ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

325

ಮನುಷ್ಯನನ್ನು ನುಂಗಬಯಸಿದುವು. ಸಹಪ್ರಯಾಣಿಕರ ಗಮನ ಸೆಳೆಯುವುದಕ್ಕೆ
ಮುಂಚೆಯೆ ಈ ಪ್ರಕರಣ ಮುಕ್ತಾಯವಾಗಲೆಂದು ಮತ್ತೂ ಎರಡಾಣೆ ತೆಗೆದು ಜಯ
ದೇವ ಹೊರಚಾಚಿದ.
ಆ ನಾಣ್ಯ ಕೈಗೆ ಬಿದ್ದೊಡನೆ ಆಳಿಗೆ ಸಂತೋಷವಾಯಿತು.
"ಬತ್ತೀನಿ ಬುದ್ಧೀ", ಎಂದು ನಡುಬಾಗಿಸಿ ನಮಿಸಿ,ಆತ ಪಕ್ಕಕ್ಕೆ ಹೊರಳಿದ.
"ಈ ಕೂಲಿಗಳೇ ಹಾಗೆ. ಎಷ್ಟು ಕೊಟ್ಟರೂ ತೃಪ್ತಿಯಿಲ್ಲ" ಎಂದು ಹಿಂಬದಿ
ಯಲ್ಲಿ ಕುಳಿತವರು ತೀರ್ಪಿತ್ತರು.
ಎಲ್ಲರಿಗೂ ಟಿಕೆಟ್ ಕೊಟ್ಟು ಮುಗಿದ ಬಳಿಕ ಕಂಡಕ್ಟರನೂ ಕಾಫಿಗೆ ಹೋದ.
ಅದನ್ನು ನೋಡಿದ ಯಾರೋ ಗೊಣಗಿದರು:
"ಇವನೂ ಎದ್ನಲ್ಲಪ್ಪ ಕಾಫಿಗೆ. ಎಷ್ಟು ಹೊತ್ತಾಗುತ್ತೋ ಈ ಬಸ್ಸು ಹೊರ
ಡೋದು..."
ಇನ್ನೊಬ್ಬರು ಸಮಾಧಾನಪಡಿಸಿದರು:
ಇಲ್ರೀ, ಸರಕಾರಿ ಬಸ್ಸು. ಟೈಮಿಗೆ ಸರಿಯಾಗಿ ಬಿಟ್ಬಿಡ್ತಾನೆ. ಇನ್ನೂ ಐದು
ನಿಮಿಷ ಇದೆ."
"ಏನು ಸರಕಾರಿ ಬಸ್ಸೋ! ನಿತ್ಯಾನಂದವೇ ಅನುಕೂಲವಾಗಿತ್ತು. ನಾವು ಹೇಳಿದ
ಕಡೆ ನಿಲ್ಲಿಸ್ತಿದ್ದ," ಎಂದು ಕೇಳಿಸಿತು ಮೂರನೆಯ ಸ್ವರ.
"ಅಲ್ವೇ ಪಾಪ! ನೀವು ವರ್ಷಕ್ಕೊಮ್ಮೆ ಪ್ರಯಾಣ ಮಾಡೋರೂಂತ ಕಾಣ್ತದೆ. ದಿನಾ ಹೋಗ್ತಾ ಬರ್ತಾ ಇದ್ವಲ್ಲ, ನಮ್ಮನ್ನು ಕೇಳಿ. ಮೈಮೂಳೆ ಒಂದಾದರೂ ಭದ್ರ
ವಾಗಿ ಉಳಿದಿದ್ರೆ!"
"ಅದೇನೋಪ್ಪ, ನಮ್ಮ ಕಡೆ ಚೆನ್ನಾಗಿರೋ ಖಾಸಗಿ ಬಸ್ಸುಗಳೂ ಇವೆ."
“ಯಾವುದು ನಿಮ್ಮೂರು?"...
ಸುನಂದಾ ಆ ಸಂಭಾಷಣೆಗೆ ಕಿವಿಗೊಡುತ್ತಿರಲಿಲ್ಲ. ತಾನು ಗೃಹಿಣಿಯಾಗಿ
ಬದುಕು ಆರಂಭಿಸುವ ಊರನ್ನು ನೋಡಲು ಆಕೆ ಆತುರಗೊಂಡಿದ್ದಳು. ಹಾಗೆಯೇ
ಹೊಸ ಹಾದಿಯನ್ನು ಮರಹೊಲಗಳನ್ನು ಮನೆ ಗುಡಿಸಲುಗಳನ್ನು ಕಾಣುವ ತವಕ.
ಜಯದೇವ ಮೆಲು ಧ್ವನಿಯಲ್ಲಿ ಕೇಳಿದ:
"ಏನು ಯೋಚ್ನೆ?"
"ಏನೂ ಇಲ್ಲ."
“ಬೇಜಾರಾಗಿದೆಯೇನು?"
"ಇಲ್ವಲ್ಲಾ. ಯಾಕೆ ಬೇಜಾರು?"
"ಸುಳ್ಳು. ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ. ಅಮ್ಮನನ್ನು ಜ್ಞಾಪಿ
ಸಿಕೋತಿದೀಯ ನೀನು!"
ಹೆತ್ತವರನ್ನು ಬಿಟ್ಟುಬರಲು ಹೆಣ್ಣಿಗಾಗುವ ಸಂಕಟ ಹೊಸದಲ್ಲವಲ್ಲ. ಸುನಂದೆ