488
ಸೇತುವೆ
"ಹೆಣ್ಣು ಹೆಂಗಸರೇ ಇದ್ದು ಬದುಕೋದು ಎಷ್ಟು ಕಷ್ಟ!"
ವ್ಯಥೆಯ ಧ್ವನಿಯಲ್ಲಿ ಜಯದೇವ ಹೇಳಿದ:
"ನೀವು ದಯವಿಟ್ಟು ಬೇಜಾರುಪಟ್ಕೋಬಾರದು.
"ಇಷ್ಟಾದ್ಮೇಲೆ ಇನ್ನು ನಂಜುಂಡಯ್ಯ ಪಾಠ ಹೇಳ್ತಾರೋ ಇಲ್ಲವೋ."
"ಅದಕ್ಕೂ ಇದಕ್ಕೂ ಏನು ಸಂಬಂಧ? ಭಾನುವಾರದಿಂದ ಅವರ ಮನೆಗೆ ಇಂದಿ
ರೇನೆ ಕಳಿಸ್ಕೊಡಿ."
"ಆಗಲಿ, ಬರ್ತೀನಿ."
"ಕೂತ್ಕೊಳ್ಳಿ," ಎಂದಳು ಸುನಂದಾ.
ಆಕೆಯೆಂದರು:
"ಬೇಡವಮ್ಮಾ. ಕತ್ತಲಾಗ್ಬಿಡುತ್ತೆ."
ಅವರು ಹೊರಡುತ್ತಿದ್ದಂತೆ ತಿಮ್ಮಯ್ಯ ಹೇಳಿದರು:
"ನೋಡೀಮ್ಮಾ, ನಾಳೆ ಆ ಹುಡುಗ ಬ೦ದರೆ ಕೈಸನ್ನೆಮಾಡಿ ಕರೀರಿ. ಕುಲ
ಗೋತ್ರ ವಿಚಾರಿಸ್ಕೊಂಡು ಸರಿಯಾಗಿ ಆಶೀರ್ವಾದ ಮಾಡಿ ಬೀದಿಗೆಸೀರಿ."
ಆಗಲೆ ಹೃದಯವನ್ನು ಬಹಳ ಮಟ್ಟಿಗೆ ಹಗುರಗೊಳಿಸಿಕೊಂಡಿದ್ದ ಆ ತಾಯಿ
ನಸುನಕ್ಕು ನುಡಿದರು:
"ಆಗಲಿ!"
...ಮಾರನೆಯ ದಿನ ಜಯದೇವ ಸ್ವಲ್ಫ ಬೇಗನೆ ಊಟ ಮುಗಿಸಿ ಆನಂದ
ವಿಲಾಸಕ್ಕೆ ಹೋದ.
ಹೋಟೆಲಿನ ಯಜಮಾನ ಹಳೆಯ ಗಿರಾಕಿಯನ್ನು ಸಂಭ್ರಮದಿಂದ
ಸ್ವಾಗತಿಸಿದ.
"ದಯಮಾಡಿಸಿ ಮೇಸ್ಟ್ರೆ. ನಮ್ಮನ್ನು ಮರೆತೇ ಬಿಡೋದೆ? ತಿಂಗಳಿಗೊಮ್ಮೆ
ಯಾದರೂ ಭೇಟಿ ಕೊಡಬಾರ್ದೆ?"
"ಮರೆಯೋದುಂಟೆ ಮಂಜುನಾಥಯ್ಯ? ಅನ್ನದಾತರನ್ನು ಮರೆತು ಯಾವ
ನರಕಕ್ಕೆ ಹೋಗಲಿ ಹೇಳಿ."
"ಹೊಗಳೋಕೂ ಕಲಿತ್ಬಿಟ್ರಿ ನೀವು," ಎನ್ನುತ್ತ ಹೋಟೆಲಿನ ಯಜಮಾನ,
ಹುಡುಗನನ್ನು ಕರೆಯದೆ, ತಾನೇ ಕೇಳಿದ:
"ಹೇಳಿ, ಏನು ತಗೋತೀರಾ?"
"ಈಗ್ತಾನೇ ಊಟವಾಯ್ತಪ್ಪ. ತಿಂಡಿ ಕಾಫಿಗೆ ಆ ಮೇಲೆ ಬರ್ತೀನಿ. ಇಲ್ಲಿ
ರಾಮಾಚಾರೀಂತ ಮೇಸ್ಟ್ರಿಲ್ವೆ? ಅವರನ್ನ ಸ್ವಲ್ಪ ಈಗ್ಲೇ ನೋಡ್ಬೇಕಾಗಿತ್ತು."
ಒಬ್ಬ ಹುಡುಗನನ್ನು ಕರೆದು, "ರಾಯರಿಗೆ ಆ ಮೇಸ್ಟ್ರ ರೂಮು ತೋರ್ಸೋ,"
ಎಂದರು ಯಜಮಾನರು.
ಜಯದೇವ ಹೊಕ್ಕುದು ಹೊಲಸಾಗಿದ್ದ ಕೊಠಡಿಯನ್ನು. ಕನ್ನಡ ಸಚಿತ್ರ