ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೬

೫೩


ವಾದ ರತ್ನವನ್ನು ಬಡವರಾದ ನಮ್ಮ ಆಶ್ರಯದಲ್ಲಿಡುವುದಕ್ಕಿಂತ ಎಲ್ಲಾ ಭಾಗದಲ್ಲಿಯೂ ಅನುರೂಪನಾದ ನೀನು ಶೀಘ್ರದಲ್ಲಿ ವಿವಾಹಮಾಡಿ ಕೊಂಡು ಅನಾಥಳಾದ ಈಕೆಯನ್ನು ಸನಾಥಳ ನ್ನಾಗಿ ಮಾಡುವುದು ಸಂತೋಷಕರವೆಂದು ನಾನು ಕೋರುತ್ತೇನೆ.
ಪರಂತಪ - ನಿಮ್ಮ ಪ್ರಾರ್ಥನೆಗೆ ನಾನು ಪ್ರತಿ ಹೇಳುವುದಿಲ್ಲ; ಆದರೆ, ವಿವಾಹಕ್ಕೆ ಸರಿಯಾದ ಸಂದರ್ಭಗಳ ಕಾಲವೂ ಇನ್ನೂ ಒದಗಿಬಂದಿಲ್ಲ. ಇದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಂಡು ಈ ಕಾರ್ಯವನ್ನು ನೆರವೇರಿಸಬೇಕಾಗಿದೆ.
ಸತ್ಯಶರ್ಮ--ಮಾಧವನ ಆಸ್ತಿಯು ನಿನಗೆ ಉಯಿಲು ಬರೆಯಲ್ಪಟ್ಟಿದೆ ಯೆಂದು ಕೇಳುತ್ತೇವೆ; ಇದು ವಾಸ್ತವವೆ ?
ಪರಂತಪ - ವಾಸ್ತವ; ಈತನ ಮನೆ ಮಠ ಮೊದಲಾದ ಆಸ್ತಿಗಳನೆಲ್ಲ ಸ್ವಾಧೀನಪಡಿಸಿಕೊಂಡು ಅನಂತರ ಈ ವಿವಾಹವನ್ನು ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದ್ದೇನೆ.
ಸತ್ಯಶರ್ಮ-ಮಾಧವನ ಆಸ್ತಿಯು ಅಪಾರವಾದುದು; ಆತನ ಮನೆಯ ಅರಮನೆಗೆ ಸಮಾನವಾದುದು. ಆದಾಗ್ಯೂ ಇದು ಅಪೇಕ್ಷಣೀಯವಾದು ದಲ್ಲ. ಈ ಆಸ್ತಿಯನ್ನು ಹೊಂದಿದವರು ಕ್ಷೇಮವಾಗಿಯೂ ಸೌಖ್ಯವಾಗಿಯ ಇರುವುದು ಕಷ್ಟ. ನನ್ನ ಅನುಭವದಲ್ಲಿ, ಈ ಆಸ್ತಿಯನ್ನು ಹೊಂದಿದವರೆಲ್ಲರೂ ಬಹು ಕಷ್ಟಪಟ್ಟಿದ್ದಾರೆ. ಅಂಥ ಕಷ್ಟಗಳೇನೂ ನಿನಗೆ ಬಾರದಿರಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.
ಪರಂತಪ-ಮಾಧವನ ಗೃಹಾರಾಮಗಳ ವಿಷಯದಲ್ಲಿ ನಿನ್ನ ಹಾಗೆಯೇ ಅನೇಕರು ಅನೇಕ ವಿಧವಾಗಿ ಕಥೆಗಳನ್ನು ಹೇಳುವರು. ಇದನ್ನು ನಿನ್ನ ಮುಖದಿಂದ ವಿಶದವಾಗಿ ಕೇಳಬೇಕೆಂದು ನನಗೆ ಕುತೂಹಲವಿದೆ.
ಸತ್ಯಶರ್ಮ-ಹಾಗೆ ಕುತೂಹಲವಿದ್ದ ಪಕ್ಷದಲ್ಲಿ ಹೇಳುವೆನು, ಕೇಳು. ಈ ಮಾಧವನ ಅರಮನೆಯು, ಇಲ್ಲಿಂದ ಅರ್ಧ ಮೈಲಿ ದೂರದಲ್ಲಿ ಪರ್ವತಗಳಿಂದ ಸುತ್ತಲ್ಪಟ್ಟ ಒಂದು ಕಲ್ಲು ಕಟ್ಟಡವಾಗಿದೆ. ಇದು ಸಾವಿರಾರು ವರ್ಷಗಳ ಮುಂಚೆ ಒಬ್ಬ ಪ್ರಬಲನಾದ ಚೋರನು ಕಟ್ಟಿದ ಕಟ್ಟಡವೆಂದು ಹೇಳುತ್ತಾರೆ. ಈ ಕಟ್ಟಡದ ಸುತ್ತಲೂ ಅತ್ಯಂತ ಫಲವತ್ತಾದ ಹತ್ತು ಸಾ