ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

507



...ಲಕ್ಕಪ್ಪಗೌಡರು ಎದೆಯೆತ್ತಿ ಸೆಟೆದು ನಡೆಯುವ ಪರಿಸ್ಥಿತಿಯೇನೂ ಆ
ಊರಲ್ಲಿರಲಿಲ್ಲ, ನಾಡಿನಲ್ಲಿಯೂ ಇರಲಿಲ್ಲ, ದೇಶದಲ್ಲಿಯೂ ಇರಲಿಲ್ಲ.
ಬಹಳ ಜನಕ್ಕೆ ಬಹಳ ಮಟ್ಟಿಗೆ ಒಪ್ಪಿಗೆಯಾಗಿತ್ತು-ಒಂದು ನುಡಿ ಒಂದು ನಾಡು
ಎಂಬ ತತ್ತ್ವ. ಅಸಹನೆಯ ಆಕ್ರೋಶ ಒಂದೇ ಸಮನೆ ನಡೆದಿದ್ದರೂ ಕುದಿಯುತ್ತಿದ್ದ
ಮೆದುಳನ್ನು ತಣ್ಣಗೆ ಇರಿಸಿಕೊಂಡಿದ್ದವರಿಗೆ, ಬೇರೆ ಹಾದಿಯೇ ಇಲ್ಲ ಎಂಬುದು
ಮನದಟ್ಟಾಗಿತ್ತು.
ನಾಡಿನೊಳಗಂತೂ ಕೆಲವೇ ತಿಂಗಳಲ್ಲಿ ಎಷ್ಟೊಂದು ಬದಲಾಗಿರಲಿಲ್ಲ ವಿಚಾರ
ಸರಣಿ! ವಿಲೀನ ವಿರೋಧಿಗಳ ಮಂಡ್ಯ ಸಮ್ಮೇಳನ, ಸಂಘಟಿಸಿದವರ ದೃಷ್ಟಿ
ಯಿಂದೇನೊ ಯಶಸ್ವಿಯಾಯಿತು. ಆದರೆ ಜನಮನವನ್ನು ಕನ್ನಡರಾಜ್ಯಕ್ಕಿದಿರಾಗಿ
ಹರಿಸುವ ಯತ್ನದಲ್ಲಿ ಏನೇನೂ ಸಫಲವಾಗಲಿಲ್ಲ. ಮೊದಲು ಉಸಿರೆತ್ತಿದೊಡನೆಯೆ
ಹೂಂಕರಿಸಿದ್ದವರು ಈಗ ಮೌನ ತಳೆದರು. ಮೊದಲು ಮೌನವಾಗಿದ್ದವರು ಈಗ ಬೆಂಬಲ ನೀಡಿದರು.
ನಂಜುಂಡಯ್ಯ - ಲಕ್ಕಪ್ಪಗೌಡರೊಳಗಿನ ವೈಷಮ್ಯ ಬಗೆಹರಿಯದೆ ಇದ್ದುದರಿಂದ,
ಉಪಾಧ್ಯಾಯರ ಕೊಠಡಿಯಲ್ಲೀಗ ಹೆಚ್ಚಿನ ಚರ್ಚೆ ಈ ವಿಷಯವಾಗಿ ಆಗಲಿಲ್ಲ.
ಅದರೂ ಹೊರಗೋ, ಬೀದಿ ನಡೆಯುತ್ತಿದ್ದಾಗಲೋ, ಜಯದೇವ ಅವರನ್ನು
ಕೇಳುವುದಿತ್ತು:
"ಈಗಲೂ ಅದೇ ಅಭಿಪ್ರಾಯವನ್ನೇ ಇಟ್ಕೊಂಡಿದೀರಾ ಗೌಡರೆ?"
"ಹೌದಪ್ಪ. ಅದೇ ಅಭಿಪ್ರಾಯ."
"ಏನೇ ಇರಲಿ. ನೀವು ಧೈರ್ಯವಂತರು. ಇಷ್ಟು ಒಪ್ಕೊಳ್ಲೇಬೇಕು!"


೨೦

ಹಳ್ಳಿಗೆ ಹೊರಟಿದ್ದ ತಿಮ್ಮಯ್ಯನವರೊಡನೆ ಸ್ವಲ್ಪ ದೂರ ನಡೆದು ಹಿಂತಿರುಗಿದ
ಜಯದೇವ, ಮನೆ ಸೇರಿ ದೀಪ ಹಚ್ಚುತ್ತಿದ್ದಂತೆ, ಹೊರಗಿನಿಂದ ನಂಜುಂಡಯ್ಯನವರ
ಸ್ವರ ಕೇಳಿಸಿತು:
"ಜಯದೇವ್, ಮನೇಲಿದೀರಾ?"
"ಇದೀನಿ ಬನ್ನಿ," ಎನ್ನುತ್ತ ಜಯದೇವ ಬಾಗಿಲ ಬಳಿಗೆ ಬಂದು ನಂಜುಂಡಯ್ಯ
ನವರನ್ನು ಸ್ವಾಗತಿಸಿದ.
"ರೇಡಿಯೋದಲ್ಲಿ ಸಾಯಂಕಾಲ ಒಳ್ಳೇ ಸುದ್ದಿ ಕೇಳ್ದೆ. ನಿಮಗೆ ತಿಳಿಸೋಣಾಂತ
ಬಂದೆ."