ಈ ಪುಟವನ್ನು ಪ್ರಕಟಿಸಲಾಗಿದೆ



೧೧೨

ಪರಂತಪ ವಿಜಯ


ಗೊಂಡು ಇಲ್ಲ. ನೀನೂ ನಾನೂ ಪಡುತ್ತಲಿರುವ ಕಷ್ಟಗಳು ಅವನಿಗೆ ತಿಳಿಯದೆ ಇಲ್ಲ. ಇದಕ್ಕೆ ತಕ್ಕ ಪ್ರತೀಕಾರವನ್ನು ಅವನು ಮಾಡದೆ ಹೋಗ ತಕ್ಕವನಲ್ಲ. ಈ ಶಂಬರನು ತನ್ನ ಪಾತಕಕ್ಕೆ ಅನುರೂಪವಾದ ಶಿಕ್ಷೆ ಯನ್ನು ಶೀಘ್ರದಲ್ಲಿಯೇ ಹೊಂದುವನು.
ತಂದೆ- ಎಲೈ ಮಗುವೇ! ದೇವರಲ್ಲಿ ಈ ವಿಧವಾದ ನಂಬಿಕೆಯು ಹಾಗಿರಲಿ. ಈ ದುರಾತ್ಮನಾದ ಶಂಬರನ ಇಷ್ಟಾರ್ಥ ಪರಿಪೂರ್ತಿಯನ್ನು ಮಾಡುವುದಕ್ಕೆ ನೀನು ಒಪ್ಪದಿದ್ದರೆ, ನನ್ನನ್ನು ಅವನು ನಿನ್ನ ಮುಂದುಗಡೆ ಯಲ್ಲಿಯೇ ಕೊಲ್ಲತಕ್ಕ ಸಂಕಲ್ಪವನ್ನು ಮಾಡಿಕೊಂಡಿದ್ದಾನೆ. ಇದು ಶೀಘ್ರದಲ್ಲಿಯೇ ನಡೆಯುವುದು.
ಕಾಮಮೋಹಿನಿ - ಎಲೈ ತಂದೆಯೆ ! ಹುಟ್ಟಿದವರು ಎಂದಾದರೂ ಒಂದು ದಿವಸ ಸಾಯಲೇಬೇಕು. ಕೆಲವು ದಿವಸಗಳ ಮುಂಚೆಯೇ ಸಾಯುವುದರಿಂದ ಬಾಧಕವೇನು? ಶಂಬರನು ಅತ್ಯುತ್ಕಟವಾದ ಪಾಪವನ್ನು ಮಾಡಲಾರಂಭಿಸಿರುವನು ಇಂಥ ಪಾಪಗಳಿಗೆ ಕೂಡಲೆ ಶಿಕ್ಷೆಯಾಗುವ ಸಂಭವವೂ ಉಂಟು. ಹಾಗಾಗದ ಪಕ್ಷದಲ್ಲಿ, ಈ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣಭೂತನಾಗಿ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗಳನ್ನು ಮಾಡತಕ್ಕ ಈಶ್ವರನು ಇಲ್ಲವೆಂಬುದಾಗಿಯೇ ಗೊತ್ತಾಗುವುದು. ಅಂಥ ಈಶ್ವರನಿಲ್ಲದ ಪ್ರಪಂಚವು ನಮಗೆ ಆವಶ್ಯಕವಿಲ್ಲ. ಈ ದೇಹವನ್ನು ನಿರ್ಲಕ್ಷವಾಗಿ ಬಿಟ್ಟು, ಈ ಕಷ್ಟಗಳನ್ನು ತಪ್ಪಿಸಿಕೊಳ್ಳೋಣ.
ತಂದೆ-ಪಾಪಿ ವಿಧಿಯು ನಮಗೆ ಅದಕ್ಕೂ ಅವಕಾಶವನ್ನು ಕೊಟ್ಟಿಲ್ಲ. ನೀನು ಈ ರತ್ನಾಕರಕ್ಕೆ ತರಲ್ಪಟ್ಟ ಮೇಲೆ, ನನ್ನ ಕಾಲು ಬೇಡಿಗಳು ತೆಗೆಯಇಟ್ಟುವು. ಕೈಬೇಡಿಗಳು ಇನ್ನೂ ಹಾಗೆಯೇ ಇವೆ. ಆತ್ಮಹತ್ಯವನ್ನು ಮಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ. ನೀನು ಇವನ ಇಷ್ಟಾರ್ಥವನ್ನು ನಡೆಸದಿದ್ದರೆ, ಇವನು ನನ್ನನ್ನು ಕೊಲ್ಲುವುದಾಗಿ ಸಂಕಲ್ಪ ಮಾಡಿರುವನಷ್ಟೆ ! ಇದು ನನ್ನ ಭಾಗ್ಯವೇ ಸರಿ. ಆದರೆ, ನನ್ನ ಅನಂತರ ನಿನ್ನ ಗತಿ ಯೇನಾಗುವುದೋ ಎಂಬ ಯೋಚನೆಯೊಂದು ಮಾತ್ರ ನನ್ನನ್ನು ಬಾಧಿಸುವುದು.