ಈ ಪುಟವನ್ನು ಪ್ರಕಟಿಸಲಾಗಿದೆ

398

ಸೇತುವೆ

"ಸರಕಾರದ ಮಾನ್ಯತೆ ಸಿಗದೇ ಹೋದೀತೂಂತ ಒಂದೆರಡು ಸ್ಥಾನ ಬೇರೆಯವ
ರಿಗೂ ಕೊಟ್ಟಿದಾರೆ. ಈ ಪ್ರದೇಶದಲ್ಲೆಲ್ಲ ಇವರದೇ ಪ್ರಾಬಲ್ಯವಾದರೂ ಸರಕಾರದ
ಹತ್ತಿರ ಇವರ ಆಟ ಏನೂ ನಡೆಯೋದಿಲ್ಲ ನೋಡಿ."
[ಅಲ್ಲಿ ನಡೆಯುತ್ತಿದ್ದುದು ಬೇರೆಯವರದೇ ಆಟ ಹಾಗಾದರೆ.]
"ನಾನು ಒಂದು ಹೇಳ್ಲೆ ಲಕ್ಕಪ್ಪಗೌಡರೆ? ಖಾಸಗಿ ಉದ್ಯಮವಾಗಿ ವಿದ್ಯಾಭಾಸ
ಕ್ರಮ ನಡೀಲೇಬಾರದು. ಪ್ರಜೆಯ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಸಿ ಕೊಡೋದು
ಸರಕಾರದ ಜವಾಬ್ದಾರಿ. ಸರಕಾರ ಸರಿಯಾಗಿದ್ದರೆ ಯಾವ ಪಕ್ಷಪಾತಕ್ಕೂ ಅವಕಾಶವೇ
ಇರೋದಿಲ್ಲ."
"ಆದರೆ ನಮ್ಮ ದೇಶದಲ್ಲಿ ಸರಕಾರದ ಹತ್ತಿರ ಅಷ್ಟೊಂದು ಹಣ ಬೇಕಲ್ಲ.
ದೊಡ್ಡ ದೊಡ್ಡ ಕೈಗಾರಿಕೋದ್ಯಮಕ್ಕೇ ಹಣ ಇಲ್ದೆ ಇರುವಾಗ ವಿದ್ಯಾಭ್ಯಾಸಕ್ಕೆ
ಎಲ್ಲಿಂದ ತರ್‍ತಾರೆ?"
"ಅಂದ ಮೇಲೆ ಈ ತೊಂದರೆಗಳೆಲ್ಲ ಇದ್ದೇ ಇರ್‍ತವೆ!"
ಲಕ್ಕಪ್ಪಗೌಡರು ಮುಗುಳುನಗಲೆತ್ನಿಸಿ, ವಿಫಲರಾಗಿ, ಹೇಳಿದರು:
"ಹಾಗಾದರೆ ಈ ಜಾತಿಯ ದಬ್ಬಾಳಿಕೆಗೆ ಆಸ್ಪದ ಕೊಡೋಣವೊ?"
ಸುನಂದಾ ಅತ್ತ ಸುಳಿದಳು. ಆ ಕಣ್ಸನ್ನೆಯ ಇಂಗಿತವನ್ನು ತಿಳಿದ ಜಯದೇವ
ಹೇಳಿದ:
"ಇಲ್ಲಿಗೇ ತಂದ್ಬಿಡು."
ಬಳಿಕ ಗೌಡರತ್ತ ತಿರುಗಿ ಆತನೆಂದ:
"ದಬ್ಬಾಳಿಕೆ ಎಲ್ಲಿಂದಲೇ ಬರಲಿ, ಯಾರದೇ ಇರಲಿ, ಅದನ್ನ ನಾವು ಇದಿರಿಸ್ಲೇ
ಬೇಕು."
"ಇಂಗ್ಲಿಷರ ದಬ್ಬಾಳಿಕೆಯನ್ನು ಇದಿರಿಸಿದೋರು ನಾವು."
ಜಯದೇವ ಅವರನ್ನೊಮ್ಮೆ ನೋಡಿ ಹೇಳಿದ:
"ಚಳವಳೀಲಿದ್ದಿರಾ ನೀವು?"
"ಇದ್ದೆ ಸ್ವಾಮಿ. ನಾಲ್ವತ್ತೆರಡನೆ ಇಸವೀಲಿ ನಾನೂ ಆರು ತಿಂಗಳು ಜೈಲಿಗೆ
ಹೋಗಿದೀನಿ. ಕೆಲಸವೇನೋ ತಿರುಗಿ ಸಿಗ್ತೂಂತಿಟ್ಕೊಳ್ಳಿ ಆಮೇಲೆ."
"ಹಾಗೇನು? ನನಗೆ ಗೊತ್ತೇ ಇರ್‍ಲಿಲ್ಲ."
"ಎಂ. ಎಲ್. ಎ. ಮಾಯಣ್ಣ ಇಲ್ವೆ? ಆತ ನಮ್ಮ ಚಿಕ್ಕಪ್ಪನ ಮಗ.”
"ಓ....”
ಎರಡು ತಟ್ಟೆಗಳಲ್ಲಿ ಎರಡೆರಡು ದೋಸೆ, ಜತೆಗೆ ಚಟ್ಣಿ, ಬಂದುವು. ನೀರನ್ನೂ
ಸುನಂದಾ ತಂದಳು.
“ಸರಿಯಾದ ಹೊತ್ನಲ್ಲಿ ಹಾಜರಾದ ಹಾಗಾಯ್ತು ನಾನು!" ಎಂದರು ಗೌಡರು.
"ತಗೊಳ್ಳಿ, ತಗೊಳ್ಳಿ," ಎಂದು ಜಯದೇವ ನಸುನಗುತ್ತ.