ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

455

ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸಂಚಾರ ಮಾಡಿದಳು. ಆ ಸ್ವರಲೋಕದಲ್ಲಿ
ಮೈಮರೆಯುವುದು ಎಷ್ಟು ಹಿತಕರವಾಗಿತ್ತು! ಆದರೆ 'ಅವರು' ಮನೆಯಲ್ಲಿರಲಿಲ್ಲ;
ಅಣ್ಣನ ಜತೆ ಹೊರ ಹೋಗಿದ್ದರು. ಅದರಿಂದಾಗಿ, ಬಾನುಲಿಯ ಇಂಚರ ಬಲು
ಬೇಗನೆ ಆಕೆಯನ್ನು ಬೇಸರಪಡಿಸಿತು.
ವೇಣುವಿಗೆ ಜಯದೇವನೀಗ ಭಾವ. ಹೊರ ಜಗತ್ತಿನ ದೃಷ್ಟಿಯಲ್ಲಿ,
ಸುನಂದೆಯೇ ಅವರಿಬ್ಬರನ್ನು ಬಿಗಿದಿದ್ದ ರಜ್ಜು. ಆದರೆ ವಾಸ್ತವವಾಗಿ ಅದೆಷ್ಟು ಸುಳ್ಳು!
ಸುನಂದೆಗಿಂತಲೂ ಮುಂಚೆಯೇ ಜಯದೇವನನ್ನು ಕಂಡವನು, ಆತನ ಸ್ನೇಹಿತನಾದ
ವನು, ವೇಣು. ಆತನಿಗೆ ಜಯದೇವ ಅಂದೂ ಜಯಣ್ಣನೇ; ಇಂದೂ ಜಯಣ್ಣನೇ.
"ಪಟಾಕಿ ಹಚ್ತಿಯೇನೋ ಜಯಣ್ಣ? ತರಲಾ?"
"ಹೂಂ."
ಶ್ರೀಪತಿರಾಯರೆಂದರು:
"ಆ ಆಟಂಬಾಬ್ ಮಾತ್ರ ತರಬೇಡೀಪ್ಪಾ. ನನ್ನ ಕಿವಿ ಒಡೆದು ಹೋಗುತ್ತೆ."
ಸುನಂದಾ, ಬೆಳಕಿನ ಲೋಕದಲ್ಲಿ ಮಗುವಾದಳು. ನಕ್ಷತ್ರಗಳು ಜಯದೇವನ
ಸುತ್ತಲೂ ಮಿನುಗಿದಾಗ ಆಕೆ ಕೈತಟ್ಟಿ ಕುಣಿದಳು.
ಆಗ ತಾಯಿ, ಮಗಳ ಬಳಿಗೆ ಬಂದು ಅಂದರು:
"ನೀನು ಹಾಗೆಲ್ಲಾ ಚೆಲ್ಲು ಚೆಲ್ಲು ಆಡ್ಬಾರದು ಕಣೇ. ದೇಹಕ್ಕೆ ಆಯಾಸ
ವಾಗುತ್ತೆ."
ಊಟ ಮುಗಿದು ವಿರಾಮವಾಗಿದ್ದ ಹೊತ್ತಿನಲ್ಲಿ ಶ್ರೀಪತಿರಾಯರು ಹೇಳಿದರು:
"ಹೋದ ತಿಂಗಳು ನಿನ್ನ ತಂದೆ ಬಂದಿದ್ರು ಜಯಣ್ಣ. ಏನೋ ಕೋರ್ಟು
ಕೆಲಸವಿತ್ತಂತೆ. ಒಂದು ಕಾಲುಘಂಟೆ ಹೊತ್ತು ಕೂತಿದ್ದು ಹೋದ್ರು."
"ಹೌದೆ? ಒಂದು ಸಲ ಮಾತ್ರ ನನಗೆ ಕಾಗದ ಬರೆದಿದ್ರು."
"ನಾಳೆ ನಾಡಿದ್ನಲ್ಲಿ ಹೋಗಿ ನೋಡ್ಕೊಂಡು ಬರ್ತೀಯೇನು?"
ತಂದೆಯನ್ನು ನೋಡಿ ಬರಬೇಕೆಂಬ ಮನಸೇನೋ ಜಯದೇವನಿಗಿತ್ತು. ಆದರೆ
ಈ ಸಲ ಕಾಲಾವಕಾಶವಿರಲಿಲ್ಲ. ಅಲ್ಲದೆ, ಜನವರಿ ತಿಂಗಳಿಡೀ ಕಳೆಯಬೇಕಾದ
ವರ್ಷದ ರಜಾ ಸಮೀಪಿಸುತ್ತಿತ್ತು. ಆಗ ಹೋಗಿ ಕೆಲವು ದಿನ ಇದ್ದು ಬಂದರಾಯ್ತು_
ಎಂಬ ಯೋಚನೆ ಬೇರೆ.
"ಈ ಸಲ ಬಿಡುವಾಗೊಲ್ಲ ಅಂತ ತೋರುತ್ತೆ. ಜನವರಿಯೆಲ್ಲಾ ರಜಾ ಇದೆ
ಯಲ್ಲ. ಆಗ ಹೋಗ್ತೀನಿ."
"ನಿನಗೆ ಅನುಕೂಲವಿದ್ದ ಹಾಗೆ ಮಾಡು."
ಸುನಂದೆಯ ತಾಯಿ ಹೇಳಿದರು:
"ನಿನ್ನ ತಮ್ಮ ಮಾಧು ಇಲ್ಲೇ ಇದಾನೋ ಏನೋ. ಹೋಗಿ ಕರಕೊಂಡ್ಬ
ರ್ತೀಯಾ ಜಯಣ್ಣ?"