ಈ ಪುಟವನ್ನು ಪ್ರಕಟಿಸಲಾಗಿದೆ

374

ಸೇತುವೆ

"ಕೂತ್ಕೊಳ್ಳಿ ಸಾರ್.
"ನಂಜುಂಡಯ್ಯ ಆ ಆತಿಥ್ಯ ಸ್ವೀಕರಿಸಲು ನಿರಾಕರಿಸಿ ನಿಂತುಕೊಂಡೇ ನುಡಿದರು:
“ಈ ಕೆಲಸವೆಲ್ಲ ಜವಾನ ಮಾಡ್ತಿರ್‍ಲಿಲ್ವೆ? ಅಷ್ಟಕ್ಕೇ ನಿಲ್ಸಿ. ಊಟಮಾಡ್ಕೊಂಡು
ಆತ ಬಂದ್ಬಿಡ್ತಾನೆ. ಹೇಳಿದೀನಿ."
ಸುನಂದಾ ಹೊರಬಂದಳು, ಮುಗುಳುನಗುತ್ತ ನಂಜುಂಡಯ್ಯ ಕೇಳಿದರು.
"ಅಡುಗೆ ಆಯ್ತೇನ್ರೀ?"
“ಆಗ್ತಾ ಇದೆ, ಎಂದಳು ಸುನಂದಾ.
ಆ ಕ್ಷಣದಲ್ಲೆ , ಬಂದವರು ಯಾರೆಂದು ನೋಡಲು ಹೊಗೆಯೂ ಹೊರಗಿಣಿಕಿತು.
"ಆ ಮುಠ್ಠಾಳ ಹಸಿ ಸೌದೆ ತಂದ್ಕೊಟ್ವಿಲ್ಲ ತಾನೆ ಎಲ್ಲಾದರೂ?" ಎಂದು
ಏನೋ ನೆನಪಾದವರಂತೆ ನಂಜುಂಡಯ್ಯನೆಂದರು.
“ಸ್ವಲ್ಪ ಹಸೀನೆ," ಎಂದಳು ಸುನಂದಾ.
"ಸ್ವಲ್ಪ ಏನ್ಬಂತು? ನನಗೆ ಕಾಣಿಸೋದಿಲ್ವೇನು?"
ಇತರ ಸಾಮಾನುಗಳ ಜತೆ, ಬಿಚ್ಚಿದ್ದ ಸೌದೆ ರಾಶಿಯೂ ಅಲ್ಲಿಯೇ ಬಿದ್ದಿತ್ತು.
“ಪರವಾಗಿಲ್ಲ ಒಣಗುತ್ತೆ," ಎಂದ ಜಯದೇವ.
"ಪರವಾಗಿಲ್ವಂತೆ. ಆ ನನ್ಮಗನ ಚರ್ಮ ಸುಲೀಬೇಕು. ಅಷ್ಟೂ ಬುದ್ದಿ ಬೇಡ್ವೆ?
ನಮ್ಮ ಮನೆಯಿಂದ ಒಂದು ಹೊರೆ ಇಸಕೊಂಡು ಬರೋಕೆ ಏನಾಗಿತ್ತು ಆತನಿಗೆ?
ನನಗಂತೂ ಮರೆತ್ಹೋಯ್ತು. ನೀವೂ ಸರಿಯೆ!"
“ಇರಲಿ, ಸಾರ್. ಸರಿಹೋಗುತ್ತೆ."
“ಏನಾದರೂ ಬೇಕಾದರೆ ಹೇಳೀಮ್ಮ, ಹೇಳಿ ಜಯದೇವ್. ಊಟ ಇನ್ನೂ
ಎ‌‌ಷ್ಟು ತಡವೋ ಏನೋ. ಬನ್ನಿ, ನಮ್ಮನೆಗೇ ಹೋಗಿಬಿಡೋಣ. ಏನಂತೀರಾ?"
"ಬೇಡಿ, ಬೇಡಿ, ಅಡುಗೆ ಆಗ್ತಾಬಂತು," ಎಂದಳು ಸುನಂದಾ, ಅಂತಹ ಆಹ್ವಾನ
ತನಗೆ ಅವಮಾನವೆಂಬಂತೆ.
"ಅಡುಗೆ ಆಗುತ್ತೆ. ಆದರೆ ನಿಮ್ಮನ್ನೂ ಇವತ್ತು ಇಲ್ಲೇ ಊಟಕ್ಕೇಳೀಂತ
ಹೇಳೋ ಸ್ಥಿತೀಲಿ ನಾವಿಲ್ಲ, ಅಷ್ಟೆ." ಎಂದ ಜಯದೇವ.
“ಸರಿ, ಸರಿ. ಅಡುಗೆಯೂ ಇಲ್ಲೇ ಅಂದ್ಮೇಲೆ ಗೃಹಪ್ರವೇಶ ಆಗೇ
ಹೋಯ್ತೂಂತನ್ನಿ ಹಾಗಾದರೆ. ಹೋಗಲಿ, ಸಂಜೆ ಕಾಫಿಗಾದರೂ ಬರ್‍ತೀರೋ?
ಬೆಳಗಿನ ಹೊತ್ತು ಶಾಲೆ ಮಾಡಿದ್ಮೇಲೆ, ಸಾಯಂಕಾಲವೆಲ್ಲ ಏನು ಮಾಡೋಣ
ಅಂತಾನೇ ತೋಚೋದಿಲ್ಲ."
"ಇವತ್ತು ಸಾಯಂಕಾಲ...", ಎಂದು ಜಯದೇವ ತಡವರಿಸಿ ನಿಂತ.
“ಅಂಗಡಿಗೆಲ್ಲ ಹೋಗಬೇಕಾಗುತ್ತೋ ಏನೋ. ಆಗಲಿ. ಇವತ್ತು ಪೂರ್ತಿ
ನಿಮ್ಮ ದಿನವೇಂತಿಟ್ಕೊಳ್ಳಿ. ಜವಾನನ ಸಹಾಯವೂ ಬೇಡಾ೦ತ ಅನ್ಬೇಡಿ, ಅಷ್ಟೆ."
ಅಷ್ಟು ಹೇಳಿ ನಂಜುಂಡಯ್ಯ, "ಬರ್‍ತೀನಿ", ಎನ್ನುತ್ತ ಹಾಗೆಯೇ ಹೊರಟು