ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೨

೧೦೫


ದೃಶವಾದ ಅನುರಾಗದಿಂದ ಕಾಪಾಡುತ್ತಲಿರುವ ಶಂಬರನ ವಿಷಯದಲ್ಲಿ ನೀನು ಈರೀತಿಯಲ್ಲಿ ನಡೆದುಕೊಳ್ಳುವುದು ಯಾವ ಧರ್ಮ?
ಕಾಮಮೋಹಿನಿ-(ಆತ್ಮಗತ) ಆಹಾ ! ಪಾಪಿ ವಿಧಿಯೇ ! ನನ್ನ ಪಾಣಕ್ಕಿಂತಲೂ ಹೆಚ್ಚಾದ ಪರಂತಪನನ್ನು ಕರೆದುಕೊಂಡೆಯಾ? ನನ್ನನ್ನು ಏತಕ್ಕೆ ಉಪೇಕ್ಷಿಸಿಬಿಟ್ಟೆ? ಪರಂತಪನು ಒಂದು ವೇಳೆ ಮದುವೆಮಾಡಿ ಕೊಂಡು ಇದ್ದರೂ ಇರಬಹುದು. ಮೊದಲನೆಯ ಹೆಂಡತಿಯು ಸತ್ತಳೆಂದು ತಿಳಿದುಕೊಂಡು ನನ್ನನ್ನು ವಿವಾಹ ಮಾಡಿಕೊಂಡಿರಬಹುದು. ಅವಳು ಜೀವಂತಳಾಗಿದ್ದುದನ್ನು ನೋಡಿ ಸತ್ಯಶರ್ಮನ ಮನೆಯಲ್ಲಿದ್ದಾಗ ನನಗೆ ತಲುಪಿದ ಕಾಗದವನ್ನು ಬರೆದು ಹೊರಟುಹೋಗಿರಬಹುದು. ಆತನ ಎಂದಿಗೂ ದುರಾತ್ಮನಲ್ಲ. ಸತ್ತಳೆಂದು ತಿಳಿದುಕೊಂಡಿದ್ದ ಹೆಂಡತಿಯನ್ನು ಪರಿತ್ಯಾಗ ಮಾಡಿ ನನ್ನಲ್ಲಿ ಅನುರಕ್ತನಾಗಿದ್ದರೆ, ಅಂಥ ತಪ್ಪನ್ನು ಅವನ ಮೇಲೆ ಹೊರಿಸಬಹುದು. ನನ್ನನ್ನು ಬಿಟ್ಟು ಮೊದಲನೆಯ ಹೆಂಡತಿಯ ಪಕ್ಷವಾಗಿ ಅವನು ಹೊರಟು ಹೋದದ್ದು, ಅವನು ಸತ್ಯವ್ರತನೆಂದು ವ್ಯಕ್ತಮಾಡುವುದಿಲ್ಲವೆ? ಅಂಥ ಮಹಾತ್ಮನನ್ನು ದುರಾತ್ಮನೆಂದು ಹೇಳತಕ್ಕ ಈ ದುರ್ಮತಿಯು ಚಂಡಾಲಿಯಲ್ಲವೆ? (ಪ್ರಕಾಶ) ಹಾಗಾದರೆ, ಪರಂತಪನು ಸತ್ತುಹೋದನೇ?
ದುರ್ಮತಿ - ಅವನು ಸತ್ತು ಬಹಳ ದಿವಸವಾಯಿತು. ಅವನ ಯೋಚನೆಯನ್ನು ಬಿಡು. ನಿನ್ನಲ್ಲಿ ಅನ್ಯಾದೃಶವಾದ ಅನುರಾಗವನ್ನಿಟ್ಟಿರತಕ್ಕ ಶಂಬರನನ್ನು ವರಿಸಿ ಸುಖವಾಗಿ ಬಾಳು.
ಕಾಮಮೋಹಿನಿ- ಎಲೆ ದುರ್ಮತಿಯೇ! ನಿನ್ನ ದುಷ್ಟವಚನಗಳು ನನ್ನ ಕಿವಿಗೆ ಶಲ್ಯಪ್ರಾಯಗಳಾಗಿವೆ. ಪರಂತಪನು ಸತ್ತಿರುವುದು ನಿಜವಾದರೆ, ನಾನು ವಿತಂತುವಾದೆನು. ನಿಜವಾದ ಪತಿವ್ರತೆಯರು ದುಷ್ಟ ಸ್ತ್ರೀಯರಂತೆ ಭೋಗಾಕಾಂಕ್ಷೆಯಿಂದ ಮತ್ತೊಬ್ಬ ಪತಿಯನ್ನು ವರಿಸುವುದಿಲ್ಲ. ಶಂಬರನು ನನ್ನ ಪಾತಿವ್ರತ್ಯವನ್ನು ಕೆಡಿಸಬೇಕೆಂಬ ಭಾವನೆಯನ್ನು ಇಟ್ಟು ಕೊಂಡಿದ್ದರೆ, ಅಂಥ ಕೆಟ್ಟ ಯೋಚನೆಗೆ ತಕ್ಕ ಫಲವನ್ನು ಶೀಘ್ರದಲ್ಲಿಯೇ ಅನುಭವಿಸುವನು. ಇದಲ್ಲದೆ, ಮಹಾತ್ಮರಿಗೆ ಅಕಾಲಮರಣವು ಸಂಭವಿಸುವುದಿಲ್ಲ. ಪರಂತಪನು ಸತ್ತಿರುವನೆಂದು ನಾನು ನಂಬಲಾರೆನು, ದೈವಯೋಗದಿಂದ