ಈ ಪುಟವನ್ನು ಪ್ರಕಟಿಸಲಾಗಿದೆ

364

ಸೇತುವೆ

ಅಲ್ಲಿಗೆ ಬರುತ್ತಿದ್ದಿರಬಹುದು. ಆದರೆ ತನ್ನಲ್ಲಿ ಅವರ ಮಗನ-ಅಳಿಯನ-ವಿಳಾಸ
ಇರಲಿಲ್ಲ. ಉತ್ತರ ದೊರೆಯಬಹುದೆಂಬ ಆಸೆಯಿಂದ ಕೊಡಗನೂರಿಗೇ ಒಮ್ಮೆ ಆತ
ಬರೆದಿದ್ದ. 'ವಿಳಾಸದಾರರು ಕೊಡಗನೂರಲ್ಲಿಲ್ಲ'-ಎಂಬ ಗುರುತಿನೊಡನೆ ಕಾಗದ
ವಾಪಸು ಬಂದಿತ್ತು. ಎಲ್ಲಿಗೆ ಹೋದರೊ? ಸ್ವಾಭಿಮಾನಿಯಾದ ಅವರು ರಾಜಿನಾಮೆ
ಕೊಟ್ಟಿದ್ದರೂ ಕೊಟ್ಟಿರಬಹುದು. ಆಕಸ್ಮಿಕ ಭೇಟಿಯಂತೂ ಬೆಂಗಳೂರಿನಲ್ಲಿ ಆಗಲಿಲ್ಲ.
ವಿದ್ಯಾಧಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದ್ದರೆ ಪ್ರಾಯಶಃ ತಿಳಿಯುತ್ತಿತ್ತು...
ಕುರ್ಚಿ ಸರಿಸಿದ ಸದ್ದಾಯಿತು. ನಂಜುಂಡಯ್ಯ ಎದ್ದರು. ಹೊರ ಬಂದು,
ಜಯದೇವನ ಯೋಚನೆಗಳಿಗೆ ಪೂರ್ಣ ವಿರಾಮ ಹಾಕುತ್ತ ಅವರೆಂದರು:
"ಎಚ್ಚರವಾಯ್ತೆ ಜಯದೇವ್? ನಾಲ್ಕಾಯ್ತು ಘಂಟೆ."
[ಹಿಂದೆ ಮಿಸ್ಟರ್ ಜಯದೇವನಾಗಿಯೆ ಆತ ಇರುತ್ತಿದ್ದ. ಆದರೆ ಈಗ
ಯಾವಾಗಲೂ ಆತ್ಮೀಯನಾದ ಜಯದೇವ.]
"ಎದ್ಬಿಟ್ಟೆ."
ಎದ್ದು ಕುಳಿತ ಜಯದೇವನ ಕಣ್ಣಿಗೆ, ಸುತ್ತಿದ ಹಾಸಿಗೆಯೂ ತುಂಬಿದ ಗೋಣಿ
ಚೀಲವೂ ಕಾಣಿಸಿದುವು.
ಆತ ಉದ್ಗಾರವೆತ್ತಿದ:
"ಓ! ಸಾಮಾನುಗಳು ಬಂದುವೇನು? ಗೊತ್ತೇ ಆಗ್ಲಿಲ್ಲ ನನಗೆ!"
"ನಾನೇ ಇಳಿಸ್ದೆ. ನಿಮಗೆ ಗೊತ್ತಾಗೋಕೆ ಈ ಲೋಕದಲ್ಲಿ ಆಗ ನೀವು ಇದ್ದರೆ
ತಾನೆ?"
"ಯಾಕ್ಸಾರ್,ನೀವು ಮಧ್ಯಾಹ್ನದ ಹೊತ್ತು ಮಲಗೊಲ್ವೆ?"
"ಇಲ್ಲವಪ್ಪ! ರಾತ್ರೆ ನಿದ್ದೆ ಇಲ್ದೆ ಸಂಕಟ ಪಡೋರು ಯಾರು? ಅದಕ್ಕೋಸ್ಕರ
ಹಗಲು ಹಾಸಿಗೆ ಹತ್ತಿರಕ್ಕೆ ನಾನು ಸುಳಿಯೋದೇ ಇಲ್ಲ."
ನಂಜುಂಡಯ್ಯನವರ ಮಗಳು ಕಂಚಿನ ಚೊಂಬಿನಲ್ಲಿ ನೀರು ತಂದಳು_ಜಯ
ದೇವ ಮುಖ ತೊಳೆಯಲೆಂದು.
ಎರಡು ನಿಮಿಷ ತಡೆದು ಕಾ‌ಫಿಯ ಲೋಟಗಳು ಬಂದುವು, ಖಾರದ ಅವಲಕ್ಕಿ
ಯೊಡನೆ.
...ಆ ಹೊಸ ವಾತಾವರಣಕ್ಕೆ ಸುನಂದಾ ಸುಲಭವಾಗಿ ಹೊಂದಿಕೊಂಡುಳು.
ಸರಳ ಜೀವಿಯಾದ ಪಾರ್ವತಮ್ಮನೊಡನೆ ಆಕೆ ಸ್ನೇಹ ಬೆಳೆಸಿದುದರಲ್ಲಿ ಆಶ್ಚರ್ಯ
ವೇನೂ ಇರಲಿಲ್ಲ. ಬಹಳ ಕಾಲದಿಂದ ನಡೆದು ಬಂದಿದ್ದ ರೀತಿನೀತಿಗಳಲ್ಲಿ ಸ್ವಲ್ಪ
ಅಂತರವಿದ್ದರೂ ಸಹೃದಯತೆ ಮೃದುಲ ಮನೋವೃತ್ತಿಗಳು ಅವರಿಬ್ಬರ ಬಾಂಧವ್ಯಕ್ಕೆ
ಬೆಸುಗೆಯಾದುವು.
ಅಡುಗೆ ಮನೆಯ ಸುರಕ್ಷಿತ ಸ್ಥಳದಲ್ಲಿ ಪಾರ್ವತಮ್ಮನೆಂದಳು:
"ನೀವು ನಮ್ಮ ಮನೇಲಿ ಊಟ ಮಾಡಿದಿರೀಂತ ಹೊರಗೆ ಗೊತ್ತಾದ್ರೆ ಗಲಾಟೆ