೆದು ಬಂದ ಆತನನ್ನು ಕುರಿತು, ಇoದಿರೆಯ ತಾಯಿ ಹೇಳಿದರು:
"ಇಬ್ಬರೂ ದಯವಿಟ್ಟು ಚಾಪೆ ಮೇಲೆ ಕುತ್ಕೊಂಬಿಡಿ ಒಂದ್ನಿಮಿಷ."
"ಏನಿದು? ಏನಿದು?"
ಪ್ರತಿಭಟನೆಯಿಂದ ಪ್ರಯೋಜನವಿರಲಿಲ್ಲ. ಬೆಳ್ಳಿಯ ದೊಡ್ಡ ತಟ್ಟೆಯಲ್ಲಿ
ಇಂದಿರಾ ಉಡುಗೊರೆಗಳನ್ನು ಕೊಟ್ಟಳು_ಕಲಾಬತ್ತಿನ ಸೀರೆ; ಜರತಾರಿ ಅಂಚಿನ
ಪಂಚೆ.
ಏನು ಹೇಳಬೇಕೆಂದು ತಿಳಿಯದೆ ಜಯದೇವ ಚಡಪಡಿಸಿದ.
ಆತನೆಂದ:
"ಇದು ಸರಿಯಲ್ಲ."
ದೂರ ನಿಂತಿದ್ದ ಇಂದಿರೆಯ ತಾಯಿ ಹೇಳಿದರು: