ಈ ಪುಟವನ್ನು ಪ್ರಕಟಿಸಲಾಗಿದೆ

336

ಸೇತುವೆ

 ಯಾಗಿ ಮುಗಿದಿರಲಿಲ್ಲವೆಂದು ಜಯದೇವನೇ ಹಿಂತೆಗೆದಿದ್ದ.
"ಇಲ್ಲ ಕಣೇ."
ಈ ಅಣ್ಣ ರಸಿಕನಲ್ಲವೇ ಅಲ್ಲವೆಂದು ಸತ್ಯವತಿ ನಿರಾಸೆಗೊಂಡಳು.
ಬೆಂಗಳೂರಿನಲ್ಲಿ ಓದು ಆರಂಭಿಸಿದ್ದ ತಮ್ಮ ಮಾಧೂ ತನ್ನ ಪರೀಕ್ಷೆ ಮುಗಿಸಿ
ಊರಿಗೆ ಬ೦ದು ಆಗಲೆ ಎರಡು ವಾರಗಳಾಗಿದ್ದುವು.
"ನೋಡು ಜಯಣ್ಣ. ಮಾಧೂ ವಾರಕ್ಕೊಂದ್ಸಲ ಸಿನಿಮಾಕ್ಕೆ ಹೋಗ್ತಾನಂತೆ."
ಅದು, ಅಂತಹ ಅವಕಾಶವಿಲ್ಲದೆ ತಂಗಿ ಕೋಟ್ಟ ದೂರು.
ಮಾಧೂ "ಶ್!" ಎಂದ. "ಅಮ್ಮನಿಗೆ ಕೇಳಿಸುತ್ತೆ. ಸುಮ್ನಿರೇ," ಎಂದು
ಅಂಗಲಾಚಿದ.
ಆದರೆ ಸತ್ಯವತಿ ತಿಳಿಯದೆ?
"ಹೂಂ. ಅಮ್ಮ ಸಿನಿಮಾ ನೊಡ್ಬೇಡ ಅಂತಾರೇನೋ? ಹಾಸ್ಟೆಲು ಖರ್ಚಿ
ಗಲ್ದೆ, ಬಂದಾಗ್ಲೆಲ್ಲ, ಅಮ್ಮನ ಕೈಯಿಂದ ಜಾಸ್ತಿ ಇಸ್ಕೊಂಡ್ಹೋಗ್ತೀಯಾ ಮತ್ತೆ..."
ಆ ಅಣ್ಣ ಆಕೆಯ ಜಡೆ ಹಿಡೆದು ಕುಲುಕಿ, ಕೆಂಗಣ್ಣು ತೋರಿಸಿ ಹೊರಹೋದ.
ಅಮ್ಮನಿಗೆ ಕೇಳಿಸಬಹುದೆನ್ನು ವುದಕ್ಕಿಂತಲೂ ಜಯದೇವನ ಎದುರು ತಂಗಿ ಆ ಪ್ರಸ್ತಾಪ
ಮಾಡಿದವಳೆಂಬುದೇ ಆತನ ಮುನಿಸಿಗೆ ಕಾರಣ.
ಎರಡು ದಿನಗಳಲ್ಲೆ ಆ ಮನೆ ಬೇಸರವಾಯಿತು ಜಯದೇವನಿಗೆ. ತಾನು ಹುಟ್ಟಿ
ಬೆಳೆದ ಕಟ್ಟಡದಲ್ಲೇ ಆತ ಅಪರಿಚಿತ. ಟೂರಿಂಗ್ ಟಾಕೀಸಿನ ಚಲಚ್ಚಿತ್ರ ನೋಡಿದು
ದಾಯಿತು. ಊರು ಸುತ್ತಿದುದಾಯಿತು. ಹೊಲಗಳಲ್ಲಿ ಹೊತ್ತು ಕಳೆದುದಾಯಿತು.
ಬರುತ್ತ, ವೇಣುವಿನ ಮನೆಯಿಂದ ಒಂದಷ್ಟು ಪುಸ್ತಕಗಳನ್ನಾದರೂ ತರಬಾರದಾಗಿತ್ತೆ
ತಾನು? ಈಗ ಪೆಟ್ಟಿಗೆಯಲ್ಲಿದ್ದುದು ಎರಡೇ. ಹಳೆಯವು. ಅವುಗಳನ್ನೆ ಜಯದೇವ
ಮತ್ತೆ ಮೆಲುಕು ಹಾಕಿದ.
ವೇಣು ಸುನಂದೆಯರಂತೂ ಬರುವ ಚಿಹ್ನೆ ಕಾಣಿಸಲಿಲ್ಲ.
ಆತನ ತಂದೆ ಕೇಳಿದರು:
"ಮುಂದಿನ ವರ್ಷವೂ ಅದೇ ಸ್ಕೂಲ್ನಲ್ಲಿ ಇರಬೇಕೂಂತಿದೀಯ ಜಯಾ?"
ತನ್ನ ಯೋಜನೆ ತಂದೆಗೆ ಇಷ್ಟವಾಗಬಹುದೆಂದು ಎಣಿಸಿದ್ದ ಜಯದೇವ. ಹಿಂದೆ
ಒಮ್ಮೆ ಅವರೇ ವಿಷಾದದಿಂದ ಕೇಳಿದ್ದರು:
'ಅಂತೂ ಬಿ.ಎ. ಮುಗಿಸೋಕೆ ಆಗ್ಲಿಲ್ಲ, ಅಲ್ವೇನೋ?'
ಆಗ ಉತ್ತರವಿತ್ತಿದ್ದ :
'ಅದರ ಯೋಚನೆಯೇ ಇಲ್ಲ ಅಪ್ಪಾ....'
ಈಗ 'ಯೋಚನೆ' ಇತ್ತು. ಅದನ್ನು ಆತ ತಂದೆಗೆ ತಿಳಿಸಿದ.
ಒಮ್ಮೆಲೆ ಏನನ್ನೂ ಹೇಳದೆ, ಸ್ವಲ್ಪ ಹೊತ್ತು ಸುಮ್ಮನಿದ್ದ ಬಳಿಕ ಅವರೆಂದರು:
"ಶಾನುಭೋಗರ ಕೆಲಸ ವಂಶಪಾರಂಪರ್ಯವಾಗಿ ಬಂದದ್ದು. ನನ್ನ ಜತೇಲಿ