ಈ ಪುಟವನ್ನು ಪ್ರಕಟಿಸಲಾಗಿದೆ

382

ಸೇತುವೆ

“ನೀವು ಒಬ್ಬರೇ ಇದೀರಾ ಸಾರ್?”
[ಅಯ್ಯೋ, ಪುಣ್ಯಾತ್ಮ!]
"ಒಬ್ನೇ ಇದ್ದಿದ್ರೆ ಇಷ್ಟೆಲ್ಲಾ ತಾಪತ್ರಯ ಇರ್‍ತಿತ್ತೆ ನಾಗರಾಜ?"
"ಗೊತ್ತು ಸಾರ್! ಗೊತ್ತು! ನಿನ್ನೇನೇ ಗೊತ್ತಾಯ್ತು!"
[ಗೊತ್ತಿದ್ದರೂ ಕೇಳಿದ್ದ ಖಿಲಾಡಿ. ಆ ಕಣ್ಣುಗಳಲ್ಲಿ ಮಿಂಚಿದ ಹೊಳಪೋ__
ತುಟಿಗಳ ಮೇಲೆ ಕುಣಿದ ನಗೆಯೋ.]
ಗುರುಶಿಷ್ಯರ ಸಂಭಾಷಣೆಯಿಂದ ಇತರ ಗಿರಾಕಿಗಳಿಗೆ ಸಾಮಾನು ಸಿಗುವುದು
ತಡವಾಯಿತು. ಆದರೆ, ಬೇಗನೆ ಮನೆಗೆ ಹೋಗಬೇಕೆಂಬ ಆತುರವಂತೂ ಯಾರಿಗೂ
ಇರಲಿಲ್ಲ. "ಹೊತ್ತಾಯ್ತು" ಎಂದು ಒಬ್ಬರೂ ಹೇಳಲಿಲ್ಲ. ಎಲ್ಲರೂ ಅಂಗಡಿಯ ಮಾಲಿಕನ ಆದರಕ್ಕೆ ಪಾತ್ರನಾದ ಗಿರಾಕಿಯನ್ನು ನೋಡುತ್ತ ನೀತರು.
ಎಣ್ಣೆಯ ಶೀಷೆಗಳನ್ನೂ ಒಂದು ಚೀಲವನ್ನೂ ಬಾವಿಯ ಹಗ್ಗವನ್ನೂ ಜವಾನನ
ಕೈಗೆಕೊಟ್ಟು, ಇನ್ನೊಂದು ಚೀಲವನ್ನು ತಾನೆತ್ತಿಕೊಂಡು, ಜಯದೇವ ಮನೆಯ ಕಡೆ
ಹೊರಟ.
ಪುಟ್ಟ ಹುಡುಗರು ಬೀದಿಯಲ್ಲಿ ಆಟವಾಡುತ್ತಿದ್ದರು. ಅವರಿಗೆ ಜಯದೇವ
ಅಪರಿಚಿತ. ಆದರೆ ನಾಳೆ, ತಾನು ಉಪಾಧ್ಯಾಯನೆಂಬುದು ಅವರಿಗೆಲ್ಲ ತಿಳಿದಾಗ, ಆ
ಹುಡುಗರು ಪ್ರಾಥಮಿಕ ಶಾಲೆಯವರಿರಲಿ ಮಾಧ್ಯಮಿಕ ಶಾಲೆಯವರಿರಲಿ, ಬೀದಿ
ಯುದ್ದಕ್ಕೂ ನೂರು ನಮಸ್ಕಾರಗಳು ಆತನಿಗೆ...
ಮನೆ ತಲಪಿದಾಗ, ಉಪ್ಪಿಟ್ಟು ಕಾಫಿ ಸಿದ್ಧವಾಗಿದ್ದುವು.
[ಅಸಹನೆಯಿಂದ ಅದೆಷ್ಟು ಬಾರಿ ಬಾಗಿಲಿನ ಹೊರಗಿಣಿಕಿ ಒಳಹೋಗಿದ್ದಳು
ಸುನಂದೆ!]
ಜವಾನ, ನಂಜುಂಡಯ್ಯನವರ ಮನೆಯಲ್ಲಿ ತಿಂಡಿ ತಿಂದಿದ್ದ, ಊಟ ಮಾಡಿದ್ದ.
ಆದರೆ ಕಾಫಿಯ ಗೌರವ ಎಂದೂ ಆತನಿಗೆ ಅಲ್ಲಿ ದೊರೆತಿರಲಿಲ್ಲ. ಜಯದೇವನ ಮನೆ
ಯಲ್ಲಿ ಕಾಫಿಯ ಬಿಸಿ ಲೋಟ ಕೈಗೆತ್ತಿಕೊಂಡಾಗ, ಆ ಬಾಡಿದ ಮುಖದ ಮೇಲೂ
ಮಂದಹಾಸ ಮಿಂಚಿತು.
...ಸಂಜೆ ಕಳೆದು ಇರುಳಾಯಿತು.
ತಾವು ಕಟ್ಟಿದ್ದ ಗೂಡಿನಲ್ಲಿ ಅವರಿಬ್ಬರೇ.
ಅಕ್ಕಪಕ್ಕದ ಮನೆಗಳಿಂದ ಸ್ವರಗಳು ಕೇಳುತ್ತಿದ್ದುವು. ಹುಡುಗರು ಪಾಠ ಗಟ್ಟಿ
ಮಾಡುತ್ತಿದ್ದರು. ಯಾರೋ ನಗುತ್ತಿದ್ದರು. ಗ೦ಡ, ಹೆಂಡತಿಯನ್ನು ಹೊಡೆಯು
ತ್ತಿದ್ದ. ಕುಡಿದು ಗುಡಿಸಲ ಕಡೆ ಹೊರಟಿದ್ದ ಇಬ್ಬರು, ಹಾಡುತ್ತ ತೂರಾಡುತ್ತ ಆ
ಬೀದಿಯಲ್ಲೆ ನಡೆದು ಹೋದರು.
ಊಟ ಮುಗಿದು ದಂಪತಿ ಅಡಿಕೆಯ ಚೂರು ಮೆಲ್ಲುತ್ತಿದ್ದಾಗ, ಸುನಂದಾ
ಕೇಳಿದಳು: