ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

393

"ಏನೆಂದಿರಿ?"
"ಏನಿಲ್ಲ,ಏಳ್ತಾ ಇದೀನಿ,ಅಂದೆ."
ಜಯದೇವ ಎದ್ದು ಅಡುಗೆ ಮನೆಗೆ ಹೋಗಿ ಒಲೆಯ ಮುಂದೆ ಕುಳಿತ. ಆತನ
ಮುಖವನ್ನು ನೋಡಿ ಸುನಂದಾ ನಿಷ್ಠುರದ ಧ್ವನಿಯಲ್ಲಿ ಅಂದಳು:
"ಹೋಗಿ. ಮುಖ ತೊಳಕೊಂಡು ಬನ್ನಿ."
"ಒಂದು ಗುಟುಕು ಕೊಡೇ."
"ಗುಟುಕೂ ಇಲ್ಲ, ಏನೂ ಇಲ್ಲ. ಶಾಲೇಲಿ ಹುಡುಗರಿಗೆ ಹೀಗೇ ತಾನೆ
ಆರೋಗ್ಯ ಪಾಠ ಹೇಳೋದು?"
"ಆರೋಗ್ಯ ನಂಜುಂಡಯ್ಯ ಮಾಡ್ತಾರೆ ಕಣೇ."
"ಏಳ್ತೀರೋ ಇಲ್ಲವೋ?"
ಜಯದೇವ ಹುಸಿಮುನಿಸು ತೋರುತ್ತ ಗೊಣಗುತ್ತ ಎದ್ದು ಬಚ್ಚಲು ಮನೆಗೆ
ನಡೆದ.
......ಮೊದಲ ಲೋಟವನ್ನು ಆತ ಬರಿದುಗೊಳಿಸುತ್ತಿದ್ದಾಗ ಅನಂತರದ
ಕಾರ್ಯಕ್ರಮವನ್ನು ಸುನಂದಾ ವಿವರಿಸಿದಳು:
"ಮೈಗೆ ಎಣ್ಣೆ, ಬಿಸಿನೀರು ಸ್ನಾನ, ಕಾಫಿ ತಿಂಡಿ, ನಿದ್ದೆ."
"ನೀನು?"
"ನನ್ನದು ನಾನು ನೋಡ್ಕೋತೀನಿ."
"ಒಟ್ಟಿನಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಕೈದಿ ನಾನು."
"ಕೈದಿಯಲ್ಲ. ಮುದ್ದಿಸಿ ಕೆಟ್ಟುಹೋಗಿರೋ ಮಗು."
“ಕೆಲಸ ಇದ್ದಿದ್ದರೆ ಇಷ್ಟು ಹೊತ್ತಿಗೆ ಒಂದು ಮುತ್ತು ಸಿಗ್ತಿತ್ತು. ರಜಾದಿನ
ಏನೂ ಇಲ್ಲ. ಮುದ್ದಿಸಿ ಕೆಟ್ಟುಹೋದ ಅಂತ ಬರೇ ಮಾತಿನಲ್ಲಿ ಹೇಳಿದರೆ ಸಾಕೇನು?"
ಸುನಂದಾ ಉತ್ತರಿಸುವುದಕ್ಕೆ ಅವಕಾಶವಿಲ್ಲದಂತೆ, ಹೊರಗಿನಿಂದ ಕರೆದ ಸ್ವರ
ಕೇಳಿಸಿತು:
"ಸ್ವಾಮೀ ಜಯದೇವರೇ, ಇದೀರಾ ಮನೇಲಿ?”
ಸುನಂದೆಗೆ ರೇಗಿತು. ಪಿಸುದನಿಯಲ್ಲಿ ಆಕೆ ಸಿಡಿ ನುಡಿದಳು:
"ಮನೇಲಿಲ್ಲಾಂತ ಕಳಿಸ್ಬಿಡ್ತೀನಿ.”
ಆದರೆ ಜಯದೇವ, ಸ್ವರವನ್ನು ಆಗಲೇ ಗುರುತಿಸಿದ್ದ. ಕರೆದಿದ್ದವರು ಲಕ್ಕಪ್ಪ
ಗೌಡರು.
ತನ್ನ ಗಂಡನ ಸಹೋದ್ಯೋಗಿ ಎಂದಮೇಲೆ ಆಕೆಯಾದರೂ ಹಾಗೆಯೇ ಕಳುಹಿ
ಬಿಡುವುದು ಸಾಧ್ಯವಿತ್ತೆ?
ಬಾಗಿಲು ತೆರೆದುದಾಯಿತು. ಇದಿರ್ಗೊಳ್ಳುತ್ತ ಜಯದೇವನೆಂದ:

50