ಈ ಪುಟವನ್ನು ಪ್ರಕಟಿಸಲಾಗಿದೆ

೫೨

ನಾಸ್ತಿಕ ಕೊಟ್ಟ ದೇವರು

ಮಲ್ಲಿಯೂ ಒಡತಿಗೆ ಧೈರ್ಯ ಹೇಳಿದಳು.
ಹೊರಗಿನ ದೀಪಗಳೆಲ್ಲ ಮತ್ತೆ ಆರಿದುವಾದರೂ ವೀಣಾ ತಮ್ಮ ಮಲಗುವ ಕೊಠಡಿಯ ಬೆಳಕನ್ನು ಹಾಗೆಯೇ ಇರಗೊಟ್ಟರು. ಭದ್ರವಾಗಿ ಕಣ್ಣ ಮುಚ್ಚಿ ಮಲಗಿದರು. ಅವರ ಶರೀರ ಒಂದೇ ಸಮನೆ ಕಂಪಿಸಿತು. ಸೀರೆ, ಹಾಸಿಗೆಯ ಮೇಲುಹೊದಿಕೆ ಎಲ್ಲವೂ ಬೆವರಿನಿಂದ ತೊಯುಹೋದವು.
ಈ ಸಲ ಹತ್ತಿರದಿಂದಲ್ಲ, ದೂರದಿಂದ ಕರ್ಕಶ ಕೂಗುಗಳು ಕೇಳಿಸಿದುವು. ಬಹಳ ದೂರದಿಂದ ಕಲ್ಲುಗಳೂ ಸದ್ದು ಮಾಡಿದುವು.
ಬೆಳಗಿನವರೆಗೂ ವೀಣಾ ನಿದ್ರಿಸಲಿಲ್ಲ, ಬೆಳಗಾದ ಮೇಲೂ ಅವರಿಗೆ ನಿದ್ದೆ ಬರಲಿಲ್ಲ.
ಹಿತ್ತಲಮೂಲೆಯ ಗುಡಿಸಲಲ್ಲಿ ಮಲಗುತ್ತಿದ್ದ ಸಿದ್ಧನಿಗೂ ಏನೋ ಸದ್ದು ಕೇಳಿಸಿತಂತೆ. ತನಗೂ ಒಮ್ಮೆ ಎಚ್ಚರವಾಯಿತು ಎಂದ ನಂಜಪ್ಪ .
ನಾಗಪ್ಪ ಮೊತಲೂ ನಂಜಪ್ಪನೆದುರು, ಬಳಿಕ ಅಮಾವರೆದುರು, ತನ್ನ ಸಂದೇಹಗಳನ್ನು ತೋಡಿಕೊಂಡ. ಇದೆಲ್ಲಾ ಭೂತ ಚೇಷ್ಟೆಯೇ ಇರಬೇಕೆಂಬ ಶಂಕೆ ಅವನನ್ನು ಬಾಧಿಸಿತ್ತು.
ಸಾಹೇಬರಿಗೆ ಸುದ್ದಿ ಮುಟ್ಟಿಸಬೇಕೆಂದು ವೀಣಾ ಕಾತರಗೊಂಡರು.
ಅವರು ಯಾವ ಹಳ್ಳಿಲವರೋ ಏನೋ! ಅಲ್ದೆ, ಇನ್ನೂ ಒಂದು ವಿಸ್ಯ —” ಎಂದು ನಾಗಪ್ಪ ರಾಗವೆಳೆದ.
ಭೂತಚೇಷ್ಟೆಯೇ ನಿಜವೆಂದಾದರೆ, ಹಾಗೆ ಹೇಳಿ ಕಳುಹಿಸುವುದರಿಂದ ಅನಿಷ್ಟವೇ ಹೆಚ್ಚು, ಭೂತಕ್ಕೆ ಸಿಟ್ಟು ಬರಬಹುದು. ಕಚೇರಿಗೆ ಈ ಸಂಗತಿ ತಿಳಿಸುವೋದು ಸರಿಯಲ್ಲ .
ಇವತ್ತೊಂದು ರಾತ್ರಿ ನೋಡಾನ ಅಮ್ಮಾವ್ರೆ.. ಭೂತೆದ್ದೇ ನಿಜಾ೦ತಾದರೆ ನಾಳೆ ಶಾ೦ತಿ ಮಾಡಾನ. ಭೂತಕ್ಕೇನು ? –ಅದರಪ್ಪನಿಗೆ ನಾನು ಬುದ್ದಿ ಕಲಿಸ್ತಿನಿ.”
ಎಲ್ಲರೂ ಎಚ್ಚರವಿದ್ದು ರಾತ್ರಿ ಅದು. ನಾಗಪ್ಪ ಟಾರ್ಚನ್ನು ಹಿಡಿದು ಗಸ್ತಿ ನಡಸಿಯೇ ಇದ್ದ, ಹನ್ನೊಂದು ದಾಟಿದ ಮೇಲೆ ಹಿಂದಿನ ಇರುಳಿನ ಘಟನೆಗಳ ಪುನರಾವರ್ತನೆಯಾಯಿತು.
ವೀಣಾ ಚೀರಿಕೊಳ್ಳತೊಡಗಿದಂತೆ ನಾಗಪ್ಪ ಧಾವಿಸಿ ಬಂದ. ನಂಜಪ್ಪನೂ ಧೈರ್ಯಮಾಡಿ ಅಡುಗೆ ಮನೆಯ ಬಾಗಿಲು ತೆರೆದು ಓಡಿಬಂದ.