ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(38 ಪಂಚತಂತ್ರ ಕಥೆಗಳು. ಸೇರಿ ಕಡೆಯಲ್ಲಿ ಯಾವಾಗಲಾದರೂ ಕೆಟ್ಟು ಹೋಗುವುದು ಸಿದ್ದವು, ಈಗ ಸೇವೆಗೆ ನೀನು ಬರುತ್ತಲೇ ತೀಕ ವಾದ ದೊಡ್ಡ ಕೆರೆಗಳಿಂದ ನಿನ್ನನ್ನು ಕದಲದಂತೆ ಹಿಡಿದು ನಿನ್ನ ಕಂರಕ್ತವನ್ನು ಮುಂಚೆ ತಾನು ಕುಡಿದು ತರುವಾಯ ತನ್ನ ಬಳಿಯಲ್ಲಿ ಇರುವವರಿಗೆಲ್ಲಾ ನಿನ್ನ ಮಾಂಸ ವನ್ನು ಹಂಚಿ ಕೊಡಬೇಕೆಂದು ಮೃಗೇಂದ್ರನು ನಿಶ್ಚನಿಕೊಂಡು ಇದ್ದಾನೆ. ಈ ತಾತ್ಪರ್ಯ ಆತನಿಗೆ ಇಂದು ಹುಟ್ಟಿದುದ ಬಹುದಿ ನವಾಗಿ ಉಂಟು. ನಾನು ಮುಂಚೆ ನಿನಗೆ ಮಾತುಕೊಟ್ಟು ನಿನ್ನನ್ನು ಊಳಿಗದಲ್ಲಿ ಇಟ್ಟವನಾದುದರಿಂದ, ಈ ಸಂಗತಿಯನ್ನೆಲ್ಲಾ ನಿನಗೆ ತಿಳಿಸ ಲಿಕ್ಕೆ ಬಂದೆನು; ನಿನಗೆ ಮನಸ್ಸು ಬಂದ ಮಾರ್ಗವನ್ನು ನೋಡಿಕೊ ಎನಲು; ಸಂಜೀವನಕನು ಬಹಳ ದುಃಖಿತನಾಗಿ ಸ್ವಲ್ಪ ಹೊತ್ತು ಸುಮ್ಮ ನಿದ್ದು ಬಳಿಕ ದಮನಕನನ್ನು ನೋಡಿ ಇಂತೆಂದನು. Sanjivaka's thoughts on the subject. ಈ ಲೋಕದಲ್ಲಿ ಹಲವರು ಅರಸರು ಅಪಾತ್ರರನ್ನು ಪೋಷಿಸು ವರು, ಲೋಭಿಯಾದವನಿಗೇ ಧನವು ಸೇರುವುದು, ಮೇಘವು ವಿಶೇಷ ವಾಗಿ ಸಮುದ್ರದಲ್ಲಿ ವರ್ಪಿಸುವುದು. ತಪ್ಪಿಲ್ಲದೆ ಸೇವಕರ ಮೇಲೆ ಕೋಪಿಸಿಕೊಳ್ಳುವ ಅರಸರ ಮನಸ್ಸನ್ನು ಯಾರು ಸಂತೋಷ ಪಡಿಸ ಬಲ್ಲರು ? ಕಾರಣವಿದ್ದು ಕೋಪಿಸುವ ಅರಸನಾದರೆ ಆತನಲ್ಲಿ ಸೇವಿಸ ಬಹುದಲ್ಲದೆ ಕಾರಣವಿಲ್ಲದೆ ತಪ್ಪುಗಳ ಹುಡುಕುತ್ತಿರುವ ಅರಸನನ್ನು ಸೇವಿಸಲಿಕ್ಕಾದೀತೇ ? ನಮ್ಮ ಪಿಂಗಳಕನು ಅನೃರ ಮಾತನ್ನು ಕೇಳು ವನೇ ಹೊರತು ಸ್ಪಬುದ್ದಿ ಯಿಂದ ನಡೆಯುವವನಲ್ಲ. ವೈದ್ಯನೂ ವಿದ್ಯಾ೦ ಸನೂ ಮಂತ್ರಿಯ 'ಈ ಮೂವರೂ ಯಾವ ಅರಸನಿಗೆ ಇಚ್ಚಕದ ಮಾತುಗಳನ್ನು ನುಡಿಯುತ್ತಿರುವರೋ, ಆ ಅರಸನು ಆರೋಗ್ಯವನ್ನೂ ಧರ್ಮವನ್ನೂ ಬೊಕ್ಕಸವನ್ನೂ ಶ್ರೀಘ್ರವಾಗಿ ಹೋಗಲಾಡಿಸಿಕೊಳ್ಳು ವನು, ಈ ಅರಸನಿಗೆ ನಾನು ಕೇಡಕೊರಲಿಲ್ಲ. ನನ್ನಲ್ಲಿ ನಿರ್ನಿಮಿತ್ತ ವಾಗಿ ಈತನು ಅಪಕಾರವೆಣಿಸುತ್ತಾನೆ. ಗುಣವಂತರೊಂದಿಗೆ ಸೇರಿದ ಪುರುಷನು ಗುಣವಂತನೇ ಆಗುತ್ತಾನೆ; ದುರ್ಗುಣಿಗಳೊಂದಿಗೆ ಕೂಡಿದರೆ